ಉಡುಪಿ ಜಿಲ್ಲೆಯ ಬುಡಕಟ್ಟು ಜನಾಂಗದವರಿಗೆ ಉಚಿತ ಆರೋಗ್ಯ ತಪಾಸಣೆ
-

ಸಾಂದರ್ಭಿಕ ಚಿತ್ರ (Credit: freepik.com)
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಐ.ಟಿ.ಡಿ.ಪಿ ಇಲಾಖೆ, ಆರೋಗ್ಯ ಇಲಾಖೆ, ಬುಡಕಟ್ಟು ಸಮುದಾಯದ ಸಂಘಟನೆಗಳು ಉಡುಪಿ ಹಾಗೂ ಮಂಗಳೂರಿನ ಯೆನಪೋಯ ಸಂಸ್ಥೆಯ ಸಹಯೋಗ ದೊಂದಿಗೆ ಜಿಲ್ಲೆಯ ಬುಡಕಟ್ಟು ಜನಾಂಗದವರ ಆರೋಗ್ಯ ತಪಾಸಣೆ ನಡೆಸುವ ಸಲುವಾಗಿ ಮಾರ್ಚ್ 4ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಬೆಳಗ್ಗೆ 9ರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 1ರಂದು ಮಣಿಪುರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಣಿಪುರ, ಮೂಡುಬೆಳ್ಳೆ, ಕುರ್ಕಾಲು ಮತ್ತು ಕಟಪಾಡಿ ವ್ಯಾಪ್ತಿಯವರಿಗೆ, ಫೆ.2ರಂದು ಶಿರ್ವಾ ಗ್ರಾಪಂ ಸಭಾಂಗಣದಲ್ಲಿ ಶಿರ್ವಾ ಮತ್ತು ಕುತ್ಯಾರು ವ್ಯಾಪ್ತಿಯವರಿಗೆ, ಫೆ.3ರಂದು ಪಡುಬಿದ್ರಿ ಗ್ರಾಪಂ ಸಭಾಂಗಣದಲ್ಲಿ ಪಡುಬಿದ್ರಿ, ಎರ್ಮಾಳು, ಹೆಜಮಾಡಿ ಮತ್ತು ಪಲಿಮಾರು ವ್ಯಾಪ್ತಿಯವರಿಗೆ, ಫೆ.7ರಂದು ಕಾಪು ಪುರಸಭೆ ಸಭಾಂಗಣದಲ್ಲಿ ಕಾಪು, ಇನ್ನಂಜೆ, ಮಜೂರು ಮತ್ತು ಮುಳೂರು ವ್ಯಾಪ್ತಿಯವರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.
ಫೆ.8ರಂದು ಕೊಲ್ಲೂರು ಗ್ರಾಪಂಸಭಾಂಗಣದಲ್ಲಿ ಕೊಲ್ಲೂರು, ಯಳ್ಜಿತ್, ಮೂರೂರು ಮತ್ತು ಅರೆಶಿರೂರು ವ್ಯಾಪ್ತಿಯವರಿಗೆ, ಫೆ.9ರಂದು ಮುದೂರು ಕೊರಗ ಸಮುದಾಯ ಭವನದಲ್ಲಿ ಮುದೂರು ಹಾಗೂ ಜಡ್ಕಲ್ ವ್ಯಾಪ್ತಿ ಯವರಿಗೆ, ಫೆ.10 ರಂದು ಹೆಮ್ಮಾಡಿ ಗ್ರಾಪಂ ಸಭಾಂಗಣದಲ್ಲಿ ತ್ರಾಸಿ, ತಲ್ಲೂರು, ಗಂಗೊಳ್ಳಿ, ಹೆಮ್ಮಾಡಿ ಮತ್ತು ಕಟ್ಬೆಲ್ತೂರು ವ್ಯಾಪ್ತಿಯವರಿಗೆ, ಫೆ.15ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕೋಟ, ಕೋಟತಟ್ಟು, ಸಾಲಿಗ್ರಾಮ, ಸಾಸ್ತಾನ ಮತ್ತು ವಡ್ಡರ್ಸೆ ವ್ಯಾಪ್ತಿಯವರಿಗೆ, ಫೆ.16ರಂದು ಬಾರ್ಕೂರು ಗ್ರಾಪಂ ಸಭಾಂಗಣದಲ್ಲಿ ಹನೆಹಳ್ಳಿ, ಯಡ್ತಾಡಿ ಮತ್ತು ಬಾರ್ಕೂರು ವ್ಯಾಪ್ತಿಯವರಿಗೆ ಶಿಬಿರ ನಡೆಯಲಿದೆ.
ಫೆ.17ರಂದು ಕಾರ್ಕಳ ಬಂಡೀಮಠ ವಿದ್ಯಾರ್ಥಿನಿಲಯದಲ್ಲಿ ನಕ್ರೆ, ಕಾರ್ಕಳ ಕುಕ್ಕುಂದೂರು ಮತ್ತು ಹಿರ್ಗಾಣ ವ್ಯಾಪ್ತಿಯವರಿಗೆ, ಫೆ.20ರಂದು ಎಲ್ಲೂರು ಗ್ರಾಪಂ ಸಭಾಂಗಣದಲ್ಲಿ ಮುದರಂಗಡಿ, ಎಲ್ಲೂರು, ಬೆಳಪು ಮತ್ತು ಉಚ್ಚಿಲ ವ್ಯಾಪ್ತಿಯವರಿಗೆ, ಫೆ.21ರಂದು ಬೊಮ್ಮರಬೆಟ್ಟು ಗ್ರಾಪಂ ಸಭಾಂಗಣದಲ್ಲಿ ಬೊಮ್ಮರಬೆಟ್ಟು, ಅಂಜಾರು, ಹಿರಿಯಡ್ಕ, ಆತ್ರಾಡಿ, ಹಿರೆಬೆಟ್ಟು, ಗುಡ್ಡೆಂಗಡಿ, ಓಂತಿಬೆಟ್ಟು, ಕುಕ್ಕೆಹಳ್ಳಿ, ಬೆಳ್ಳರ್ಪಾಡಿ, ದೂಪದಕಟ್ಟೆ ಮತ್ತು ಕೋಡಿಬೆಟ್ಟು ವ್ಯಾಪ್ತಿಯವರಿಗೆ, ಫೆ.22ರಂದು ಕೆಂಜೂರು ಕೊರಗ ಸಮುದಾಯ ಭವನದಲ್ಲಿ ಕಳತ್ತೂರು, ನಾಲ್ಕೂರು, ಬೈರಂಪಳ್ಳಿ, ಕೆಮ್ಮಣ್ಣು ಮತ್ತು ಆರೂರು ವ್ಯಾಪಿ ಯವರಿಗೆ ಶಿಬಿರ ನಡೆಯಲಿದೆ.
ಫೆ.23ರಂದು ಆವರ್ಸೆ ಗ್ರಾಪಂ ಸಭಾಂಗಣದಲ್ಲಿ ಆವರ್ಸೆ, ಹೇರಾಡಿ, ಪಾಂಡೇಶ್ವರ ಮತ್ತು ಹೆಗ್ಗುಂಜೆ ವ್ಯಾಪ್ತಿಯವರಿಗೆ, ಫೆ.24ರಂದು ಹಿರೇಬೆಟ್ಟು ಗ್ರಾಪಂ ಸಭಾಂಗಣದಲ್ಲಿ ಮಲ್ಪೆ, ಬಡಗಬೆಟ್ಟು, ಮೂಡುಬೆಟ್ಟು, ಹೆರ್ಗ, ಅಂಬಲಪಾಡಿ, ಶಿವಳ್ಳಿ, ಕಡೆಕಾರು, ಹಿರೇಬೆಟ್ಟು, ಆತ್ರಾಡಿ ಮತ್ತು ಕೆಮ್ಮಣ್ಣು ವ್ಯಾಪ್ತಿಯವರಿಗೆ, ಫೆ.27ರಂದು ಬಸ್ರೂರು ಗ್ರಾಪಂ ಸಭಾಂಗಣದಲ್ಲಿ ಕುಂದಾಪುರ ಪುರಸಭೆ, ಬಸ್ರೂರು, ತೆಕ್ಕಟ್ಟೆ, ಗುಳ್ಳಾಡಿ ಮತ್ತು ಜನ್ನಾಡಿ ವ್ಯಾಪ್ತಿಯವರಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.
ಫೆ.28ರಂದು ಅಂಪಾರು ಗ್ರಾಪಂ ಸಭಾಂಗಣದಲ್ಲಿ ಅಂಪಾರು, ಕಾವ್ರಾಡಿ, ಹೊಸಂಗಡಿ, ಹಳ್ಳಿಹೊಳೆ, ಸಿದ್ಧಾಪುರ ಮತ್ತು ಕರ್ಕುಂಜೆ ವ್ಯಾಪ್ತಿಯವರಿಗೆ, ಮಾರ್ಚ್ 1ರಂದು ಬೈಂದೂರು ಆಶ್ರಮಶಾಲೆಯಲ್ಲಿ ಶಿರೂರು, ಉಪ್ಪುಂದ ಮತ್ತು ತಗ್ಗರ್ಸೆ ವ್ಯಾಪ್ತಿಯವರಿಗೆ, ಮಾ.2ರಂದು ಕಾರ್ಕಳ ಬಂಡೀಮಠ ವಿದ್ಯಾರ್ಥಿ ನಿಲಯದಲ್ಲಿ ಕಾರ್ಕಳ ಪುರಸಭೆ, ಶಿರ್ಲಾಲು, ಪಳ್ಳಿ ಮತ್ತು ರಂಜಾಳ ವ್ಯಾಪ್ತಿಯವರಿಗೆ, ಮಾ.3ರಂದು ನಿಟ್ಟೆ ಗ್ರಾಪಂ ಸಭಾಂಗಣದಲ್ಲಿ ಮುಡಾರು, ನೀರೆ, ಮರ್ಣೆ, ಬೋಳಾ, ನಿಟ್ಟೆ, ಮುದ್ರಾಡಿ, ಶಿರ್ಲಾಲು, ಇನ್ನಾ ಮತ್ತು ಮುಂಡ್ಕೂರು ವ್ಯಾಪ್ತಿಯವರಿಗೆ ಮತ್ತು ಮಾ.4ರಂದು ನಾಡಾ ಕೊರಗ ಸಮುದಾಯ ಭವನದಲ್ಲಿ ಹಕ್ಲಾಡಿ, ಆಲೂರು, ನಾಡಾ ಮತ್ತು ಹೊಸಾಡು ವ್ಯಾಪ್ತಿಯವರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ರಕ್ತದೊತ್ತಡ, ರಕ್ತ ಹೀನತೆ, ಮಧುಮೇಹ, ಬಾಯಿ ಮತ್ತು ದಂತ ಪರೀಕ್ಷೆ, ಗರ್ಭಕಂಠದ ಪರೀಕ್ಷೆ, ಮಕ್ಕಳ ಆರೋಗ್ಯ ತಪಾಸಣೆ, ಸ್ತನದ ಪರೀಕ್ಷೆ (ಮೆಮೋಗ್ರಾಫಿ), ಸಾಮಾನ್ಯ ಸ್ತ್ರೀರೋಗ ಪರೀಕ್ಷೆ, ಕಣ್ಣಿನ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಮತ್ತು ಕಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಆರೋಗ್ಯ ಶಿಬಿರ ಸಂಪೂರ್ಣ ಉಚಿತವಾಗಿದ್ದು, ತಜ್ಞ ವೈದ್ಯರು ತಪಾಸಣೆ ನಡೆಸಿ, ಆರೋಗ್ಯದ ಕುರಿತು ಸಲಹೆ, ಸೂಚನೆ ನೀಡಲಿದ್ದಾರೆ. ಮುಂದಿನ ಎರಡು ವರ್ಷಗಳವರೆಗೆ ಮಂಗಳೂರು ಯೆನಪೋಯ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದ್ದು, ಇದಕ್ಕಾಗಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಔಷಧಿ ಮತ್ತು ಆರೋಗ್ಯ ಕಾರ್ಡ್ ವಿತರಿಸಲಾಗುವುದು.
ಮಹಿಳೆಯರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್ ಬಸ್ನಲ್ಲಿ ತಪಾಸಣಾ ವ್ಯವಸ್ಥೆ ಇದ್ದು, ಪರಿಶಿಷ್ಟ ವರ್ಗದ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಅಶ್ವಿನಿ ಶೆಟ್ಟಿ ಮೊ.ನಂ: 9964372938 ಅನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.