ಬೈಕಿನಿಂದ ಬಿದ್ದು ಮಹಿಳೆ ಮೃತ್ಯು
ಶಂಕರನಾರಾಯಣ, ಡಿ.3: ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಆಯಾತಪ್ಪಿ ರಸ್ತೆ ಬಿದ್ದು ಮೃತಪಟ್ಟ ಘಟನೆ ಡಿ.2ರಂದು ಬೆಳಗ್ಗೆ ಬೆಳ್ವೆ ಗ್ರಾಮದ ಗೋಳಿಯಂಗಡಿ ಶ್ರೀಬ್ರಾಹ್ಮಿ ಪಾಸ್ಟಪುಡ್ ಅಂಗಡಿಯ ಎದುರುಗಡೆ ನಡೆದಿದೆ.
ಮೃತರನ್ನು ಗಿರಿಜಾ ಎಂದು ಗುರುತಿಸಲಾಗಿದೆ. ಇವರು ಬೈಕಿನಲ್ಲಿ ಹಿಂಬದಿ ಯಲ್ಲಿ ಕುಳಿತು ಗೋಳಿಯಂಗಡಿ ಕಡೆಯಿಂದ ಬೆಳ್ವೆ ಕಡೆಗೆ ಹೋಗುತ್ತಿದ್ದು, ಸವಾರ ಬೈಕ್ನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಗಿರಿಜಾ ಬೈಕಿನಿಂದ ಹಿಮ್ಮುಖ ವಾಗಿ ರಸ್ತೆಯ ಮೇಲೆ ಬಿದ್ದರೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಹಾಲಾಡಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story