ಸೆ.27ರಂದು ಕಾಂಗ್ರೆಸ್ನಿಂದ ಪಾದಯಾತ್ರೆ- ಪ್ರತಿಭಟನೆ
ಉಡುಪಿ, ಸೆ.25: ಮಲ್ಪೆಯಿಂದ ಪರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಹಾಗೂ ಉಡುಪಿ ನಗರಸಭೆಯ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ವಿನೂತನ ರೀತಿಯಲ್ಲಿ ಪಾದಯಾತ್ರೆಯನ್ನು ಸೆ.27ರಂದು ಸಂಜೆ 3.30ಕ್ಕೆ ಹಮ್ಮಿ ಕೊಳ್ಳಲಾಗಿದೆ.
ಕಲ್ಮಾಡಿ ಚರ್ಚ್ ಬಳಿಯಿಂದ ಹೊರಟ ಪಾದಯಾತ್ರೆ ಕರಾವಳಿ ಬೈಪಾಸ್ ಬಳಿ ಅಂತ್ಯಗೊಳ್ಳಲಿದೆ. ಬಳಿಕ ಪ್ರತಿಭಟನಾ ಸಭೆ ನಡೆಯಲಿದೆ. ಉಡುಪಿ ನಗರ ಭಾಗದ ಹೆಚ್ಚಿನ ರಸ್ತೆಗಳು ಹಾಗೂ ಮಲ್ಪೆಯಿಂದ ಪರ್ಕಳದ ವರೆಗಿನ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ನಡೆದಾಡಲು ಕೂಡ ಅಸಾಧ್ಯ ವಾಗಿದ್ದು ಸಾರ್ವ ಜನಿಕರು ಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
Next Story