ಜಿಗಿಯುವ ಜೇಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ
-

ಮಂಗಳೂರು, ಎ.19: ದಕ್ಷಿಣ ಭಾರತದ ಎರಡು ಪಟ್ಟಿಯ ಜಿಗಿಯುವ ಜೇಡ ‘ಟೆಲಮೋನಿಯ ಡಿಮಿಡಿಯಾಟಾ’ (Telamonia dimidiata) ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇದು ಕೊಂಕಣ ಕರಾವವಳಿಯಲ್ಲಿ ನಡೆದ ಮಹತ್ವದ ಅಧ್ಯಯನವಾಗಿದೆ.
ಅನನ್ಯ ವನ್ಯಜೀವಿ ಸಂಸೋಧನೆಯಲ್ಲಿ ತೊಡಗಿರುವ ಸಂಶೋಧಕ ಜಾವೇದ್ ಅಹ್ಮದ್ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ. ಮೂಡುಬಿದಿರೆ ಮೂಲದ ಪರಿಸರವಾದಿ, ಶಸ್ತ್ರಚಿಕಿತ್ಸಕ ಮತ್ತು ವನ್ಯಜೀವಿ ಉತ್ಸಾಹಿ ಕೃಷ್ಣ ಮೋಹನ್, ನೈಸರ್ಗಿಕವಾದಿ, ಬಿರ್ಡೆರ್, ಲ್ಯಾಂಡ್ರೇಸ್ ಡಾಗ್ ಎಕ್ಸಪರ್ಟ್ ಮತ್ತು ಅಮೆಚೂರ್ ಅರೆಕ್ನಾಲಾಜಿಸ್ಟ್ ರಾಜಶ್ರೀ ಖಲಾಪ್, ನೈಸರ್ಗಿಕ ಮತ್ತು ಮ್ಯಾಕ್ರೊ ವನ್ಯಜೀವಿ ಛಾಯಾಗ್ರಹಣ ಉತ್ಸಾಹಿ ಸೋಮನಾಥ್ ಕುಂಬಾರ್ ಸಿದ್ಧಪಡಿಸಿದ ಸಂಶೋಧನ ಲೇಖನ ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ.
ಭಾರತೀಯ ಜೇಡಗಳ ಅಧ್ಯಯನದಲ್ಲಿ ಆಸಕ್ತರಾಗಿರುವ ರಾಜಶ್ರೀ ಖಲಾಪ್ ಕೊಂಕಣ ಕರಾವಳಿಯುದ್ದಕ್ಕೂ ತನ್ನ ಮನೆಯ ಸುತ್ತಮುತ್ತಲಿರುವ ಉದ್ಯಾನದಲ್ಲಿ ಎರಡು-ಪಟ್ಟೆಯ ಜಿಗಿಯುವ ಜೇಡ ಸೂಕ್ಷ್ಮವಾಗಿ ಹಿಮ್ಮೆಟ್ಟುವಿಕೆಯನ್ನು ಚಿತ್ರೀಕರಿಸಿದ್ದರು. ನಮ್ಮ ಜೇಡಗಳ ಜೀವನ ಬಗ್ಗೆ ಸಾಮಾನ್ಯ ತಿಳುವಳಿಕೆ ಮತ್ತು ಅಧ್ಯಯನ ಕೊರತೆ ಇದೆ ಎಂದು ಗೊತ್ತಾದ ಮೇಲೆ ಖಲಾಪ್ ರಜೆಯಲ್ಲಿ ಕೊಂಕಣ ಕರಾವಳಿಯ ತನ್ನ ಮನೆಗೆ ಹೋದಾಗ ಅತ್ಯಂತ ಶ್ರದ್ಧೆಯಿಂದ ಮೂರು ವಿಭಿನ್ನ ಹೆಣ್ಣು ಎರಡು-ಪಟ್ಟೆಗಳ ಜಿಗಿತಗಾರರ ಹಿಮ್ಮೆಟ್ಟುವಿಕೆಯ ಛಾಯಾಗ್ರಹಣ ಮತ್ತು ರೆಕಾರ್ಡಿಂಗ್ ನಡೆಸಿದರು.
ಎರಡು ಪಟ್ಟಿಯ ಜಿಗಿಜೇಡವು ಮತ್ತೊಂದು ಜೇಡ ಪ್ರಭೇದವನ್ನು ತಿನ್ನುವ ದೃಶ್ಯಗಳನ್ನು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ತಮ್ಮ ದುಬಾರಿಯಲ್ಲದ ಸ್ಮಾರ್ಟ್ಫೋನ್ ಕ್ಯಾಮೆರಾವನ್ನು ಬಳಸಿ ಸೋಮನಾಥ್ ಬಿ.ಕುಂಬಾರ್ ಚಿತ್ರೀಕರಿಸಿದರು.
ಈ ತಂಡವು ಜಂಪಿಂಗ್ ಜೇಡಗಳ ಮೇಲೆ ಜಾಗತಿಕ ಮಟ್ಟದಲ್ಲಿ ಸಂಶೋಧನೆ ಮಾಡುತ್ತಿರುವ ಡಾ. ಡೇವಿಡ್ ಇ. ಹಿಲ್ ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಸಹಯೋಗದಲ್ಲಿ ಕೆಲಸ ಮಾಡುವ ತಜ್ಞರಾದ ಡಾ.ರಿಚರ್ಡ್ ಜೆ. ಪಿಯರ್ಸ್ ಎಂಬ ಪ್ರಮುಖ ಬ್ರಿಟಿಷ್ ಸ್ಪೈಡರ್ ತಜ್ಞರ ಸಹಯೋಗ ಪಡೆದುಕೊಂಡಿತ್ತು.
ಜಂಪಿಂಗ್ ಜೇಡಗಳು ಸ್ಪೈಡರ್ ಕುಟುಂಬದ ಸಾಲ್ಟಿಡಿಡೆಗೆ (salticidae) ಸೇರಿವೆ. 6,115 ದಾಖಲಾದ ಪ್ರಭೇದಗಳು ಮತ್ತು 636 ಜಾತಿಗಳೊಂದಿಗೆ ಜೇಡ ಕುಟುಂಬಗಳ ವರ್ಗೀಕರಣ ಬಹುದೊಡ್ಡದಾಗಿದೆ. ಬೇಟೆಯಾಡುವಾಗ, ಬೆದರಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಅಥವಾ ದೀರ್ಘ ಅಂತರವನ್ನು ಹಾರುವಾಗ ಅವು ಅತ್ಯಂತ ಗಡಿಬಿಡಿಯ ಜಿಗಿತಕ್ಕೆ ಹೆಸರುವಾಸಿಯಾಗಿದೆ.
ಎರಡು-ಪಟ್ಟಿಯ ಜಂಪರ್ಸ್ ಸುಂದರವಾದ ಜೇಡ. ಸುಲಭವಾಗಿ ಗುರುತಿಸಲ್ಪಟ್ಟಿರುವ ಮತ್ತು ಸಾಮಾನ್ಯವಾಗಿ ಕಂಡುಬಂದಿದ್ದರೂ, ಭಾರತದಲ್ಲಿ ಕಂಡು ಬರುವ ಹೆಚ್ಚಿನ ಜೇಡಗಳಂತೆ ಇದನ್ನು ಸರಿಯಾಗಿ ಅಧ್ಯಯನ ಮಾಡಲಾಗಿಲ್ಲ.
ಪ್ರಸ್ತುತ ಅಧ್ಯಯನವು ಈ ಜೇಡ ಜಾತಿಗಳ ಜೀವನ ಪದ್ಧತಿಯ ಅವಲೋಕನ ಸಂಶೋಧನೆಯಾಗಿದೆ. ಜೇಡಗ ನಡವಳಿಕೆಯ ಎರಡು ಅಂಶಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ರಾತ್ರಿಯ ವೇಳೆಯ ತಾತ್ಕಾಲಿಕ ಜೇಡನ ಬಲೆ ಅಥವಾ ಗೂಡು ಕಟ್ಟುವಿಕೆ ಮತ್ತದರ ಬಳಕೆಯನ್ನು ಮತ್ತು ಅದರ ಬೇಟೆಯಾಡುವ ಅಂಶಗಳನ್ನು ದಾಖಲಿಸಲು ಪ್ರಯತ್ನಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದ ಅಲಿಬಾಗ್ ಜಿಲ್ಲೆಯ ನಾಗಾನ್ ಪ್ರದೇಶದಲ್ಲಿ ಈ ಅಧ್ಯಯನಗಳನ್ನು ಹೆಚ್ಚಾಗಿ ಮಾಡಲಾಗಿದೆ. ಈ ಸಂಶೋಧನೆಯ ವಿಸ್ತ್ರತ ವರದಿಯನ್ನು ಅಂತರರಾಷ್ಟ್ರೀಯ ವೈಜ್ಞಾನಿಕ ಜರ್ನಲ್ ‘ಪೆಖ್ಯಾಮಿಯಾ’ (https://peckhamia.com) ನಲ್ಲಿ ಮಾ.25ರಂದು ಪ್ರಕಟಿಸಲಾಗಿದೆ.
ತಮಾಷೆಯ ವಸ್ತುವಾಗಿತ್ತು ಜಿಗಿಜೇಡ
ಎರಡು ಪಟ್ಟಿಯ ಜಿಗಿತಗಾರ ಟೆಲಮೋನಿಯ ಡಿಮಿಡಿಯಾಟಾ ಕುರಿತು ಸ್ವಾರಸ್ಯಕರ ಕತೆಗಳಿವೆ. ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್ಫೋನ್ ಹುಟ್ಟುವ ಮುಂಚೆಯೇ ಈ ತಮಾಷೆಯ ನಕಲಿ ಸಂದೇಶ ಇಮೇಲ್ಗಳಲ್ಲಿ ವೈರಲ್ ಆಗಿತ್ತು. ನಕಲಿ ಸಂದೇಶದಲ್ಲಿ ಓದುಗರು ಅಪಾಯಕಾರಿಯಾದ ಜೇಡನ ಬಗ್ಗೆ ಎಚ್ಚರಿಕೆ ನೀಡಿದ್ದರು.
‘ಇದು ಟಾಯ್ಲೆಟ್ ಸೀಟಿನ ಅಡಿಯಲ್ಲಿ ಅವಿತು ಕುಳಿತು ಮುನುಷ್ಯರನ್ನು ಕಚ್ಚುವ ಮೂಲಕ ವಿಷವನ್ನು ಇಂಜೆಕ್ಟ್ ಮಾಡುತ್ತದೆ’ ಎಂದಿದ್ದವು ಸಂದೇಶಗಳು. ‘ಭಾರತ ಮತ್ತು ಏಷ್ಯಾದ ಇತರ ದೇಶಗಳಿಂದ ಬರುವ ವಿಮಾನಗಳ ಶೌಚಾಲಯಗಳಲ್ಲಿ ಅನೇಕ ಇಂತಹ ಜೇಡಗಳು ಕಂಡುಬಂದಿವೆ’ ಎಂದು ಓದುಗರು ಎಚ್ಚರಿಸಿದ್ದರು. ಆದರೆ, ಅದೆಲ್ಲವು ಸುಳ್ಳಾಗಿತ್ತು.
ಪ್ರಕೃತಿ ಛಾಯಾಗ್ರಾಹಕ ಡಾ.ಕೃಷ್ಣ ಮೋಹನ್ ಇಂತಹ ಫೇಕ್ ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ತನ್ನ ಛಾಯಾಗ್ರಹಣ ಬ್ಲಾಗ್ನಲ್ಲಿ ಈ ಬಗ್ಗೆ ಬರೆದಿರುವ ಅವರು 1999ರಲ್ಲಿ ತಾನು ಮೊದಲ ಬಾರಿಗೆ ಫೇಕ್ ಸುದ್ದಿಯನ್ನು ಎದುರಿಸಬೇಕಾಯಿತು. ಹೆಚ್ಚಿನ ಓದುಗರು ತಕ್ಷಣ ಅದನ್ನು ತಮಾಷೆಯಾಗಿ ಗುರುತಿಸಲು ಸಮರ್ಥರಾಗಿದ್ದರು. ಅನಂತರ ಯಾರೋ ಒಬ್ಬರು ಸಂದೇಶ ಹೊಸದಾಗಿ ಬರೆದು ಎರಡು ಪಟ್ಟೆಯ ಟೆಲಿಮೋನಿಯಸ್ ವಿರುದ್ಧ ದೂರಲಾ ಗಿತ್ತು. ವಾಸ್ತವದಲ್ಲಿ ಇದು ಸಂಪೂರ್ಣವಾಗಿ ನಿರುಪದ್ರವ ಜೇಡ ಎನ್ನುತ್ತಾರೆ ಡಾ. ಕೃಷ್ಣ ಮೋಹನ್.
‘ಜೇಡಗಳ ಅಧ್ಯಯನ ಮಹತ್ವದ್ದು’
ಈ ಪ್ರಭೇದಗಳ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸುವುದರ ಜತೆಗೆ ಇದು ನಮ್ಮ ಮಹಾನ್ ದೇಶದಲ್ಲಿ ಕಂಡುಬರುವ ಜೇಡಗಳ ನೈಸರ್ಗಿಕ ಇತಿಹಾಸ ಮತ್ತು ಪರಿಸರ ವಿಜ್ಞಾನದ ಮಾಹಿತಿಯನ್ನು ಕೂಡ ನೀಡುತ್ತದೆ ಎನ್ನುತ್ತಾರೆ ಸಂಶೋಧಕ ಜಾವೇದ್ ಅಹ್ಮದ್.
‘ಇದು ಕೇವಲ ಪ್ರಾರಂಭವಾಗಿದೆ. ಸಂಶೋಧನೆಯಲ್ಲಿ ನಾವು ಬಹುದೂರ ಸಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ವಾತಾವರಣ ಬದಲಾವಣೆ ಮತ್ತು ಪರಿಣಾಮಗಳು ಕಟು ವಾಸ್ತವ ಆಗಿರುವಾಗ ಇಂತಹ ಜೇಡಗಳ ಅಧ್ಯಯನ ಕೂಡ ಮಹತ್ವ ಪಡೆದುಕೊಳ್ಳುತ್ತದೆ ಎಂದು ಸಂಶೋಧಕ ಜಾವೇದ್ ಅಹ್ಮದ್ ತಿಳಿಸಿದ್ದಾರೆ.



‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.