ಮಣಿಪಾಲ: ಹೊಸಬೆಳಕು ಆಶ್ರಮದಲ್ಲಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಉಡುಪಿ: ಕಾಪು ಪೊಲಿಪು ಖುವ್ವತ್ತುಲ್ ಇಸ್ಲಾಮ್ ಯಂಗ್ಮೆನ್ಸ್ ಅಸೋಸಿಯೇಶನ್ ವತಿಯಿಂದ ಸರಳೇಬೆಟ್ಟುವಿನ ಹೊಳಬೆಳಕು ಆಶ್ರಮದ ನಿವಾಸಿಗಳಿಗೆ ಭೋಜನ ಕೂಟ ಏರ್ಪಡಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಆರಿಫ್ ಕಲ್ಯಾ, ಸಂಸ್ಥೆಯ ಮಾಜಿ ಅಧ್ಯಕ್ಷ ಬಷೀರ್ ಜನಪ್ರಿಯ ಮಾತನಾಡಿ ದರು. ಉಪಾಧ್ಯಕ್ಷ ಶಾಹಿದ್, ಕೋಶಾಧಿಕಾರಿ ಜಲೀಲ್, ಕಾರ್ಯದರ್ಶಿ ನಿಹಾಲ್ ಹಾಗೂ ಜೊತೆ ಕಾರ್ಯದರ್ಶಿ ಮೆಹ ಶೋಕ್, ಆಶ್ರಯಮದ ಸಂಸ್ಥಾಪಕರಾದ ತನುಲಾ ತರುಣ್ ಹಾಗೂ ವಿನಯ ಚಂದ್ರ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.
Next Story