-

ಬಿಜೆಪಿಯ ಪ್ರಚಾರದ ವಿಷಯವನ್ನು ಸುದ್ದಿಯನ್ನಾಗಿ ಪ್ರಸಾರ ಮಾಡಿದ 'ಆಜ್ ತಕ್' ಮತ್ತು 'ಇಂಡಿಯಾ ಟಿವಿ'

-

ಹೊಸದಿಲ್ಲಿ: ಟಿವಿ ಸುದ್ದಿ ಮಾಧ್ಯಮಗಳ ಅವನತಿಯನ್ನು ನೋಡುತ್ತಿರುವವರಿಗೆ ಮುಂದೆ ಭಾರತೀಯ ಸುದ್ದಿ ನಿರೂಪಕರು ಬಿಜೆಪಿಯ ಪ್ರಚಾರವನ್ನು ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ನಿರ್ವಹಿಸಲು ಪಕ್ಷದ ಪ್ರಧಾನ ಕಚೇರಿಯಲ್ಲಿ ಕುಳಿತುಕೊಂಡರೆ ಅಚ್ಚರಿ ಅನ್ನಿಸಲಿಕ್ಕಿಲ್ಲ. ಆದರೆ ಅವರು ಬಿಜೆಪಿಯ ಪ್ರಚಾರ ವಿಭಾಗದಿಂದ ಎತ್ತಿಕೊಂಡ ಬೈಟ್ಗಳನ್ನು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಿದರೆ ಏನಾಗಬಹುದು?

ಇತ್ತೀಚಿನ ಚುನಾವಣೆಗಳ ಬಳಿಕ ಟಿವಿ ಸುದ್ದಿ ಮಾಧ್ಯಮಗಳ ದೊಡ್ಡ ವಿಭಾಗವೊಂದು ಆಯೋಜಿಸಿದ್ದ ಹಲವಾರು ಕಾರ್ಯಕ್ರಮಗಳು ಬಿಜೆಪಿಯು ಹಿಮಾಚಲ ಪ್ರದೇಶ ವಿಧಾನಸಭಾ ಮತ್ತು ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸೋತಿದ್ದರೂ ಎಲ್ಲ ಫಲಿತಾಂಶಗಳು ಬಿಜೆಪಿಯ ಪರವಾಗಿವೆ ಎಂದು ಬಿಂಬಿಸಿದ್ದವು. ಆದರೆ ಗುಜರಾತಿನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು ಹೌದು. ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಹೊಗಳಲು ಚಾನೆಲ್ಗಳು ಪರಸ್ಪರ ಪೈಪೋಟಿಗೆ ಬಿದ್ದಿದ್ದರೆ ಡಿ.11ರಂದು ಆಜ್ ತಕ್ ಮತ್ತು ಇಂಡಿಯಾ ಟುಡೇ ಟಿವಿಗಳಲ್ಲಿ ಪ್ರಸಾರವಾಗಿದ್ದ ಎರಡು ಕಾರ್ಯಕ್ರಮಗಳು ಒಂದು ಹೆಜ್ಜೆ ಇನ್ನೂ ಮುಂದಿದ್ದವು. ಈ ಎರಡೂ ಚಾನೆಲ್ಗಳು ತಮ್ಮ ಎಲ್ಲ ಬೈಟ್ಗಳನ್ನು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ‘Modi Story’ ಟ್ವಿಟರ್ ಹ್ಯಾಂಡಲ್ ಮತ್ತು ವೆಬ್ಸೈಟ್ನಿಂದ ಎತ್ತಿಕೊಂಡಿದ್ದವು. ವಾಸ್ತವದಲ್ಲಿ ಬಿಜೆಪಿ ಅವುಗಳನ್ನು ತಿಂಗಳುಗಳ ಮೊದಲೇ ಪ್ರಕಟಿಸಿತ್ತು.

'ಆಜ್ ತಕ್' ನ ಶ್ವೇತಾ ಸಿಂಗ್ ‘ಯೂಹಿಂ ಕೋಯಿ ಮೋದಿ ನಹೀ ಬನ್ ಜಾತಾ (ಸುಮ್ಮನೆ ಯಾರೂ ಮೋದಿ ಆಗುವುದಿಲ್ಲ)’ ಎಂಬ ಕಾರ್ಯಕ್ರಮವನ್ನು ನಡೆಸಿದ್ದರೆ ಇಂಡಿಯಾ ಟಿವಿಯ ವರದಿಗಾರ ಪವನ್ ನಾರಾ ‘ಮೋದಿ ಸ್ಟೋರಿ’ಯ ನಿರೂಪಕರಾಗಿದ್ದರು.

ಪ್ರಧಾನಿ ಮೋದಿಯವರನ್ನು ಹತ್ತಿರದಿಂದ ಬಲ್ಲವರ ನೆನಪುಗಳನ್ನು ಹಂಚಿಕೊಳ್ಳುವುದು ‘ಮೋದಿ ಸ್ಟೋರಿ ’ವೆಬ್ಸೈಟ್ ನ  ಉದ್ದೇಶವಾಗಿದೆ. ಮಹಾತ್ಮಾ ಗಾಂಧಿಯವರ ಮರಿಮೊಮ್ಮಗಳು ಸುಮಿತ್ರಾ ಗಾಂಧಿಯವರು ಈ ವೆಬ್ಸೈಟ್ ಅನ್ನು ಮಾರ್ಚ್ 2016ರಲ್ಲಿ ಉದ್ಘಾಟಿಸಿದ್ದರು ಮತ್ತು ಸಮಾರಂಭದ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಬಿಜೆಪಿಯ ಟ್ವಿಟರ್ ಹ್ಯಾಂಡಲ್, ಅದನ್ನು ಸ್ವಯಂಸೇವಕ-ಚಾಲಿತ ಉಪಕ್ರಮ ಎಂದು ಬಣ್ಣಿಸಿತ್ತು.

ಮೋದಿ ಮತ್ತು ಹಲವಾರು ಕೇಂದ್ರ ಸಚಿವರು ಆಗಾಗ್ಗೆ ವೆಬ್ ಸೈಟ್ಗೆ ಪ್ರಚಾರ ಮತ್ತು ಸಂದರ್ಶನಗಳನ್ನು ನೀಡುತ್ತಿರುತ್ತಾರೆ. ಟ್ವಿಟರ್ ನಲ್ಲಿ ಅದನ್ನು ಹಲವಾರು ಬಿಜೆಪಿ ಸಚಿವರು ಮತ್ತು ನಾಯಕರು ಫಾಲೋ ಮಾಡುತ್ತಾರೆ ಮತ್ತು ಖಾತೆಯು ಕೇವಲ ಮೋದಿಯವರನ್ನು ಫಾಲೋ ಮಾಡುತ್ತದೆ.

ಮೋದಿ ಸ್ಟೋರಿ ವೆಬ್ಸೈಟ್ ನಲ್ಲಿಯ ಹೆಚ್ಚಿನ ವೀಡಿಯೊಗಳು NarendraModi.in ಮತ್ತು NaMo ಆ್ಯಪ್ ನಲ್ಲಿಯೂ ಕಾಣಿಸಿಕೊಂಡಿದ್ದವು. ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಇವುಗಳ ಮುಖ್ಯ ಅಧಿಕಾರಿಯೂ ಆಗಿದ್ದಾರೆ.

ತಮ್ಮ ಕಾರ್ಯಕ್ರಮಗಳಲ್ಲಿ ಈ ಬೈಟ್ ಗಳನ್ನು ಬಳಸಿಕೊಳ್ಳಲು 'ಆಜ್ ತಕ್' ಮತ್ತು 'ಇಂಡಿಯಾ ಟಿವಿ' ಅನುಮತಿಯನ್ನು ಪಡೆದುಕೊಂಡಿದ್ದವೇ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಮಾಳವೀಯ, ‘ಅವುಗಳಿಗೆ ಅನುಮತಿಯ ಅಗತ್ಯವಿಲ್ಲ, ನಮ್ಮ ವಿಷಯಗಳಿಗೆ ನಾವು ಹಕ್ಕುಸ್ವಾಮ್ಯ ಹೊಂದಿಲ್ಲ ಮತ್ತು ಅವರು ಉಲ್ಲೇಖವನ್ನು ತೋರಿಸುವವರೆಗೆ ಅವುಗಳನ್ನು ಬಳಸಲು ಸ್ವತಂತ್ರರಿದ್ದಾರೆ. ವಾಸ್ತವದಲ್ಲಿ ನಮ್ಮ ವಿಷಯಗಳನ್ನು ನೋಡಲು ಮತ್ತು ತಮಗೆ ಸೂಕ್ತವಾದಂತೆ ಅವುಗಳನ್ನು ಬಳಸಲು ನಮ್ಮ ವೆಬ್ಸೈಟ್ ಗಳು ಮತ್ತು ಡಿಜಿಟಲ್ ಪ್ಲ್ಯಾಟ್ಫಾರ್ಮ್ ಗಳಿಗೆ ಭೇಟಿ ನೀಡುವಂತೆ ನಾವು ಜನರನ್ನು ಉತ್ತೇಜಿಸುತ್ತೇವೆ’ ಎಂದು ಉತ್ತರಿಸಿದರು.

ಆಜ್ ತಕ್ ಮತ್ತು ಇಂಡಿಯಾ ಟಿವಿ ಬಿಜೆಪಿಯ ಸಚಿವರು, ಮಾಜಿ ಸಚಿವರಿಂದ ಹಿಡಿದು ಸ್ಥಳೀಯ ನಾಯಕರವರೆಗೆ ಬೈಟ್ ಗಳನ್ನು ಬಳಸಿಕೊಂಡಿವೆ. 1991ರಲ್ಲಿ ಮೋದಿ ಮಧ್ಯಪ್ರದೇಶ ಚುನಾವಣಾ ಉಸ್ತುವಾರಿಯಾಗಿದ್ದಾಗ ಪಕ್ಷದ ರಾಜ್ಯ ಕಚೇರಿಯಲ್ಲಿ ಸಂಯೋಜಕರಾಗಿದ್ದ ಹಿರಿಯ ಬಿಜೆಪಿ ನಾಯಕ ರಘುನಂದನ ಶರ್ಮಾ ಅವರು ಆಜ್ ತಕ್ ನಲ್ಲಿ 3 ನಿಮಿಷ 11 ಸೆಕೆಂಡ್ ಮತ್ತು ಇಂಡಿಯಾ ಟಿವಿಯಲ್ಲಿ 10 ನಿಮಿಷ 11 ಸೆಕೆಂಡ್ಗಳ ಕಾಲ ಕಾಣಿಸಿಕೊಂಡಿದ್ದರು.

ಇದೇ ರೀತಿ ಇತ್ತೀಚಿಗೆ ಬಿಜೆಪಿಯ ಸಂಸದೀಯ ಮಂಡಳಿಗೆ ಸೇರ್ಪಡೆಗೊಂಡಿರುವ ಸುಧಾ ಯಾದವ  ಅವರು ಎರಡೂ ಚಾನೆಲ್ಗಳಲ್ಲಿ ಕಾಣಿಸಿಕೊಂಡು ಮೋದಿಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ತಾಯಿ ನೀಡಿದ್ದ 11 ರೂ.ಗಳನ್ನು ಅವರು ತನಗೆ ನೀಡಿದ್ದರ ಕುರಿತು ಹೇಳಿಕೊಂಡಿದ್ದರು. ಅವರು ಆಜ್ ತಕ್ನಲ್ಲಿ 2 ನಿಮಿಷ 10 ಸೆಕೆಂಡ್ ಮತ್ತು ಇಂಡಿಯಾ ಟಿವಿಯಲ್ಲಿ 13 ನಿಮಿಷ 14 ಸೆಕೆಂಡ್ಗಳ ಕಾಲ ಕಾಣಿಸಿಕೊಂಡಿದ್ದರು.

ಛತ್ತೀಸ್ಗಡದ ಬಿಜೆಪಿ ನಾಯಕ ನಂದಕುಮಾರ ಸಾಹು, ಮಾಜಿ ಕೇಂದ್ರ ಸಚಿವ ಹಿರೇನ್ ಪಾಠಕ್,ಪಂಜಾಬ ಬಿಜೆಪಿಯ ಹಿರಿಯ ನಾಯಕ ಮನೋರಂಜನ ಕಾಲಿಯಾ,ಮಾಜಿ ಗುಜರಾತ ಮುಖ್ಯಮಂತ್ರಿ ವಿಜಯ ರೂಪಾನಿ,ಹಿಮಾಚಲ ಪ್ರದೇಶದ ಮಾಜಿ ಸಚಿವ ಮಹೇಂದ್ರನಾಥ ಸೋಫಟ್ ಮುಂತಾದವರೂ ಎರಡೂ ಚಾನೆಲ್ಗಳಲ್ಲಿ ಕಾಣಿಸಿಕೊಂಡು ಮೋದಿಯವರ ಗುಣಗಾನ ಮಾಡಿದ್ದರು. ವಿಷಯವೆಂದರೆ ಈ ಎಲ್ಲರ ಬೈಟ್ಗಳು ತಿಂಗಳುಗಳ ಹಿಂದೆಯೇ ನೀಡಿದ್ದವಾಗಿದ್ದವು ಮತ್ತು ಇವೆರಡೂ ಚಾನೆಲ್ಗಳು ಅವುಗಳನ್ನು ತಾಜಾ ಸುದ್ದಿ ಎಂಬಂತೆ ಪ್ರಸಾರ ಮಾಡಿದ್ದವು!

ಕೃಪೆ: Newslaundry

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top