ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಲ್ಲಿ ʼಡೈಮಂಡ್ ಪ್ರಿವೀವ್ʼ ಉತ್ಸವಕ್ಕೆ ಚಾಲನೆ
ಉಡುಪಿ : ನಗರದ ವಿಎಸ್ಟಿ ರಸ್ತೆಯ ವೆಸ್ಟ್ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಆ.20ರವರೆಗೆ ಹಮ್ಮಿಕೊಳ್ಳಲಾದ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಡೈಮಂಡ್ ಆಭರಣಗಳಾದ ಮಿಡ್ಲ್ ಈಸ್ಟ್ ಸಂಗ್ರಹವನ್ನು ಲೋಕೋಪ ಯೋಗಿ ಇಲಾಖೆಯ ಕ್ಲಾಸ್ ಒನ್ ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ತುರ್ಕಿಸ್ ಸಂಗ್ರಹವನ್ನು ಉಡುಪಿಯ ಸಿವಿಲ್ ಗುತ್ತಿಗೆದಾರ ಪ್ರೇಮ್ ಶೆಟ್ಟಿ, ಬೆಲ್ಜಿಯಮ್ ಸಂಗ್ರಹವನ್ನು ಉಡುಪಿಯ ಬಲ್ಲಾಳ್ ವುಡ್ ಇಂಡಸ್ಟ್ರೀಸ್ನ ವಿನಯ ಬಲ್ಲಾಳ್, ಫ್ರೆಂಚ್ ಸಂಗ್ರಹವನ್ನು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮೆನೇಜರ್ ಮುಹಮ್ಮದ್ ಹುಸೇನ್ ಅನಾವರಣಗೊಳಿಸಿದರು.
ಗ್ರಾಹಕ ಸ್ನೇಹಿಯರಾಗಿರುವ ಸಿಬ್ಬಂದಿ, ಉತ್ತಮ ವಜ್ರಾಭರಣಗಳ ಸಂಗ್ರಹ ದಿಂದ ಸುಲ್ತಾನ್ ಸಂಸ್ಥೆ ಇಂದು ಮನೆಮಾತಾಗಿದೆ. ವ್ಯಾಪಾರದ ಜೊತೆ ಲಾಭದ ಒಂದಂಶವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಸಂಸ್ಥೆಯು ಜನಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅತಿಥಿಗಳು ಶುಭಹಾರೈಸಿದರು.
ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೀನಲ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸುಲ್ತಾನ್ ಗೋಲ್ಡ್ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಸುಲ್ತಾನ್ ಗ್ರೂಪ್ನ ಉಡುಪಿ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಸೇಲ್ಸ್ ಮೆನೇಜರ್ ದಿನೇಶ್ ರಾವ್, ಅಸಿಸ್ಟೆಂಟ್ ಸೇಲ್ ಮೆನೇಜರ್ ಮುಹಮ್ಮದ್ ಶಾಮೀಲ್ ಖಾದರ್, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.