Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಬೆಂಗಳೂರು: ವಿಜೃಂಭಣೆಯಿಂದ ನಡೆದ ಬ್ಯಾರಿ...

ಬೆಂಗಳೂರು: ವಿಜೃಂಭಣೆಯಿಂದ ನಡೆದ ಬ್ಯಾರಿ ಕೂಟ

► ಮಕ್ಕಳಿಗೆ ಆಟೋಟ, ಬೆಂಕಿ ರಹಿತ ಅಡುಗೆ ಸ್ಪರ್ಧೆ, ಸಾಂಸ್ಕೃತಿಕ, ಆಹಾರ ಮೇಳ

ಇಬ್ರಾಹಿಂ ಖಲೀಲ್ ಬನ್ನೂರುಇಬ್ರಾಹಿಂ ಖಲೀಲ್ ಬನ್ನೂರು26 Feb 2025 7:54 PM IST
share
ಬೆಂಗಳೂರು: ವಿಜೃಂಭಣೆಯಿಂದ ನಡೆದ ಬ್ಯಾರಿ ಕೂಟ

ಬೆಂಗಳೂರು: ಉದ್ಯೋಗ, ಉದ್ಯಮಕ್ಕಾಗಿ ನಗರದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಬ್ಯಾರಿ ಸಮುದಾಯದ ಜನರು ಒಂದೇ ಸೂರಿನಡಿಯಲ್ಲಿ ಸೇರಿ ನಡೆಸಿದ ಬ್ಯಾರಿ ಕೂಟವು ವಿಜೃಂಭಣೆಯಿಂದ ನಡೆಯಿತು.

"ಬ್ಯಾರಿ" ಗಳೆಂದರೆ ಕರಾವಳಿ ಕರ್ನಾಟಕದ ಮುಸ್ಲಿಂ ಸಮುದಾಯವಾಗಿದೆ. ಬ್ಯಾರಿ ಭಾಷೆ ರಾಜ್ಯದ ಉಪಭಾಷೆಯಾಗಿದ್ದು, ಬ್ಯಾರಿ ಸಮುದಾಯದಲ್ಲಿ ಸಾಂಸ್ಕೃತಿಕ, ಕಲೆಗಳಿಗೆ ವಿಶೇಷ ಕೊಡುಗೆಗಳನ್ನು ನೀಡಿದೆ. ಸುಮಾರು 21 ಲಕ್ಷದಷ್ಟೂ ಜನರು ಬ್ಯಾರಿ ಭಾಷೆಯನ್ನು ಮಾತನಾಡುವವರಿದ್ದಾರೆ.

ಬೆಂಗಳೂರಿನಲ್ಲಿ ಬೆರಳು ಏಣಿಕೆಯಷ್ಟು ಇದ್ದ ಬ್ಯಾರಿಗಳ ಸಂಖ್ಯೆ ಪ್ರಸ್ತುತ ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರಗಳಲ್ಲೂ ವಿಶ್ವದಾದ್ಯಂತ ಬ್ಯಾರಿ ಸಮುದಾಯದ ಜನರು ತನ್ನದೇ ಆದ ಛಾಪು ಮೂಡಿಸಿದ್ದಾರೆ.


ರಕ್ತದಾನ ಶಿಬಿರ: ಬ್ಯಾರಿ ಕೂಟದ ಪ್ರಯುಕ್ತವಾಗಿ ನಾರಾಯಣ ಹೃದಯಾಲಯ ಹಾಗೂ ಎಚ್‌ಎಸ್ & ಎಚ್ಎಂಎಸ್ ಸಹಯೋಗದಿಂದ ರಕ್ತದಾನ ಶಿಬಿರ ನಡೆಯಲಾಯಿತು. 40ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಮಕ್ಕಳಿಗೆ ಆಟೋಟ: ಸಂಗೀತಾ ಕುರ್ಚಿ ಸಹಿತ ಮಕ್ಕಳಿಗೆ ಮನೋರಂಜನಾ ಅಟಗಳು ಜರುಗಿದವು.


ಬೆಂಕಿ ರಹಿತ ಅಡುಗೆ: ಬ್ಯಾರಿ ಕೂಟದಲ್ಲಿ ಕರಾವಳಿ ಭಾಗದ ಮಹಿಳೆಯರಿಂದ ವಿಶೇಷವಾಗಿ ಅಕರ್ಷಣೆಯಾಗಿ ಬೆಂಕಿ ರಹಿತ ಅಡುಗೆ ಸ್ಪರ್ಧೆ ಗಮನ ಸೆಳೆಯಿತು. ಇದರಲ್ಲಿ ಹನ್ನೊಂದು ಸ್ಪರ್ಧಾರ್ಥಿಗಳು ಭಾಗಿಯಾದರು.

ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವುದರೊಂದಿಗೆ 1 ಗ್ರಾಂ ಚಿನ್ನ ಗಳಿಸಿದ ಸಾಜಿದಾ, ಇರ್ಫಾನಾ, ಹರ್ಷಿನ್ ಗಾಂಧಿ ನಗರ ಮಾತನಾಡಿ, ಒಂದು ಗಂಟೆಯಲ್ಲಿ ಬಾಳೆ ಎಲೆಯೂಟದಲ್ಲಿ ಕಾಳು ಪಲ್ಯ, ಅವಿಲ್ ಅನ್ನು ರೈಸ್ ತರಹ ಬಳಸಿದ್ದೇವೆ. ಕಡಲೆ ಬೀಜ ಹಾಕಿ ಪಲಾವು, ಮೊಸರನ್ನ, ತೆಂಗಿನ ಕಾಯಿಯ ಲಡ್ಡು ಹಾಗೂ ಈ ರೀತಿ ಹೊಸ ವಿಶಿಷ್ಟ ರೀತಿಯ ಆರೋಗ್ಯ ಯುಕ್ತ ಆಹಾರ ಮಾಡಿದ್ದೇವೆ. ಇದಕ್ಕೆ ಪ್ರಥಮ ಸ್ಥಾನ ಬಂದಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತಾಜುನ್ನುಶ್ರಫ್ ಬಜ್ಪೆ ಅವರ ಚಂ ಚಂ, ರೌಫಾ ಬಿಸಿರೋಡ್ ಮಿಕ್ಸ್ ಫ್ರೂಟ್ಸ್ ಟ್ರಫಲ್, ಅಶೂರ ಉಳ್ಳಾಲ ಅವರಿಂದ ಕುಕುಂಬ್ ಬೋಟ್ಸ್, ಡೇಟ್ಸ್ ಲಡ್ಡು, ಅಶೂರಾ ಕಕ್ಕಿಂಜೆ ಅವರು ರಸುಮಲ್ಲಯಿ, ಕುಕ್ಕುಂಬಾರ್ ಶುಚಿ, ರುಸೈಯಾ ಬೆಳ್ತಂಗಡಿ ಅವರು ಫ್ರೆಶ್ ಕ್ರೀಮ್ ಫ್ರೂಟ್ಸ್ ಸಲಾಡ್, ಬ್ರೆಡ್ ಪುಡ್ಡಿಂಗ್, ತೆಂಗಿನ ಕಾಯಿಯ ಕೇಕ್, ಸೌಧಾ ಕುಂದಾಪುರ ಅವರ ಚೀಯಾ ಶೀಡ್ಸ್ ಪುಂಡಿಂಗ್ , ಹುಸ್ನಾ ಮೇನ್ಹಾ ಉಳ್ಳಾಲ ಅವರ ಸ್ಟಾಬರಿ ನೆಟಲ್ಸ್ ಮೌಸ್ ಆಹಾರ ವಿಶೇಷವಾದ ಗಮನ ಸೆಳೆಯಿತು.


ಬ್ಯಾರಿ ಬ್ಯುಸಿನೆಸ್ ಡೈರೆಕ್ಟರಿ ಬಿಡುಗಡೆ

ಕಳೆದ 9 ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ 'ಬ್ಯಾರಿ ಇನ್ಫೋ‌ ಡಾಟ್ ಕಾಂ' (www.bearyinfo.com) ವೆಬ್ ಸೈಟ್‌ನ ಹೊಸ ವಿಭಾಗ ಬ್ಯಾರಿ ಬ್ಯುಸಿನೆಸ್ ಡೈರಿಕ್ಟರಿ ಲೋಕಾರ್ಪಣೆಗೊಂಡಿತ್ತು.

ಇಡೀ ವಿಶ್ವದಲ್ಲಿರುವ ಬ್ಯಾರಿ ಉದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರು, ವೈದ್ಯರು, ವಕೀಲರು ಸಹಿತ ವೃತ್ತಿಪರರು ತನ್ನ ಮಾಹಿತಿಗಳನ್ನು ಉಚಿತವಾಗಿಯೇ ನೋದಾಯಿಸಿಕೊಳ್ಳಬಹುದಾಗಿದೆ. ಸ್ಥಾಪಕರಾದ ಮುಹಮ್ಮದ್ ಅಲಿ ಕಮ್ಮರಡಿ, ಮುಹಮ್ಮದ್ ಕುಳಾಯಿ, ಶಹಾಝ್ ಮುಹಮ್ಮದ್, ಉಮರ್ ಟೀಕೆ, ಇಕ್ಬಾಲ್ ಅಹ್ಮದ್, ಶಬೀರ್, ಬದ್ರುದ್ದೀನ್ ಕೆ. ಮಾಣಿ ಸಹಿತ ಗಣ್ಯರು ಉಪಸ್ಥಿತರಿದ್ದರು.

ಸಾಂಸ್ಕೃತಿಕ, ಆಹಾರ ಮೇಳ

ಕರಾವಳಿಯ ಸಾಂಸ್ಕೃತಿಕ ರಂಗು ದಫ್, ಮಾಪ್ಪಿಳ ಹಾಡುಗಳು ಕೇಳುಗರನ್ನು ಇಂಪು ಮಾಡಿಸಿದ್ದವು. ಮಾತ್ರವಲ್ಲದೇ ಬ್ಯಾರಿಗಳ ಆಹಾರ ಶೈಲಿಗಳಾದ ನೀರು ದೋಸೆ, ಕಲ್ತಪ್ಪ, ಮೀನು ಸಾರು ಗಳಂತಹ ಆಹಾರಗಳು ಕೂಟದಲ್ಲಿ ತಿಂಡಿ ಪ್ರಿಯರನ್ನು ಕೈಬಿಸಿ ಕರೆಯುತ್ತಿತ್ತು. ಬ್ಯಾರಿ ವಸ್ತು ಪ್ರದರ್ಶನವು ಇದ್ದವು.


ಬ್ಯಾರಿ ಕೂಟದಲ್ಲಿ ಸೇರಿದವರು ಹೇಳಿದ್ದೇನು?

"ಬಾಲ್ಯದ ದಿನಗಳು ನೆನಪಾಯಿತು..."

ಬ್ಯಾರಿ ಸಮುದಾಯ ಸಂಸ್ಕೃತಿ, ಇತಿಹಾಸವನ್ನು ಎತ್ತಿ ಹಿಡಿಯಲು ಬ್ಯಾರಿ ಕೂಟ ಆಯೋಜನೆಯಾಗುತ್ತಿರಬೇಕು. ಕರಾವಳಿ ಭಾಗದ ಲಾಗೋರಿ, ಗೋಲಿ ಆಟ ಆಡಿದಾಗ ಬಾಲ್ಯದ ದಿನಗಳಿಗೆ ಕರೆದುಕೊಂಡು ಹೋಯಿತು. - ಝೋಹರಾ ನಿಸಾರ್ ಪುತ್ತೂರು

"ಇಂತಹ ಕೂಟಗಳು ಪ್ರಸ್ತುತ ದಿನಗಳಲ್ಲಿ ಅಗತ್ಯ.."

15 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದೇವೆ. ಪ್ರಸ್ತುತ ದಿನಗಳಲ್ಲಿ ಇಂತಹ ಬ್ಯಾರಿ ಕೂಟಗಳು ಇನ್ನಷ್ಟು ನಡೆಯುತ್ತಿರಲಿ ಎಂಬುವುದು ನಮ್ಮ ಆಶಯ. - ನಿಸಾತ್ ಫಾತಿಮಾ, ಮಂಗಳೂರು

"ಬ್ಯಾರಿ ಕೂಟ ಹಬ್ಬದಂತಾಗಿದೆ..."

ಬೆಂಗಳೂರಿಗೆ ಬಂದು ಇಲ್ಲಿ ಇಷ್ಟು ದೊಡ್ಡ ಮಟ್ಟದ ಸಾವಿರಾರು ಮಂದಿ ಸೇರಿ ಮಾಡಿರುವ ಬ್ಯಾರಿ ಕೂಟ ಹಬ್ಬದ ಕಳೆ ಬಂತಾಗಿದೆ. ಇಲ್ಲಿ ಹಲವಾರು ಮಂದಿಗಳ ಪರಿಚಯ ಆಯಿತು. - ಅಶ್ರಫ್ ಕೊಡ್ಲಿಪೇಟೆ

"ಸೋಶಿಯಲ್ ಮೀಡಿಯಾ ಜಗತ್ತಲ್ಲಿ ಇಂತಹ ಕೂಟ ಅಗತ್ಯ.."

ಡಿಜಿಟಲ್ ಲೋಕದಲ್ಲಿ ಎಲ್ಲರೂ ಸೋಶಿಯಲ್ ಮೀಡಿಯದಲ್ಲಿ ಮೊಬೈಲ್‌ನಲ್ಲೇ ಕಳೆದು ಹೋಗಿದ್ದಾರೆ. ಇಂತಹ ಕೂಟಗಳು ಜನರ ಮನಶಾಂತಿಗೆ ಪೂರಕವಾಗಿರುತ್ತದೆ. - ಇರ್ಫಾನ್ ವಿಟ್ಲ










share
ಇಬ್ರಾಹಿಂ ಖಲೀಲ್ ಬನ್ನೂರು
ಇಬ್ರಾಹಿಂ ಖಲೀಲ್ ಬನ್ನೂರು
Next Story
X