ಮಣಿಪಾಲ: ಮನೆಬಾಗಿಲ ಬಳಿ ಮಲಗಿದ್ದ ನಾಯಿಯನ್ನು ಬೇಟೆಯಾಡಿದ ಚಿರತೆ
ಹೆರ್ಗಾ ಗೋಳಿಕಟ್ಟೆ ಪರಿಸರವಾಸಿಗಳಲ್ಲಿ ಆತಂಕ
ಮಣಿಪಾಲ, ಆ.12: ಚಿರತೆಯೊಂದು ಮನೆಬಾಗಿಲಿಗೆ ಬಂದು ಕಟ್ಟಿ ಹಾಕಿದ್ದ ಸಾಕುನಾಯಿಯನ್ನು ಸಾಯಿಸಿರುವ ಘಟನೆ ಹೆರ್ಗಾ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.
ಗೋಳಿಕಟ್ಟೆಯ ಬಾಲಚಂದ್ರ ಕೆದ್ಲಾಯ ಎಂಬವರ ಮನೆಯಂಗಳಕ್ಕೆ ಆಗಮಿಸಿದ ಚಿರತೆ ಕಳ್ಳ ಹೆಜ್ಜೆಯನ್ನಿಡುತ್ತಾ ಮನೆಯ ಮೆಟ್ಟಿಲಲ್ಲಿ ಮಲಗಿದ್ದ ನಾಯಿಯನ್ನು ಬೇಟೆಯಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆ ಕುತ್ತಿಗೆ ಬೆಲ್ಟ್ ಸಹಿತ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಕೊಂದು ಕೊಂಡೊಯ್ಯಲು ವಿಫಲ ಯತ್ನ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜನನಿಬಿಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
Next Story