ಕೆಎಸ್ಸಾರ್ಟಿಸಿಗೆ ರಾಷ್ಟ್ರೀಯ ಇಕಾನಾಮಿಕ್ ಟೈಮ್ಸ್ ಪಿಎಸ್ಯು ʼಲೀಡರ್ ಶಿಪ್ ಅಂಡ್ ಎಕ್ಸಲೆನ್ಸ್ ಪ್ರಶಸ್ತಿʼ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೈಗೊಂಡಿರುವ ಬಸ್ಗಳ ಬ್ರಾಂಡಿಂಗ್ ಉಪಕ್ರಮಕ್ಕೆ ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಸಾಧನೆಗೈದ ಕಾರಣಕ್ಕಾಗಿ ಇಕಾನಾಮಿಕ್ ಟೈಮ್ಸ್ ಪಿಎಸ್ಯು ‘ಲೀಡರ್ ಶಿಪ್ ಅಂಡ್ ಎಕ್ಸಲೆನ್ಸ್ ಅವಾರ್ಡ್-2025’ ಪುರಸ್ಕಾರ ದೊರಕಿದೆ.
ಈ ಪ್ರಶಸ್ತಿಯನ್ನು ಹೈಯಟ್ ರಿಜೆನ್ಸಿ ಹೋಟೆಲ್, ದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು. ಈ ಪುರಸ್ಕಾರವನ್ನು ಕೇಂದ್ರ ಸರಕಾರದ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ)ನ ಡೈರೆಕ್ಟರ್ ಜನರಲ್ ಇಂದರ್ ಪಾಲ್ ಸಿಂಗ್ ನಿಗಮಕ್ಕೆ ನೀಡಿದರು.
ಈ ಪ್ರಶಸ್ತಿಯನ್ನು ಕೆಎಸ್ಸಾರ್ಟಿಸಿ ನಿಗಮದ ಪರವಾಗಿ ವೆಂಕಟೇಶ್ ಟಿ., ಮುಖ್ಯ ಕಾನೂನು ಅಧಿಕಾರಿ ಮತ್ತು ಕುತ್ಬುದ್ದೀನ್ ಹವಾಲ್ದಾರ್, ಮುಖ್ಯ ಕಾಮಗಾರಿ ಅಭಿಯಂತರ ಕೇಂದ್ರ ಕಚೇರಿ, ಬೆಂಗಳೂರು ಇವರು ಸ್ವೀಕರಿಸಿದರು.
Next Story





