Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ವ್ಯಾಲೆಂಟೈನ್ಸ್ ಡೇ ಹದಿಹರೆಯದವರಿಗೆ...

ವ್ಯಾಲೆಂಟೈನ್ಸ್ ಡೇ ಹದಿಹರೆಯದವರಿಗೆ ಮಾತ್ರವಲ್ಲ, ಜೀವನ ಪ್ರೀತಿಸುವ ಎಲ್ಲರಿಗೂ : ಉ.ಕ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ವಾರ್ತಾಭಾರತಿವಾರ್ತಾಭಾರತಿ13 Feb 2024 7:07 PM IST
share
ವ್ಯಾಲೆಂಟೈನ್ಸ್ ಡೇ ಹದಿಹರೆಯದವರಿಗೆ ಮಾತ್ರವಲ್ಲ, ಜೀವನ ಪ್ರೀತಿಸುವ ಎಲ್ಲರಿಗೂ : ಉ.ಕ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಫೆಬ್ರವರಿ 14 ಎಲ್ಲೆಡೆ ಪ್ರೇಮಿಗಳ ದಿನದ ಆಚರಣೆ. ಆದರೆ ಪ್ರೇಮಿಗಳು ಎಂದರೆ ಬರೀ ಹದಿಹರೆಯದವರು ಮಾತ್ರವಲ್ಲ. ಜೀವನದಲ್ಲಿ ನಿರೀಕ್ಷಿತ ಗುರಿ ಇಟ್ಟುಕೊಂಡು ಆ ಗುರಿಯನ್ನು ಸಾಧಿಸಿ , ಆ ಸಾಧನೆಯ ದಾರಿಯಲ್ಲಿ ಇನ್ನಷ್ಟು ಉತ್ಸಾಹದಿಂದ ಮುನ್ನುಗ್ಗುತ್ತಿರುವವವರು, ಜೀವನದ ಸಂಧ್ಯಾ ಕಾಲದಲ್ಲಿದ್ದು ತಮ್ಮ ಗತಕಾಲವನ್ನು ನೆನೆದು, ಆಗ ತಾವು ಮಾಡಿದ ತಮ್ಮ ನಿಷ್ಕಲ್ಮಷ ಕಾರ್ಯಗಳ ಮೂಲಕ ಆತ್ಮತೃಪ್ತಿಯಿಂದ ಜೀವಿಸುತ್ತಿರುವವರು. ದೈಹಿಕ ವೈಫಲ್ಯ ಮತ್ತು ಇತರೇ ಎಲ್ಲಾ ರೀತಿಯ ಸಾಮಾಜಿಕ, ಅರ್ಥಿಕ ಕಷ್ಟಗಳನ್ನು ಮೆಟ್ಟಿನಿಂತು ನೆಮ್ಮದಿಯ ಜೀವನ ನಡೆಸುತ್ತಿರುವ ಎಲ್ಲರಿಗೂ ಪ್ರತಿದಿನವೂ ವ್ಯಾಲೆಂಟೈನ್ಸ್ ಡೇ..

ಹದಿಹರೆಯುವ ಯುವಜನತೆ ತಮ್ಮ ಹುಚ್ಚುಕೋಡಿ ಮನಸ್ಸಿನಿಂದ ಕೇವಲ ಬಾಹ್ಯ ಸೌಂದರ್ಯಗೆ ಮರುಳಾಗದೇ, ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು , ತಮ್ಮ ವಿಧ್ಯಾಭ್ಯಾಸದಲ್ಲಿ , ಶೈಕ್ಷಣಿಕ ಚಟುವಟಿಕೆಗಳಲ್ಲಿ ತನ್ಮಯರಾಗಿ, ಬದುಕಿನಲ್ಲಿ ಉನ್ನತ ಗುರಿಗಳನ್ನು ಇಟ್ಟುಕೊಂಡು ಆ ಗುರಿ ಸಾಧನೆಯ ಕಡೆಗೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು. ಸರಕಾರವು ಯುವ ಜನತೆಯ ಸಮಗ್ರ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ತಿಳಿದುಕೊಂಡು, ಆ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆಯಬೇಕು.

ಸರಕಾರವು ಯುವ ಜನತೆಯ ವಿದ್ಯಾಭ್ಯಾಸಕ್ಕೆ ಅನುಕೂಲವಾಗುಂತೆ ನೀಡಲಾಗುವ ವಿದ್ಯಾರ್ಥಿ ವೇತನ, ಪೇಲೋಶಿಫ್ ಗಳು, ಪಿ.ಎಚ್.ಡಿ ವ್ಯಾಸಾಂಗಕ್ಕೆ ನಿಡುವ ವಿದ್ಯಾರ್ಥಿ ವೇತನಗಳು, ಕಾನೂನು ಪಧವೀಧರರಿಗೆ ನೀಡುವ ಸಹಾಯಧನ, ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ನೀಡುವ ವಿದ್ಯಾರ್ಥಿ ವೇತನಗಳು ಮಾತ್ರವಲ್ಲದೇ ಉದ್ಯೋಗ ದೊರಕಿಸುವ ಉದ್ದೇಶದಿಂದ ಭಾರತೀಯ ನಾಗರೀಕ ಸೇವೆಗಳು , ಕರ್ನಾಟಕ ನಾಗರೀಕ ಸೇವೆಗಳು , ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುವ ಉಚಿತ ತರಬೇತಿಗಳು, ಸಶಸ್ತ್ರ ಪಡೆಗಳಲ್ಲಿ , ಯೂನಿಫಾರ್ಮ್ ಸೇವೆಗಳಲ್ಲಿ ಉದ್ಯೋಗವಕಾಶ ಪಡೆಯಲು ನೀಡುವ ತರಬೇತಿ, ವಿವಿಧ ಕೌಶಲ್ಯಾಭಿವೃದ್ದಿ ತರಬೇತಿ ಯೋಜನೆಗಳ ಸದುಪಯೋಗವನ್ನು ಪಡೆಯಬೇಕು.

ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರೂ ಸಹ ತಮ್ಮ ಕಚೇರಿಗೆ ಆಗಮಿಸುವ ನಾಗರೀಕರನ್ನು ಸೌಹಾರ್ದಯುತವಾಗಿ ಮಾತನಾಡಿಸಿ, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಅವುಗಳಿಗೆ ತಮ್ಮ ಹಂತದಲ್ಲಿ ಸೂಕ್ತ ಪರಿಹಾರ ಒದಗಿಸಿದಲ್ಲಿ , ಸಾರ್ವಜನಿಕರು ತಮಗೆ ನೀಡುವ ಪ್ರೀತಿ, ಗೌರವ ಅಭಿಮಾನಗಳು, ಪ್ರತಿ ನಿತ್ಯದ ತಮ್ಮ ಕೆಲಸ ಕಾರ್ಯಗಳನ್ನು ಹೆಚ್ಚಿನ ಸಂತೋಷದಿಂದ ಮಾಡುವ ಹುಮ್ಮಸ್ಸು ನೀಡುತ್ತವೆ ಅಲ್ಲದೇ ನಿತ್ಯದ ಕೆಲಸ ಕಾರ್ಯಗಳನ್ನು ಅಂದೇ ಮುಕ್ತಾಯಗೊಳಿಸಿದ್ದಲ್ಲಿ ಸಂಜೆ ಮನೆಗೆ ತೆರಳಿದಾಗ ಕುಟುಂಬದೊಂದಿಗೆ ಸಂತೋಷದಿಂದ ಬೆರೆತು ನಿರಾಳವಾಗಿ ಕಾಲ ಕಳೆಯಬಹುದಾಗಿದೆ..

ವ್ಯಾಲೆಂಟೈನ್ಸ್ ಡೇ ಯಂದು ಮೊದಲಿಗೆ ನಮ್ಮನ್ನು ನಾವು ಪ್ರೀತಿಸೋಣ, ನಮ್ಮ ಗುರಿಗಳನ್ನು , ಸಾಧನೆಗಳನ್ನು ಪ್ರೀತಿಸೋಣ, ನಮ್ಮ ಬದುಕಿನಲ್ಲಿ ಯಶಸ್ಸು ಪಡೆಯಲು ಸಹಕರಿಸಿದವನ್ನು, ಕಷ್ಟದಲ್ಲಿದ್ದಾಗ ಬೆಂಬಲ ನೀಡಿದ ಸ್ನೇಹಿತರನ್ನು, ಸದಾ ನಮ್ಮ ಯಶಸ್ಸಿಗೆ ಹಾರೈಸುವ ಪೋಷಕರನ್ನು, ನಮ್ಮ ವೈಫಲ್ಯಗಳಿಗೆ ಸಾಂತ್ವನ ನೀಡುವ, ಸಾಧನೆಗೆ ಬೆನ್ನುಲುಬಾಗಿ ನಿಲ್ಲುವ ಜೀವನ ಸಂಗಾತಿಗಳನ್ನು , ನಮಗಾಗಿ ಈ ಸುಂದರ ಪ್ರಕೃತಿಯನ್ನು ನಿರ್ಮಿಸಿದ ಭಗವಂತನನ್ನು ಪ್ರತಿದಿನವು ತಪ್ಪದೇ ನೆನಯೋಣ, ಪ್ರೀತಿಸೋಣ. ವ್ಯಾಲೆಂಟೈನ್ಸ್ ಡೇ ಯ ಸಂಭ್ರಮ ಒಂದು ದಿನಕ್ಕೆ, ಒಂದು ವಯೋಮಾನಕ್ಕೆ ಸೀಮಿತವಾಗದೇ ಪ್ರತೀ ದಿನವೂ, ಪ್ರತಿಯೊಬ್ಬರಿಗೂ, ಪ್ರತೀ ಕೆಲಸದಲ್ಲೂ ಕಂಡುಬರಲಿ..

ಗುಡಿಸಲಾಗಲಿ ಅರಮನೆಯಾರಲಿ..

ಬಡವನಾಗಲಿ ಶ್ರೀಮಂತನಾಗಲಿ..

ಯಾವುದೇ ದೇಶವಾಗಲಿ, ಭಾಷೆಯಾಗಲಿ..

ಯಾವುದೇ ಜಾತಿಯಾಗಲಿ ಧರ್ಮವಾಗಲಿ..

ಸಕಲ ಜೀವಾತ್ಮಗಳಲ್ಲಿ ಪ್ರೇಮ ನಿತ್ಯ ನೂತನವಾಗಿರಲಿ..ನಿರಂತರವಾಗಿರಲಿ.. ಶಾಶ್ವತವಾಗಿರಲಿ..

share
ವಾರ್ತಾಭಾರತಿ
ವಾರ್ತಾಭಾರತಿ
Next Story
X