ಪತ್ರಕರ್ತ ವೆಂಕಟೇಶ ಸಂಪಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ
ಬೆಂಗಳೂರು: ಕನ್ನಡದ ಸೃಜನಾತ್ಮಕ ಪತ್ರಿಕೆ ‘ಸಂಪದ ಸಾಲು’ ಪತ್ರಿಕೆ ನಡೆಸುತ್ತಿರುವ ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ಬೆಂಗಳೂರಿನ ಕಸಾಪ ಸಭಾಂಗಣದಲ್ಲಿ ನಡೆದ ಯುವ ಸಾಹಿತ್ಯ ಸಮ್ಮೇಳನದಲ್ಲಿ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೆಂಕಟೇಶ ಎಸ್. ಸಂಪ ಸಾವಿರಾರು ಲೇಖನ, ಕತೆ, ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅಲ್ಲದೆ, ಧಾರಾವಾಹಿ ಮತ್ತು ಸಿನಿಮಾಗಳಲ್ಲಿಯೂ ಅವರು ಅಭಿನಯಿಸಿದ್ದಾರೆ. ನೂರಾರು ರೇಡಿಯೋ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು, ಕೃಷಿ, ಪರಿಸರ ರಕ್ಷಣೆ, ರಕ್ತದಾನ ಜಾಗೃತಿ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳದ ಶ್ರೀಮಹೇಶ್ವರ ಶಿವಯೋಗ ಶರಣರು, ಡಾ.ಕೃಷ್ಣ ಹಾನ್ಬಾಲ್, ರಮೇಶ್ ಕಮತಗಿ, ಪ್ರೊ.ನಾರಾಯಣ ಘಟ್ಟ, ಡಾ.ಪರಿಸರ ಮಂಜು, ತಿಲಕ ನಗರ ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ್ ಉಪಸ್ಥಿತರಿದ್ದರು.
Next Story