ಉಡುಪಿ: ರೈಲು ನಿಲ್ದಾಣದಲ್ಲಿ ಸಸ್ಯಾಹಾರಿ ರೈಲು ರೆಸ್ಟೋರೆಂಟ್ ಆರಂಭ
ಉಡುಪಿ: ಪ್ರಯಾಣಿಕರು ಹಾಗೂ ರೈಲ್ವೆ ಬಳಕೆದಾರರ ಬಹುದಿನಗಳ ಬೇಡಿಕೆಯಂತೆ ಉಡುಪಿ ಇಂದ್ರಾಳಿಯಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಸಸ್ಯಾಹಾರಿ ರೈಲು ರೆಸ್ಟೋರೆಂಟ್ ಇಂದು ಉದ್ಘಾಟನೆಗೊಂಡಿತು.
ಕೊಂಕಣ ರೈಲ್ವೆ ಕಾರ್ಪೋರೇಷನ್ನ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷ ಸಂಜಯ್ ಗುಪ್ತ ಅವರು ಉಡುಪಿ ರೈಲು ನಿಲ್ದಾಣದ ಪ್ಲಾಟ್ಫಾರಂ ನಂ.1 ರಲ್ಲಿ ನಿರ್ಮಿಸಲಾದ ಈ ರೆಸ್ಟೋರೆಂಟ್ನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರವಾರ ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಬಾಳಾಸಾಹೇಬ್ ಬಿ.ನಿಕಂ, ಕೊಂಕಣ ರೈಲ್ವೆಯ ಚೀಫ್ ಪರ್ಸನಲ್ ಆಫೀಸರ್ ಅನುರಾಗ್ ಮೆಷರಮ್ ಅಲ್ಲದೇ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Next Story