ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಫ್ಲೆಕ್ಸ್: ಪೊಲೀಸರಿಂದ ಕಟ್ಟೆಚ್ಚರ
ಉಡುಪಿ, ಆ.15: ಶಿವಮೊಗ್ಗ ಘಟನೆ ಹಾಗೂ ನಗರದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಭಾವಚಿತ್ರದ ಫ್ಲೇಕ್ಸ್ ಅಳವಡಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ವಿವಿಧೆಡೆ ನಾಕಾ ಬಂಧಿ ವಿಧಿಸಿ ವಾಹನಗಳ ತಪಾಸಣಾ ಕಾರ್ಯ ನಡೆಸಿದರು.
ನಗರದ ಬ್ರಹ್ಮಗಿರಿ ಸರ್ಕಲ್ನಲ್ಲಿ ಸ್ವಾಂತ್ರ್ಯೋತ್ಸವಕ್ಕೆ ಶುಭಾ ಕೋರಿ ಅಳವಡಿಸಿ ರುವ ಪ್ಲೆಕ್ಸ್ನಲ್ಲಿ ಸಾವರ್ಕರ್ ಭಾವಚಿತ್ರ ಹಾಗೂ ಜೈ ಹಿಂದು ರಾಷ್ಟ್ರ ಪದವನ್ನು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸ್ಥಳದಲ್ಲಿ ಬಂದೋಬಸ್ತ್ ಒದಗಿಸಿ, ವಾಹನಗಳ ತಪಾಸಣೆ ನಡೆಸಿದರು. ಸ್ಥಳದಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಹಾಜರಿದ್ದರು.
ಅದೇ ರೀತಿ ಶಿವಮೊಗ್ಗ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಕಲ್ಸಂಕ ಸೇರಿದಂತೆ ಜಿಲ್ಲೆಯ ವಿವಿಧ ಸೂಕ್ಷ್ಮ ಪ್ರದೇಶ ಗಳಲ್ಲಿ ಪೊಲೀಸರು ನಾಕಾ ಬಂಧಿ ವಿಧಿಸಿ ವಾಹನಗಳ ತಾಪಸಣೆ ನಡೆಸಿದರು.
Next Story