ಕೊಲ್ಕತ್ತಾದಿಂದ ಸೈಕಲ್ನಲ್ಲಿ ಆಗಮಿಸಿದ ಸಾಹಿಲ್ ಝಾಗೆ ಸನ್ಮಾನ
ಉಡುಪಿ, ಸೆ.19: ಮಣ್ಣು ಉಳಿಸಿ ಎಂಬ ಧ್ಯೇಯದೊಂದಿಗೆ ಸುಮಾರು 2000 ಕಿ.ಮೀ. ಸಂಚರಿಸಿ ರವಿವಾರ ಉಡುಪಿಗೆ ಆಗಮಿಸಿದ ಕೋಲ್ಕತ್ತದ 17ರ ಹರೆಯದ ಸಾಹಿಲ್ ಝಾ ಅವರನ್ನು ಜಯಂಟ್ಸ್ ಗ್ರೂಪ್ ಉಡುಪಿ ಮತ್ತು ಬ್ರಹ್ಮಾವರ ಸಹಯೋಗದಲ್ಲಿ ಉಡುಪಿಯ ಕಡಿಯಾಳಿ ಇನಾಯತ್ ಗ್ಯಾಲರಿ ಯಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಣ್ಣಿನ ಉಳಿಸಿ ರೇಖಾಚಿತ್ರಗಳನ್ನು ಉದ್ಘಾಟಿಸ ಲಾಯಿತು. ಜಯಂಟ್ಸ್ ಉಡುಪಿ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಉಪಾಧ್ಯಕ್ಷ ಯಶವಂತ್ ಸಾಲಿಯಾನ್, ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷರು, ಜಯಂಟ್ಸ್ ಬ್ರಹ್ಮಾವರ ಅಧ್ಯಕ್ಷ ಸುಂದರ್ ಪೂಜಾರಿ, ಮಧುಸೂಧನ್ ಹೇರೂರು ಉಪಸ್ಥಿತರಿದ್ದರು.
ಇನಾಯತ್ ಗ್ಯಾಲರಿಯ ಲಿಯಾಕತ್ ಅಲಿ ಸ್ವಾಗತಿಸಿದರು. ರಾಘವೇಂದ್ರ ಕರ್ವಾಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story