ವಿಟ್ಲಪಿಂಡಿ; ಭಕ್ತರಿಗೆ 15 ಸಾವಿರ ಚಕ್ಕುಲಿ ವಿತರಣೆ
ಉಡುಪಿ : ವಿಟ್ಲಪಿಂಡಿ ಮಹೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವ ಹಾಗೂ ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ವೃಂದಾವನಸ್ಥವಾಗಿ ರುವ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿಯವರ ಸ್ಮರಣಾರ್ಥ ಭಕ್ತರಿಗೆ 15 ಸಾವಿರ ಚಕ್ಕುಲಿಯನ್ನು ಇಂದು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಶಿರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ತೀರ್ಥರೂಪರಾದ ಡಾ.ಉದಯ ಸರಳತ್ತಾಯ ಚಾಲನೆ ನೀಡಿದರು. ಉದ್ಯಮಿ ರಂಜನ್ ಕಲ್ಕೂರ, ಬಡಗುಬೆಟ್ಟು ಕೋ- ಆಪರೇಟಿವ್ ಸೊಸೈಟಿಯ ಗೌರವ ವ್ಯವಸ್ಥಾಪಕ ಜಯಕರ್ ಶೆಟ್ಟಿ ಇಂದ್ರಾಳಿ, ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಪೂರ್ವಾಶ್ರಮದ ಸಹೋದರ ಲಾತಾವ್ಯ ಆಚಾರ್ಯ, ಸಮಾಜಸೇವಕ ಕೆ.ಕೃಷ್ಣಮೂರ್ತಿ ಆಚಾರ್ಯ, ಭಾಸ್ಕರ್ ಶೇರಿ ಗಾರ್ ಕಡಿಯಾಳಿ, ಠಾಣಾಧಿಕಾರಿ ನಾರಾಯಣ, ನಾಗರಿಕ ಸಮಿತಿಯ ಕಾರ್ಯ ಕರ್ತರಾದ ವಾಸುದೇವ ಚಿತ್ಪಾಡಿ, ಕೆ.ಬಾಲಗಂಗಾಧರ ರಾವ್, ತಾರಾನಾಥ ಮೇಸ್ತ ಶಿರೂರು ಉಪಸ್ಥಿತರಿದ್ದರು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಕಾರ್ಯಕ್ರಮ ಸಂಯೋಜಿಸಿದರು.