ಹಿಂದೂ ಮಹಿಳೆಗೆ ಕಿಡ್ನಿ ದಾನ ಮಾಡಲು ಮುಂದೆ ಬಂದ ಮುಸ್ಲಿಂ ಮಹಿಳೆ
ಕೋಮುವಾದಿ ಗಲಭೆಗಳ ಪ್ರಕರಣಗಳ ನಡುವೆ ಒಂದು ಹೃದಯಂಗಮ ಪರಿಸ್ಥಿತಿ ಬೆಳಕಿಗೆ ಬಂದಿದೆ. ಫತೇಪುರ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಕಿಡ್ನಿಯನ್ನು ವರ್ಷಗಳಿಂದ ಜೀವನಕ್ಕಾಗಿ ಹೋರಾಡುತ್ತಿರುವ ಪುಣೆಯ ಹಿಂದೂ ಮಹಿಳಗೆ ದಾನ ಕೊಡುತ್ತಿದ್ದಾರೆ.
40 ವರ್ಷದ ದಾನಿ ಶಂಶದ್ ಬೇಗಂ ಮತ್ತು ಕಿಡ್ನಿ ಪಡೆಯುತ್ತಿರುವ 38 ವರ್ಷದ ಆರತಿ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಕೊಂಡಿದ್ದಾರೆ. ದಾನಿ ಫತೇಪುರ ಜಿಲ್ಲೆಯ ಬಿಂಡ್ಕಿ ತಾಲೂಕಿನ ರಾರಿಬುಜುರ್ಗ್ ಗ್ರಾಮದವರು. ದಾನಿ ತನ್ನೆಲ್ಲ ದಾಖಲೆಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಕೊಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳ ಸಮಿತಿ ಒಪ್ಪಿದಲ್ಲಿ ಅಂಗದಾನವಾಗಲಿದೆ. ಕಿಡ್ನಿ ದಾನ ಪಡೆಯುವವರು ಶಂಶದ್ ಬೇಗಂನ ಯುವ ಸಹೋದರಿ ಪುಣೆ ನಿವಾಸಿ ಜುನೈದಾ ಖಾಟೂನರ ಸ್ನೇಹಿತೆ. ಕಿಡ್ನಿ ವಿಫಲವಾದ ಮೇಲೆ ಮರಣವನ್ನು ಎದುರಿಸುವ ವ್ಯಕ್ತಿಗಳು ಎದುರಿಸುವ ನೋವು ಕಂಡು ಆಘಾತಗೊಂಡೆ. ನನ್ನ ರಕ್ತದ ಗುಂಪು ಆರತಿ ಜೊತೆಗೆ ಹೊಂದಿಕೊಂಡಿದೆ. ಹೀಗಾಗಿ ಅಂಗ ದಾನ ಮಾಡಲು ಸಿದ್ಧಳಾದೆ. ಧರ್ಮಕ್ಕಿಂತ ಮಾನವೀಯತೆ ಮುಖ್ಯ. ಒಬ್ಬಾಕೆಗೆ ಮತ್ತೊಬ್ಬಾಕೆ ಮಾಡುವ ಸಣ್ಣ ತ್ಯಾಗವಿದು ಎನ್ನುತ್ತಾರೆ ಶಂಶದ್ ಬೇಗಂ. ಶಂಶದರ ಪತಿ ಹತ್ತು ವರ್ಷಗಳ ಹಿಂದೆ ತೀರಿಕೊಂಡ ಮೇಲೆ ಅವರು ತಂದೆ ಝಕೀರ್ ಖಾನ್ ಜೊತೆಗೆ ತಮ್ಮ ಹರೆಯದ ಮಗಳ ಜೊತೆಗೆ ರಾರಿಬುಜುರ್ಗ್ ಗ್ರಾಮದಲ್ಲಿ ನೆಲೆಸಿದ್ದಾರೆ.
ಶಂಶದ್ ತನ್ನ ಸಹೋದರಿಯ ಮನೆಗೆ ಪುಣೆಯ ಮಾನಸರೋವರ್ಗೆ ಭೇಟಿ ನೀಡಿದಾಗ ಆರತಿಯನ್ನು ಭೇಟಿಯಾಗಿದ್ದಳು. ಆರತಿ ಕಿಡ್ನಿ ವೈಫಲ್ಯವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಳು. ಎರಡನೇ ಬಾರಿ ಯೋಚಿಸದೇ ತನ್ನ ಕಿಡ್ನಿಯನ್ನು ಆಕೆಗೆ ಕೊಡಲು ಶಂಶದ್ ನಿರ್ಧರಿಸಿದ್ದರು. ನಂತರ ಅವರು ಆಸ್ಪತ್ರೆಗೆ ಹೋಗಿ ದಾನಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಪೂರೈಸಿದ್ದಾರೆ.
ಎಲ್ಲಾ ಪರೀಕ್ಷೆಗಳೂ ಸಕಾರಾತ್ಮಕವಾಗಿ ಬಂತು. ಆಸ್ಪತ್ರೆ ಅಧಿಕಾರಿಗಳು ಇಬ್ಬರ ರಕ್ತದ ಗುಂಪು ಹೊಂದಿರುವುದನ್ನು ಹೇಳಿದ್ದಾರೆ. "ನನ್ನ ಮಗಳಿಗೆ ಕೌನ್ಸಿಲ್ ಮಾಡುತ್ತಾರೆ. ಸರ್ಕಾರಿ ಅಧಿಕಾರಿಗಳ ಒಪ್ಪಿಗೆಯ ಅಗತ್ಯವಿದೆ. ದಾಖಲೆಗಳೆಲ್ಲ ಸಿದ್ಧವಾಗಿದೆ. ಕಿಡ್ನಿಕಸಿಗೆ ಎರಡೂ ಕುಟುಂಬಗಳ ಒಪ್ಪಿಗೆಯಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಫಿದಾವಿತ್ ಕೊಟ್ಟಿದ್ದೇವೆ" ಎನ್ನುತ್ತಾರೆ ಶಂಶದ್ ತಂದೆ ಝಕೀರ್ ಖಾನ್.
ಜಿಲ್ಲಾ ಆರೋಗ್ಯ ಇಲಾಖೆಗೆ ಶಂಶದರ ಅಫಿದಾವಿತ್ ಬಂದಿರುವುದಾಗಿ ಫತೇಪುರದ ಡಾ ವಿನಯ್ ಕುಮಾರ್ ಹೇಳಿದ್ದಾರೆ. ಆರೋಗ್ಯ ನಿರ್ದೇಶನಾಲಯದಿಂದ ಅಂತಿಮ ಒಪ್ಪಿಗೆಗಾಗಿ ದಾಖಲೆಗಳನ್ನು ಕಳುಹಿಸಿಕೊಡಲಾಗಿದೆ.
ಕೃಪೆ: timesofindia.indiatimes.com