Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. 30 ಅಧಿನಿಯಮಗಳನ್ನು ನಿರಸನಗೊಳಿಸಿದ...

30 ಅಧಿನಿಯಮಗಳನ್ನು ನಿರಸನಗೊಳಿಸಿದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

ವಾರ್ತಾಭಾರತಿವಾರ್ತಾಭಾರತಿ21 Feb 2024 8:30 PM IST
share
30 ಅಧಿನಿಯಮಗಳನ್ನು ನಿರಸನಗೊಳಿಸಿದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು : ಮೂವತ್ತು ಪ್ರಾದೇಶಿಕ ಮತ್ತು ರಾಜ್ಯ ಅಧಿನಿಯಮಗಳನ್ನು ನಿರಸನಗೊಳಿಸಲು ಬುಧವಾರ ವಿಧಾನಸಭೆಯಲ್ಲಿ ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ-2024ಕ್ಕೆ ಅಂಗೀಕಾರ ಲಭಿಸಿತು.

ಕರ್ನಾಟಕ ಕಾನೂನು ಆಯೋಗವು ವಿವಿಧ ಅಧಿನಿಯಮಗಳನ್ನು ಸವಿವರವಾಗಿ ಪರಿಶೀಲಿಸಿ, ತನ್ನ 58ನೇ ವರದಿಯಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ಮತ್ತು ಸನ್ನಿವೇಶಗಳಲ್ಲಿ ಬಳಕೆಯಲ್ಲಿಲ್ಲವೆಂದು ಅಥವಾ ಸುಸಂಗತವಲ್ಲವೆಂದು ಕಂಡು ಬಂದ 30 ಪ್ರಾದೇಶಿಕ ಮತ್ತು ರಾಜ್ಯ ಅಧಿನಿಯಮಗಳನ್ನು ನಿರಸನಗೊಳಿಸಲು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸದನಕ್ಕೆ ವಿವರಣೆ ನೀಡಿದರು.

ನಿರಸನವಾದ ಅಧಿನಿಯಮಗಳು: ಸ್ಟೇಟ್ ಬ್ಯಾಂಕ್ ಅಧಿನಿಯಮ 1350ಎಫ್, ವಿಸರ್ಜಿತ ವಿಶೇಷ ನ್ಯಾಯಾಧೀಕರಣ(ವಾರೆಂಟುಗಳ ಹೊರಡಿಸುವಿಕೆ)ವಿನಿಯಮಗಳು 1359ಎಫ್, ಜಹಗೀರುಗಳ ರದ್ದಿಯಾತಿ ವಿನಿಯಮಗಳು 1958ಎಫ್, ಪಿಂಚಣಿ ಅಧಿನಿಯಮ-1871, ಟ್ರಾಮ್ ಮಾರ್ಗಗಳ ಅಧಿನಿಯಮ-1906, ಮರು ಮಖ್ಖಾತೆಯಂ ಅಧಿನಿಯಮ-1932, ಹಿಂದೂ ಕಾನೂನುಗಳ ಮಹಿಳೆಯರ ಹಕ್ಕುಗಳ ಅಧಿನಿಯಮ-1933, ನಂಬೂದರಿ ಅಧಿನಿಯಮ-1932, ಬಾಂಬೆ ತಾತ್ಕಾಲಿಕ ತೆರಿಗೆಗಳ ಸಂಗ್ರಹಣೆ ಅಧಿನಿಯಮ-1938.

ಸ್ವತ್ತುಗಳ ವರ್ಗಾವಣೆ ಮತ್ತು ಭಾರತೀಯ ನೋಂದಣಿ(ಬಾಂಬೆ ತಿದ್ದುಪಡಿ) ಅಧಿನಿಯಮ-1939, ಕುಚ್ಚಿ ಮೆಮನ್‍ಗಳ ಅಧಿನಿಯಮ-1943, ದೇವಾಲಯ ಪ್ರವೇಶ ಅಧಿಕೃತಗೊಳಿಸುವಿಕೆ ಅಧಿನಿಯಮ-1947, ಕಿರುಕುಳಕಾರಿ ವ್ಯಾಜ್ಯ ಅಧಿನಿಯಮ-1949, ಔಷಧ(ನಿಯಂತ್ರಣ) ಅಧಿನಿಯಮ-1949, ಔಷಧ(ನಿಯಂತ್ರಣ) ಅಧಿನಿಯಮ-1950, ಮೈಸೂರು ಸ್ವತ್ತುಗಳ ವರ್ಗಾವಣೆ(ಕೃಷಿ ಭೂಮಿಯ ವಿಸ್ತರಣೆ) ಅಧಿನಿಯಮ-1951, ಅತಿಯತ್ ವಿಚಾರಣೆಗಳ ಅಧಿನಿಯಮ-1952.

ಔಷಧ (ನಿಯಂತ್ರಣ) ಅಧಿನಿಯಮ-1952, ಹಿಂದೂ ಸಾರ್ವಜನಿಕ ಸ್ಥಳಗಳ ಪೂಜೆ(ಅಧಿಕೃತ ಪ್ರವೇಶ) ಅಧಿನಿಯಮ-1956, ಮರು ಮಖ್ಖಾತೆಯಂ(ತೊಂದರೆಗಳ ನಿವಾರಣೆ) ಅಧಿನಿಯಮ-1955, ಕರ್ನಾಟಕ ಅಸ್ತಿತ್ವದಲ್ಲಿರುವ ಕಾನೂನುಗಳು(ಮೌಲ್ಯಗಳ ಉಲ್ಲೇಖನಗಳ ನಿರ್ಮಾಣ)ಅಧಿನಿಯಮ 1957, ಕರ್ನಾಟಕ ನಿರ್ವಾಸಿತ ಹಿತಾಸಕ್ತಿ(ಪ್ರತ್ಯೇಕಿಸುವ)ಪೂರಕ ಅಧಿನಿಯಮ-1961.

ಕರ್ನಾಟಕ ನಗದು ಅನುದಾನಗಳ ರದ್ದಿಯಾತಿ ಅಧಿನಿಯಮ-1967, ಕರ್ನಾಟಕ ಕೃಷಿ ಪತ್ತಿನ ಪಾಸು ಪುಸ್ತಕ ಅಧಿನಿಯಮ-1984, ಕರ್ನಾಟಕ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸುಗಳ ಅಭ್ಯರ್ಥಿಗಳ ಆಯ್ಕೆ(ವಿಶೇಷ ಉಪಬಂಧಗಳ) ಅಧಿನಿಯಮ-2004 ಹಾಗೂ 2007, 2011, 2012, 2013 ಹಾಗೂ 2014ನೆ ಸಾಲಿನ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ(ಪ್ರವೇಶಾತಿ ವಿನಿಯಮನ ಮತ್ತು ಶುಲ್ಕ ನಿಗದಿಕರಣ)(ವಿಶೇಷ ಉಪಬಂಧಗಳ) ಅಧಿನಿಯಮವನ್ನು ನಿರಸನಗೊಳಿಸಲು ಈ ವಿಧೇಯಕ ಜಾರಿಗೆ ತರಲಾಗಿದೆ.

ವಿಧೇಯಕ ವಾಪಸ್: 2015ನೇ ಸಾಲಿನ ಕರ್ನಾಟಕ ಕುಲಾಂತರಿ ಮತ್ತು ತಳಿ ವಿಜ್ಞಾನದ ಪ್ರಕಾರ ಮಾರ್ಪಾಟಾದ ಹತ್ತಿ ಬೀಜಗಳ(ಮಾರಾಟ ಬೆಲೆಯ ನಿಗದಿ ಮತ್ತು ಪರಿಹಾರದ ಸಂದಾಯ) ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಹಿಂಪಡೆಯಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X