Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಸಾಸ್ತಾನ ಚರ್ಚಿನ ಗೋದಲಿಯಲ್ಲಿ ಮೂಡಿ ಬಂದ...

ಸಾಸ್ತಾನ ಚರ್ಚಿನ ಗೋದಲಿಯಲ್ಲಿ ಮೂಡಿ ಬಂದ ಫೆಲೆಸ್ತೀನ್!

24 Dec 2022 8:20 PM IST
share
ಸಾಸ್ತಾನ ಚರ್ಚಿನ ಗೋದಲಿಯಲ್ಲಿ ಮೂಡಿ ಬಂದ ಫೆಲೆಸ್ತೀನ್!

ಬ್ರಹ್ಮಾವರ: ಕ್ರೈಸ್ತ ಸಮುದಾಯದ ಹಬ್ಬ ಕ್ರಿಸ್ಮಸ್ ಗೆ ಇಡೀ ವಿಶ್ವವೇ ಸಜ್ಜಾಗಿದ್ದು, ಎಲ್ಲಾ ಕಡೆಗಳಲ್ಲಿ ಹಬ್ಬದ ಆಚರಣೆ ಆಕರ್ಷಣೆಯ ಕೇಂದ್ರಬಿಂದುವಾದ ಗೋದಲಿ ನಿರ್ಮಾಣ ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಂತ ಅಂತೋನಿ ದೇವಾಲಯದ ಭಾರತೀಯ ಕಥೊಲಿಕ್ ಯುವ ಸಂಚಾಲನದ ಸದಸ್ಯರು ನಿರ್ಮಿಸಿರುವ ಗೋದಲಿಯಲ್ಲಿ ಯೇಸುವಿನ ಕಾಲದ ಸಂಪೂರ್ಣ ಫೆಲೆಸ್ತೀನ್ ದೇಶದ ಚಿತ್ರಣವನ್ನು ಮೂಡಿಸುವ ಮೂಲಕ ಆಕರ್ಷಕವಾಗಿ ನಿರ್ಮಾಣಗೊಂಡಿದೆ. 

ಚರ್ಚಿನ ಧರ್ಮಗುರು ವಂ. ಸುನೀಲ್ ಡಿಸಿಲ್ವಾರ ಆಕರ್ಷಕ ಪರಿಕಲ್ಪನೆಯೊಂದಿಗೆ  ಐಸಿವೈಎಮ್ ಅಧ್ಯಕ್ಷ ಬ್ರೈಸನ್ ಡಿಸೋಜ ಹಾಗೂ ಇತರ ಸದಸ್ಯರ ಸಹಕಾರದೊಂದಿಗೆ ಸುಮಾರು ಒಂದು ತಿಂಗಳ ಸತತ ತಯಾರಿಯೊಂದಿಗೆ ಆಕರ್ಷಕವಾದ ಗೋದಲಿಯನ್ನು ನಿರ್ಮಿಸಲಾಗಿದೆ. 

ಸಾಸ್ತಾನ ಚರ್ಚಿನಲ್ಲಿ ನಿರ್ಮಾಣಗೊಂಡಿರುವ ಫೆಲೆಸ್ತೀನ್ ದೇಶವನ್ನು ಸಂಪೂರ್ಣವಾಗಿ ಚಿತ್ರಿಸಲಾಗಿದ್ದು ಅಲ್ಲಿನ ಪ್ರಮುಖ ನಗರಗಳಾದ ಸಾಮಾರಿಯಾ, ಜೆರುಸಲೆಂ ಪಟ್ಟಣ, ಗಾಲಿಲೆಯಾ, ನಜರೆತ್, ಸೇರಿದಂತೆ ಹಲವಾರು ನಗರಗಳನ್ನು ಚಿತ್ರಿಸಲಾಗಿದೆ. ಅದರೊಂದಿಗೆ ಮೆಡಿರೇನಿಯನ್ ಸಮುದ್ರ, ನಿರ್ಜೀವ ಸಮುದ್ರ, ಜೊರ್ಡಾನ್ ನದಿ, ಮರುಭೂಮಿ ಹಾಗೂ ಯೇಸು ಕ್ರಿಸ್ತರ ಜನ್ಮ ಸ್ಥಳ ಬೆತ್ಲೆಹೆಮ್ ನಗರವನ್ನು ಕೂಡ ನಿರ್ಮಿಸಲಾಗಿದೆ. 

ಯೇಸು ಜನನದ ದೃಶ್ಯ ಸಾದರ ಪಡಿಸುವ ಗೋದಾಮಿಗೆ ಸುದೀರ್ಘ ಇತಿಹಾಸವಿದೆ. ಕ್ರಿ.ಶ. 1223ರಲ್ಲಿ ಮೊತ್ತ ಮೊದಲ ಬಾರಿಗೆ ಗೋದಲಿ ಪ್ರತಿರೂಪ ಇಟಲಿಯಲ್ಲಿ ರಚನೆಯಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಸಂತ ಫ್ರಾನ್ಸಿಸ್‌ ಅಸ್ಸಿಸಿಯವರು ಯೇಸು ಜನನದ ಈ ದೃಶ್ಯವನ್ನು ರೂಪಿಸಿದವರು. ಅಂದು ಗೋದಲಿಯಲ್ಲಿ ವಿಗ್ರಹಗಳಿಲ್ಲದೇ ಮಾನವರನ್ನೇ ಪಾತ್ರಧಾರಿಗಳಾಗಿ ರೂಪಿಸಲಾಗಿತ್ತು. ಪ್ರಥಮ ಗೋದಲಿಯು ವಿಶೇಷವಾಗಿ ಆಕರ್ಷಿಸಿ ಕ್ರಮೇಣ ಇದು ಕ್ರಿಸ್‌ಮಸ್‌ ಆಚರಣೆಯ ಒಂದು ಅವಿಭಾಜ್ಯ ಅಂಗವಾಗಿ ರೂಪುಗೊಂಡಿತು.

ಗೋದಲಿಯಲ್ಲಿ ಯೇಸುವಿನ ತಂದೆ ಜೋಸೆಫ್‌, ತಾಯಿ ಮರಿಯ, ಬಾಲ ಯೇಸು, ಕುರಿಗಾಹಿಗಳು, ಆಡು-ಕುರಿಗಳು, ದನ-ಕತ್ತೆ, ಒಂಟೆ, ಪೂರ್ವದಿಂದ ಯೇಸುವಿನ ಭೇಟಿಗಾಗಿ ಆಗಮಿಸಿದ ಜ್ಯೋತಿಷಿಗಳು ಹಾಗೂ ದೇವದೂತರ ವಿಗ್ರಹಗಳಿರುತ್ತವೆ. ಗುಡ್ಡ-ಬೆಟ್ಟಗಳು ಹಾಗೂ ಹುಲ್ಲಿನ ಹಾಸು ಸಹಿತ ನೈಸರ್ಗಿಕವಾಗಿ ಎಲ್ಲರನ್ನೂ ಆಕರ್ಷಿಸುವ ಸುಂದರ ರಚನೆ ಇದಾಗಿದೆ.

ಪ್ರತಿವರ್ಷವೂ ಕೂಡ ಗೋದಲಿ ನಿರ್ಮಾಣ ಸಾಮಾನ್ಯವಾಗಿದೆ ಆದರೆ ಜನರಿಗೆ ಯೇಸು ಸ್ವಾಮಿಯವರು ಹುಟ್ಟಿದ ಪ್ಯಾಲೆಸ್ತಿನ್ ದೇಶ ಯಾವ ರೀತಿ ಇದೆ ಎನ್ನುವುದನ್ನು ತೋರಿಸುವ ನಿಟ್ಟಿನಲ್ಲಿ ಈ ಬಾರಿಯ ಗೋದಲಿಯನ್ನು ವಿಶಿಷ್ಠವಾಗಿ ಬೈಬಲ್ ನ ಕಥೆಗಳನ್ನು ಆಧರಿಸಿ ನಿರ್ಮಿಸಲಾಗಿದೆ. ಇಡೀ ಪ್ಯಾಲೆಸ್ತಿನ್ ದೇಶದಲ್ಲಿ ಇರುವ ನಗರಗಳ ಪರಿಚಯವನ್ನು ನೀಡಲು ಪ್ರಯತ್ನಿಸಲಾಗಿದ್ದು ಅತ್ಯುತ್ತಮವಾಗಿ ಗೋದಲಿ ಮೂಡಿ ಬಂದಿದೆ
- ವಂ.ಸುನೀಲ್ ಡಿ’ಸಿಲ್ವಾ, ಧರ್ಮಗುರುಗಳು ಸಾಸ್ತಾನ ಸಂತ ಅಂತೋನಿ ದೇವಾಲಯ

share
Next Story
X