ಮಟ್ಕಾ ದಂಧೆ: ಆರು ಮಂದಿ ವಶಕ್ಕೆ
ಉಡುಪಿ, ಮಾ.30: ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿ ವಿವಿಧೆಡೆ ದಾಳಿ ನಡೆಸಿದ ಪೊಲೀಸರು ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಮಾ.29ರಂದು ಉಡುಪಿ ನಗರ ಅಂಬಾಗಿಲು ಮೀನು ಮಾರುಕಟ್ಟೆ ಬಳಿ ಪ್ರವೀಣ್ ಪೂಜಾರಿ(45) ಎಂಬಾತನನ್ನು 3,200 ರೂ. ನಗದು ಸಹಿತ ಮತ್ತು ಐರೋಡಿಕರ್ ಜಂಕ್ಷನ್ ಬಳಿ ಅರಳಿ ಮರದ ಬದಿ ರಾಮರಾಜ್ ಅರಸ್(43), ಎಂಬಾತನನ್ನು 2,800ರೂ. ನಗದು ಸಹಿತ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ರಾಡಿ ಪೇಟೆಯ ಅಟೋ ರಿಕ್ಷಾ ನಿಲ್ದಾಣದ ಬಳಿ ದಿನೇಶ ದೇವಾಡಿಗ (42) ಎಂಬಾತ ನನ್ನು 1,520ರೂ. ನಗದು ಸಹಿತ ವಶಕ್ಕೆ ಪಡೆದು ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾ.29ರಂದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಯತೀಶ್, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಪೆಬಸ್ ನಿಲ್ದಾಣದ ಬಳಿ ಮಿಥುನ್ ಪೂಜಾರಿ ಎಂಬಾತನ್ನು 1200ರೂ. ನಗದು ಸಹಿತ ಮತ್ತು ಮಾ.30ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂತಾರು ಗ್ರಾಮದ ಕುಂಜಾಲು ಎಂಬಲ್ಲಿ ಜಯ ನಾಯ್ಕ್ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.