ಉದ್ಯಾವರ: ಬಟ್ಟೆ ಅಂಗಡಿಗೆ ನುಗ್ಗಿ ನಗದು ಕಳವು

ಕಾಪು : ಉದ್ಯಾವರ ಜಯಲಕ್ಷ್ಮೀ ಬಟ್ಟೆ ಅಂಗಡಿಗೆ ಮಾ.15ರಂದು ನಸುಕಿನ ವೇಳೆ ನುಗ್ಗಿದ ಕಳ್ಳರು 60 ಲಕ್ಷ ರೂ. ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅಂಗಡಿಯ ನೆಲಮಹಡಿಯ ವಾಶ್ ರೂಂಗೆ ಅಳವಡಿಸಿದ ಎಕ್ಸಿಸ್ಟ್ ಫ್ಯಾನ್ ಕಿತ್ತು ಅದರ ಮೂಲಕ ಬಟ್ಟೆ ಅಂಗಡಿಗೆ ಒಳಪ್ರವೇಶಿಸಿದ ಕಳ್ಳರು, ನೆಲ ಮಹಡಿಯ ಕ್ಯಾಶ್ ಕೌಂಟರ್ಗೆ ಬಂದು ಅಲ್ಲಿರುವ ಚಿಲ್ಲರೆ ಹಣವನ್ನು ತೆಗೆದುಕೊಂಡರೆನ್ನಲಾಗಿದೆ. ಬಳಿಕ ಮಹಡಿಯ ಕಚೇರಿಗೆ ಬಂದು ಸೇಫ್ ಲಾಕರ್ ತೆರೆದು ಅದರಲ್ಲಿದ್ದ 60 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





