ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕರಪತ್ರ ಬಿಡುಗಡೆ
ಉಡುಪಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗ ವಾಗಿ ‘ನಿಮ್ಮ ಆರೋಗ್ಯ ಕಾಪಾಡಲು ನಿಮ್ಮ ವಾಹನದ ಆರೋಗ್ಯ ತಪಾಸಣೆ ಮಾಡಿಸಿ’ ಎಂಬ ಕರಪತ್ರವನ್ನು ಬಿಡುಗಡೆ ಕಾರ್ಯಕ್ರಮವು ಇಂದು ಉಡುಪಿ ಮಣಿಪಾಲದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆಯಿತು.
ಕರಪತ್ರವನ್ನು ಬಿಡುಗಡೆಗೊಳಿಸಿದ ಅಪಾರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಮಾತನಾಡಿ, ಪ್ರಕೃತಿಗೆ ನಮ್ಮ ಎಲ್ಲಾ ಆಸೆಗಳನ್ನು ಪೂರೈಸುವಷ್ಟು ಶಕ್ತಿ ಇದೆ. ಆದರೆ ದುರಾಸೆಗಳನ್ನಲ್ಲ. ನಮ್ಮ ಹಿಂದಿನ ಪೀಳಿಗೆ ನಮಗೆ ಏನು ಬಿಟ್ಟು ಹೋಗಿದ್ದಾರೆ. ಅದನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯಗಳು ನಾವು ಮಾಡಬೇಕಾಗಿದೆ. ಈ ವಾಯು ಮಾಲಿನ್ಯ ಮಹಾಸಾಚರಣೆ ಕೇವಲ ಮಾಸಾಚರಣೆಗೆ ಸೀಮಿತವಾಗದೆ ವರ್ಷವಿಡಿ ಈ ಬಗ್ಗೆ ಅರಿವು ಮೂಡಿಸು ವಂತಹ ಕೆಲಸಗಳು ಆಗಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಕಾರಂತ ವಹಿಸಿದ್ದರು. ಮುಖ್ಯ ಅಥಿತಿ ಗಳಾಗಿ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಚೆನ್ನಪ್ಪ, ಮೋಟಾರು ವಾಹನ ಚಾಲಕ ತರಬೇತಿ ಶಾಲೆಗಳ ಸಂಘದ ಅಧ್ಯಕ್ಷ ನೇಮಿರಾಜ್ ಅರಿಗ ಉಪಸ್ಥಿತರಿದ್ದರು.
ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ವಂದಿಸಿದರು. ಪ್ರಾದೇಶಿಕ ಸಾರಿಗೆ ನಿರೀಕ್ಷಕ ಸಂತೋಷ್ ಶೆಟ್ಟಿ ಮೋವನಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಕಚೇರಿ ಆರಣದಲ್ಲಿ ಸಸಿ ನೆಡುವ ಮುಖಾಂತರ ವನ ಮಹೋತ್ಸವ ಆಚರಿಸಲಾಯಿತು.