-

ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಬಿಡುಗಡೆಗೆ ಅವಿರತ ಶ್ರಮ ವಹಿಸಿದ್ದ ಕುಮಾರ್‌ ಸೌವೀರ್‌ ಯಾರು ಗೊತ್ತೇ?

-

ಹೊಸದಿಲ್ಲಿ: ಕುಮಾರ್‌ ಸೌವೀರ್‌ ಮತ್ತು ಸಿದ್ದೀಕ್ ಕಪ್ಪನ್‌ ಅವರು ವಾಸವಿರುವ ಸ್ಥಳಗಳ ನಡುವೆ 2,000 ಕಿಮೀ ಅಂತರವಿದೆ. ಆದರೆ ಕೇರಳ ಮೂಲದ ಪತ್ರಕರ್ತ ಸಿದ್ದೀಖ್‌ ಕಪ್ಪನ್‌ ಅವರು ಗುರುವಾರ ಲಕ್ನೋ ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆಯೇ ಅವರು ಮೊದಲು ನೋಡಲು ಬಯಸಿದ್ದು ಸೌವೀರ್‌ ಅವರನ್ನು.

ʻʻಇಬ್ಬರ ನಡುವೆ ಮಾತುಕತೆಯಿರಲಿಲ್ಲ, ದೀರ್ಘ ಆಲಿಂಗನ ಮಾತ್ರ," ಎಂದು ಸೌವೀರ್‌ ಹೇಳುತ್ತಾರೆ.

ಸೌವೀರ್‌ ಲಕ್ನೋ ಮೂಲದ ಪತ್ರಕರ್ತರಾಗಿದ್ದು ಕಪ್ಪನ್‌ ಅವರ ಬಿಡುಗಡೆಗೆ ಅಗತ್ಯವಾಗಿದ್ದ ಜಾಮೀನು ಬಾಂಡ್‌ ನೀಡಿದವರಾಗಿದ್ದಾರೆ. ತಮ್ಮ ಹೆಸರಿನಲ್ಲಿ ಲಕ್ನೋ ನಗರದ ಬಕ್ಷಿ ಕಾ ತಾಲಾಬ್‌ ಪ್ರದೇಶದಲ್ಲಿರುವ 9,000 ಚದರ ಅಡಿಯ ಕೃಷಿ ಭೂಮಿಯ ಮಾಲೀಕತ್ವದ ದಾಖಲೆಗಳನ್ನು ಬಾಂಡ್‌ ರೂಪದಲ್ಲಿ ಸೌವೀರ್‌ ನೀಡಿದ್ದಾರೆ.

ಸೌವೀರ್‌ ಅವರ ಈ ಕ್ರಮ ಮಾಧ್ಯಮ ಮತ್ತು ನಾಗರಿಕ ಸಮಾಜದ ಶ್ಲಾಘನೆಗೆ ಪಾತ್ರವಾಗಿದೆ. ಆದರೆ ತಮ್ಮ ಕಾರ್ಯವನ್ನು ಧೈರ್ಯದ ಕಾರ್ಯ ಎಂದು 63 ವರ್ಷದ ಸೌವೀರ್‌ ಹೇಳುವುದಿಲ್ಲ. "ನಾವು ಜವಾಬ್ದಾರಿಯಯುತ, ಭಾವನಾತ್ಮಕ ಮತ್ತು ಸೂಕ್ಷ್ಮ ಜೀವಿಗಳು, ನಮ್ಮ ಸಹ ನಾಗರಿಕರಿಗೆ ಅನುಕಂಪ ತೋರುವುದು, ಇನ್ನೊಬ್ಬರ ಕಣ್ಣೀರಿನ ಹಿಂದಿನ ನೋವು ಕಾಣುವುದು ಮತ್ತು ಕಣ್ಣೀರನ್ನು ತೊಡೆದು ಹಾಕುವುದು ನಮ್ಮ ಜೀವನ," ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ ಒಂದರಲ್ಲಿ ಬರೆದಿದ್ದಾರೆ.

ಕಳೆದ 42 ವರ್ಷಗಳಿಂದ ಸೌವೀರ್‌ ಪತ್ರಕರ್ತರಾಗಿದ್ದಾರೆ. ಅವರ ತಂದೆ ಸಿಯಾರಾಂ ತ್ರಿಪಾಠಿ ಖ್ಯಾತ ಹಿಂದಿ ದಿನಪತ್ರಿಕೆಯೊಂದರ ಹಿರಿಯ ಸಂಪಾದಕೀಯ ಹುದ್ದೆಯಲ್ಲಿದ್ದವರಾಗಿದ್ದರು. "ನಾವು ಯಾವತ್ತೂ ನ್ಯಾಯದ ಬಗ್ಗೆ ಮಾತನಾಡುತ್ತಿದ್ದೆವು," ಎಂದು ಅವರು ಹೇಳುತ್ತಾರೆ. ತ್ರಿಪಾಠಿ ಅವರು ಸಿಪಿಐ ಸದಸ್ಯತ್ವ ಕಾರ್ಡ್‌ ಹೊಂದಿದವರಾಗಿದ್ದು  ಹಾಗೂ ಇಂಡಿಯನ್‌ ಫೆಡರೇಶನ್‌ ಆಫ್‌ ವರ್ಕಿಂಗ್‌ ಜರ್ನಲಿಸ್ಟ್ಸ್‌ ಇದರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚಿಕ್ಕಂದಿನಿಂದಲೇ ನಿರ್ಭೀತಿಯಿಂದಿರಬೇಕೆಂಬ ಅರಿವು ತಮಗೆ ಮೂಡಿಸಲಾಗಿತ್ತು ಎಂದು ಸೌವೀರ್‌ ಹೇಳುತ್ತಾರೆ.

ಕಪ್ಪನ್‌ ಅವರನ್ನು ಅಕ್ಟೋಬರ್‌ 2020 ರಲ್ಲಿ ಹತ್ರಾಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿಗಾರಿಕೆಗೆ ತೆರಳುತ್ತಿದ್ದಾಗ  ಬಂಧಿಸಲಾಗಿತ್ತು. ಅವರ ವಿರುದ್ಧ  ಅಕ್ರಮ ಹಣ ವಹಿವಾಟು ಹಾಗೂ ಯುಎಪಿಎ ಪ್ರಕರಣಗಳನ್ನೂ ನಂತರ ದಾಖಲಿಸಲಾಗಿತ್ತು. ಇದೀಗ ನಿಷೇಧಿತ ಪಿಎಫ್‌ಐನಿಂದ ಅವರು ಹಣ ಪಡೆದಿದ್ದಾರೆಂದೂ ಆರೋಪಿಸಲಾಗಿತ್ತು.

ರಾಜ್ಯ ಸರ್ಕಾರ ಹೇಗೆ ಸ್ಪಂದಿಸಬಹುದೆಂಬ ಭಯದಿಂದ ರಾಜ್ಯದ ಹಲವು ವಕೀಲರು ಹಾಗೂ ಪತ್ರಕರ್ತರು ಜಾಮೀನು ಬಾಂಡ್‌ ನೀಡಲು ಮುಂದೆ ಬಂದಿರಲಿಲ್ಲ. ಆ ಸಂದರ್ಭ ಇಬ್ಬರು ಹಿರಿಯ ಪತ್ರಕರ್ತರು ಸೌವೀರ್‌ ಅವರಿಗೆ ಕರೆ ಮಾಡಿ ಸಹಾಯ ಮಾಡಲು ಕೋರಿದ್ದರು.

"ಎಷ್ಟೊಂದು ಭಯದ ವಾತಾವರಣವಿದೆಯೆಂದರೆ ಯಾವುದೇ ಮುಸ್ಲಿಂ ವ್ಯಕ್ತಿ ಕೂಡ ಅವರ ಸಹಾಯಕ್ಕೆ ಬರಲು ಸಿದ್ಧರಿರಲಿಲ್ಲ. ಆದರೆ ಈ ಕಾರ್ಯದ ಹಿಂದಿನ ನಿಜವಾದ ಉದ್ದೇಶ ನ್ಯಾಯ ದೊರಕಿಸಿಕೊಡುವುದು ಮತ್ತು ಪತ್ರಕರ್ತ ಸಮುದಾಯ ಇಂತಹ ಸಂದರ್ಭಗಳಲ್ಲಿ ಒಂದಾಗಿದೆ ಎಂದು ತೋರಿಸುವುದಾಗಿತ್ತು," ಎಂದು ಸೌವೀರ್‌ ಹೇಳುತ್ತಾರೆ.

ನಾಸ್ತಿಕರಾಗಿರುವ ಸೌವೀರ್‌ ಅವರು ಇದು ತಮ್ಮ ಧರ್ಮ ಎಂದು ನಂಬಿದ್ದರು. ಸೌವೀರ್‌ ಅವರು ಜನವರಿ 3 ರಂದು ದಾಖಲೆಗಳನ್ನು ಸಲ್ಲಿಸಿದ್ದರೆ ಐದು ದಿನಗಳ ನಂತರ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು. ಆಗ ಅವರಿಗೆ ಕೇಳಲಾದ ಪ್ರಶ್ನೆಗಳ್ಲಲೊಂದು "ನಿಮಗೆ ಸಿದ್ದೀಖ್‌ ಕಪ್ಪನ್‌ ಗೊತ್ತೇ?" ಎಂಬುದಾಗಿತ್ತು. ಅದಕ್ಕೆ ಅವರು. "ನನಗೆ ಗೊತ್ತು., ಪತ್ರಕರ್ತರಾಗಿ ನಾವು ಒಂದೇ ಧರ್ಮ ಹಂಚಿಕೊಂಡಿದ್ದೇವೆ," ಎಂಬ ಉತ್ತರ ನೀಡಿದ್ದರು.

ಆದರೆ ಇಬ್ಬರು  ಹೆಣ್ಣುಮಕ್ಕಳ ತಂದೆಯಾಗಿರುವ ಸೌವೀರ್‌ ಜನವರಿ ಮಧ್ಯಭಾಗದಲ್ಲಿ ಬ್ರೈನ್‌ ಸ್ಟ್ರೋಕ್‌ಗೆ ಒಳಗಾಗಿದ್ದರಲ್ಲದೆ ಪಕ್ಷವಾತ ಸಮಸ್ಯೆಯನ್ನೂ ಎದುರಿಸಿದ್ದರು. ಅವರು ಆಸ್ಪತ್ರೆಯಲ್ಲಿದ್ದಾಗ ಪೊಲೀಸರಿಂದ ಸತತ ಕರೆಗಳು ಬರುತ್ತಿದ್ದವು.

ದಾಖಲೆಗಳನ್ನು ಕೇಳುತ್ತಿದ್ದರು. ತಮ್ಮ ಸ್ಥಿತಿ ವಿವರಿಸಿ ತಮ್ಮ ಪಾಸ್‌ಪೋರ್ಟ್‌, ಆಧಾರ್‌, ಪ್ರೆಸ್‌ ಕಾರ್ಡ್‌ ನೀಡುವುದಾಗಿ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಖುದ್ದಾಗಿ ಹಾಜರಾಗಬೇಕೆಂದು ಸೂಚಿಸಲಾಯಿತು. ಅಂತೂ ಫೆಬ್ರವರಿ 1 ರಂದು ಸೌವೀರ್‌ ನ್ಯಾಯಾಧೀಶರೆದುರು ಹಾಜರಾದಾಗ ಅವರು ಜಾಮೀನು ಬಾಂಡ್‌ ಆಗಿ ನೀಡಿದ್ದ ಜಮೀನನ್ನು ಯಾರಿಂದ ಖರೀದಿಸಿದ್ದರೆಂಬ ಪ್ರಶ್ನೆಯನ್ನು ಕೇಳಲಾಗಿತ್ತು.

"ಒಳ್ಳೆಯ ಕೆಲಸ ಮಾಡುವಾಗ ಜನರನ್ನು ಈ ರೀತಿ ಕಿರುಕುಳ ನೀಡಬಾರದು," ಎಂದು ಅಪ್ರಸ್ತುತ ಪ್ರಶ್ನೆ ಬಗ್ಗೆ ಸೌವೀರ್‌ ಪ್ರತಿಕ್ರಿಯಿಸಿದ್ದಾರೆ.

ಕಪ್ಪನ್‌ ಜೈಲಿನಿಂದ ಬಿಡುಗಡೆಯಾದಾಗ ಸೌವೀರ್‌ ಅವರಿಗಾಗಿ ಕಾಯುತ್ತಿದ್ದರು. ಪದಗಳೇ ಬೇಕಿರಲಿಲ್ಲ. ಇಬ್ಬರು ಮೌನವಾಗಿ ಪರಸ್ಪರ ಆಲಂಗಿಸಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top