Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಕೃತಿಗಳನ್ನು ರಚಿಸುವುದಕ್ಕೆ ಪ್ರಾಮಾಣಿಕತೆ...

ಕೃತಿಗಳನ್ನು ರಚಿಸುವುದಕ್ಕೆ ಪ್ರಾಮಾಣಿಕತೆ ಇರಬೇಕು: ನಟ ಪ್ರಕಾಶ್ ರಾಜ್

ವಾರ್ತಾಭಾರತಿವಾರ್ತಾಭಾರತಿ17 Nov 2024 7:04 PM IST
share
ಕೃತಿಗಳನ್ನು ರಚಿಸುವುದಕ್ಕೆ ಪ್ರಾಮಾಣಿಕತೆ ಇರಬೇಕು: ನಟ ಪ್ರಕಾಶ್ ರಾಜ್

ಬೆಂಗಳೂರು: ಯಾವುದೇ ಲೇಖಕ ನಿರಂತರವಾಗಿ ಕೃತಿಗಳನ್ನು ರಚಿಸಲು ಧೈರ್ಯ, ಪ್ರಾಮಾಣಿಕತೆಯ ಜತೆಗೆ ಹುಚ್ಚುತನವೂ ಬೇಕು. ಅಂತಹ ಒಂದು ವಿಶಿಷ್ಟ ಗುಣ ಲೇಖಕ ಜೋಗಿ ಅವರಲ್ಲಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ರವಿವಾರ ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಲೇಖಕ ಜೋಗಿ ರಚಿಸಿರುವ ‘ಇಳಂಗೋವನ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೋಗಿ ನಾಲ್ಕು ದಶಕಗಳಲ್ಲಿ ನಿರಂತರವಾಗಿ ತೆರೆದ ಪುಸ್ತಕದಂತೆ ನೂರು ಕೃತಿಗಳನ್ನು ಬರೆದಿರುವುದು ಮೆಚ್ಚುಗೆಯ ಸಂಗತಿ. ಅವರಲ್ಲಿರುವ ಹೊಸ ಹುಡುಕಾಟ, ತೆರವುಗೊಳ್ಳುವಿಕೆ, ಏನನ್ನು ಯೋಚಿಸಿದೇ ಬರೆಯುವುದಕ್ಕೆ ಬದ್ಧನಾಗುವುದು ಇಷ್ಟವಾಗುವ ವಿಶಿಷ್ಟ ಗುಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮರ ಎನ್ನುವುದು ದೊಡ್ಡ ಪ್ರತಿಮೆ. ಅದನ್ನು ನೋಡಿದಾಗ ಮರಕ್ಕೆ 50 ವರ್ಷವಾ, 60 ವರ್ಷನಾ, ಎಷ್ಟು ಗಂಭೀರವಾಗಿ ಇದೆ ಎಂದು ಅನಿಸುತ್ತೆ. ಆದರೆ ಆ ಮರದ ವಯಸ್ಸು, ಅನುಭವಗಳು ನಮಗೆ ನಿಖರವಾಗಿ ಗೊತ್ತಾಗುವುದಿಲ್ಲ. ಮರದ ಹತ್ತಿರ ಹೋದಾಗ ಅದರಲ್ಲಿನ ಆಭ್ಯಾಯತೆ, ನಂಬಬಹುದು, ಇದನ್ನು ತಬ್ಬಿಕೊಳ್ಳಬಹುದು, ಕೆಳಗೆ ನಿಲ್ಲಬಹುದು ಎನ್ನುವ ಚಿಂತನೆ ಬರುತ್ತದೆ ಎಂದು ಪ್ರಕಾಶ್‍ ರಾಜ್ ಹೇಳಿದರು.

ವ್ಯಕ್ತಿ ನನ್ನ ಮುಂದೆ ಇಲ್ಲದೆ ಇದ್ದಾಗಲೂ, ನನ್ನನ್ನು ಕಾಡುವ ಕೆಲವು ಗೆಳೆಯರಲ್ಲಿ ಜೋಗಿ ಒಬ್ಬರು. ಯಾವುದಾದರೂ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅಥವಾ ಮಾತುಗಳನ್ನು ಮಾತಾಡಬೇಕಾದರೆ ಇದು ನನ್ನ ಗೆಳೆಯನಿಗೆ ಗೊತ್ತಾದರೆ ಅವನ ಕಣ್ಣಿನಲ್ಲಿ ಕೆಳಗೆ ಬಿದ್ದೆನಾ ಎಂದು ಅನಿಸುತ್ತದೋ ಅಂತಹ ಗೆಳೆತನ ಅದ್ಬುತವಾದ ಗೆಳತನ. ಆ ತರದ ವ್ಯಕ್ತಿಗಳಲ್ಲಿ ಜೋಗಿ ಒಬ್ಬರು ಎಂದು ಅವರು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ, ಜೋಗಿ ಬಲಪಂಥೀಯ, ನಾನು ಎಡಪಂಥೀಯ ಹೇಗೆ ಇವರಿಬ್ಬರೂ ಅಷ್ಟೊಂದು ಚೆನ್ನಾಗಿ ಇರುತ್ತಾರೆ ಅಂತ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ. ಜೋಗಿ, ಜೋಗಿಯ ಕುಟುಂಬದ ಜೊತೆಗಿನ ಹಲವು ವರ್ಷದ ಪಯಣದಲ್ಲಿನ ಸಂಬಂಧ ಮುಖ್ಯ. ಎಲ್ಲದನ್ನೂ ಪ್ರೀತಿಸುವ ವ್ಯಕ್ತಿತ್ವ ನಮ್ಮಲ್ಲಿದೆ. ಅಂದುಕೊಳ್ಳುವರು ಅಂದುಕೊಳ್ಳುತ್ತಿರಿ, ನಮ್ಮ ಗೆಳೆತನ ಕಡಿಮೆ ಆಗುವುದಿಲ್ಲ ಎಂದು ಪ್ರಕಾಶ್‍ರಾಜ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕರಾದ ಬಿ.ಆರ್.ಲಕ್ಷ್ಮಣ್‍ರಾವ್, ನಿರ್ದೇಶಕ ಟಿ.ಎನ್.ಸೀತಾರಾಂ, ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ, ಲೇಖಕ ಜೋಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X