ಉಡುಪಿ ಜಿಲ್ಲಾಮಟ್ಟದ ರುಡ್ಸೆಟ್ ಪ್ರಗತಿ ಪರೀಶಿಲನಾ ಸಭೆ
ಬ್ರಹ್ಮಾವರ, ಡಿ.15: ಜಿಲ್ಲಾ ಮಟ್ಟದ ರುಡ್ಸೆಟ್(ಆರ್ ಸೆಟಿ)ಯ ಪ್ರಗತಿ ಪರೀಶಿಲನಾ ಸಭೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾ ಹಣಾಧಿಕಾರಿ ಎಚ್.ಪ್ರಸನ್ನ ಅಧ್ಯಕ್ಷತೆಯಲ್ಲಿ ಇಂದು ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಯತೀಶ್, ಕೆನರಾ ಬ್ಯಾಂಕ್ನ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ಪ್ರಬಂಧಕಿ ಲೀನಾ ಪಿಂಟೋ ಮತ್ತು ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ವಿಭಾಗೀಯ ಪಪ್ರಬಂಧಕ ಶ್ಯಾನುಬೋಗ, ಉಡುಪಿ ಜಿಲ್ಲೆಯ ಅಗ್ರಣಿ ಬ್ಯಾಂಕಿನ ಮುಖ್ಯಪ್ರಬಂಧಕ ಪಿಂಜರ, ಕೃಷ್ಣ ಡೈರಿಯ ಮತ್ತು ಹಾಂಗ್ಯೋ ಐಸ್ಕ್ರೀಂನ ಆಡಳಿತ ನಿರ್ದೇಶಕ ಜಗದೀಶ ಪೈ, ಉಡುಪಿ ಜಿಪಂ ಯೋಜನಾ ನಿರ್ದೇಶಕ ಬಾಬು ಎಂ., ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್, ಉಡುಪಿ ಜಿಲ್ಲೆಯ ಎನ್ಆರ್ಎಲ್ಎಂನ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪ್ರಭಾಕರ ಆಚಾರ್ಯ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರೀಶ, ಬ್ರಹ್ಮಾವರ ಒಎಸ್ಸಿಇಎಸ್ ಕೆನರಾ ಬ್ಯಾಂಕಿನ ಪ್ರಬಂಧಕ ಮನೋಜ, ಉಡುಪಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ, ಆರ್ಥಿಕ ಸಮಾಲೋಚಕ ಮೀರಾ ಭಾಗವಹಿಸಿದ್ದರು.
ಸಭೆಯಲ್ಲಿ ರುಡ್ಸೆಟ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು. ಹೊಸ ಹೊಸ ತರಬೇತಿಗಳನ್ನು ನಡೆಸುವ ಬಗ್ಗೆ ಚರ್ಚೆಗಳನ್ನು ನಡೆಸಿ, ಮುಂದಿನ ತಿಂಗಳುಗಳಲ್ಲಿ ಸಂಜೀವಿನಿ ಸಂಘದ ಸದಸ್ಯರಿಗೆ, ಯುವಕ-ಯುವತಿಯರಿಗೆ ತರಬೇತಿಯನ್ನು ಆಯೋಜಿಸಿ, ಹೆಚ್ಚು ಜನರು ಪ್ರಯೋಜನ ಪಡೆಯು ವಂತಾಗಲಿ ಎಂದು ಸಭೆಯಲ್ಲಿ ತಿಳಿಸಲಾಯಿತು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಲಕ್ಷೀಶ್ ಎ.ಜಿ. ಸಭೆಯ ನಿರ್ವಹಣೆ ಮಾಡಿದರು.