ಗಂಗೊಳ್ಳಿ ದರ್ಗಾ ವಠಾರ ಸ್ವಚ್ಛಗೊಳಿಸಿ ಸೌಹಾರ್ದತೆ ಮೆರೆದ ಯುವಕರು
ಕುಂದಾಪುರ, ಸೆ.28: ಗಂಗೊಳ್ಳಿಯ ದರ್ಗಾ ವಠಾರವನ್ನು ಬುಧವಾರ ಸ್ವಚ್ಛಗೊಳಿಸುವ ಮೂಲಕ ಗಂಗೊಳ್ಳಿಯ ಪ್ರದೀಪ್ ಮತ್ತು ಗೆಳೆಯರು ಸೌಹಾರ್ದತೆ ಮೆರೆದಿದ್ದಾರೆ.
ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ನ ಪಂಚ ಗಂಗಾವಳಿ ನದಿ ಸಮೀಪದ ಬಚ್ಚು ಪೀರ್ ದರ್ಗಾದ ವಠಾರದಲ್ಲಿ ಹಲವು ವರ್ಷಗಳಿಂದ ಗಿಡ ಗಂಟೆಗಳು ಬೆಳೆದಿದ್ದು, ಇದನ್ನು ಗಂಗೊಳ್ಳಿಯ ನಿವಾಸಿ ಪ್ರದೀಪ್ ಹಾಗೂ ಅವರ ಗೆಳೆಯರು ಸೇರಿ ಸ್ವಚ್ಛಗೊಳಿಸಿದರು. ಈ ರೀತಿಯ ಸೇವೆಯ ಮೂಲಕ ಪ್ರದೀಪ್ ಮತ್ತು ಗೆಳೆಯರು ಸೌಹಾರ್ದತೆ ಯನ್ನು ಮೆರೆದಿದ್ದಾರೆ.
Next Story