ಉಡುಪಿ: ಅ.3ರಂದು ಶಾಂತಿ ನಡೆ- ವಿಚಾರಧಾರೆ ಕಾರ್ಯಕ್ರಮ
ಉಡುಪಿ, ಸೆ.30: ಉಡುಪಿ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಶಾಂತಿ ನಡೆ ಕಾರ್ಯಕ್ರಮವನ್ನು ಅ.3ರಂದು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2.30ಕ್ಕೆ ಉಡುಪಿ ಕಾರ್ಪೊರೇಶನ್ ಬ್ಯಾಂಕ್ ಮ್ಯೂಸಿಯಂ(ಹಾಜಿ ಅಬ್ದುಲ್ಲಾರ ಮನೆ)ನಿಂದ ಅಜ್ಜರಕಾಡು ಗ್ರಂಥಾಲಯದವರೆಗೆ ಶಾಂತಿ ನಡೆ ಮತ್ತು ಸಂಜೆ 4ಗಂಟೆಗೆ ಅಜ್ಜರಕಾಡು ಜಿಲ್ಲಾ ಗ್ರಂಥಾಲಯ ಸಭಾಭವನದಲ್ಲಿ ವಿಚಾರ ಧಾರೆ ಕಾರ್ಯಕ್ರಮ ಜರಗಲಿದೆ.
ಇಲ್ಲಿ ಗಾಂಧಿ ವಿಚಾರ ವೇದಿಕೆಯ ಸಂಸ್ಥಾಪಕ, ಚಿಂತಕ, ಲೇಖಕ ಅರವಿಂದ ಚೊಕ್ಕಾಡಿ ಪ್ರಸಕ್ತ ಸಮಾಜದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಕುರಿತು ಮಾತ ನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story