Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ದೇಶವು ಸಂತೋಷವಾಗಿಲ್ಲ, ಸರ್ವಾಧಿಕಾರ...

ದೇಶವು ಸಂತೋಷವಾಗಿಲ್ಲ, ಸರ್ವಾಧಿಕಾರ ಮಾತ್ರವಲ್ಲ ಆರದ ಗಾಯಗಳಿವೆ : ನಟ ಪ್ರಕಾಶ್ ರಾಜ್

‘ಭಗವಂತನ ಸಾವು’ ಕೃತಿ ಬಿಡುಗಡೆ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ9 Nov 2024 10:45 PM IST
share
ದೇಶವು ಸಂತೋಷವಾಗಿಲ್ಲ, ಸರ್ವಾಧಿಕಾರ ಮಾತ್ರವಲ್ಲ ಆರದ ಗಾಯಗಳಿವೆ : ನಟ ಪ್ರಕಾಶ್ ರಾಜ್

ಬೆಂಗಳೂರು: ‘ಹೃದಯವಂತ ಮನುಷ್ಯನ ಊಹೆಗೂ ನಿಲುಕದಂತ ಕ್ರೌರ್ಯವು ಮಲಯಾಳಂನ ಲೇಖಕಿ ಕೆ.ಆರ್.ಮೀರಾ ರಚಿಸಿದ ‘ಭಗವಂತನ ಸಾವು’ ಕೃತಿಯಲ್ಲಿದೆ. ಕೃತಿಯಲ್ಲಿನ ಎಲ್ಲ ಕತೆಗಳನ್ನು ನಾನು ಓದಿದ್ದು, ಕತೆಗಳು ಪ್ರಸಕ್ತ ಸನ್ನೀವೇಶಕ್ಕೆ ತಕ್ಕಂತಿವೆ’ ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಇಲ್ಲಿನ ಚಿತ್ರಕಲಾ ಪರಿಷತ್ತಿನಲ್ಲಿ ಬಹುರೂಪಿ ಹಾಗೂ ಡಾ.ಎಂ.ಎಂ. ಕಲಬರ್ಗಿ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ಮಲಯಾಳಂನ ಲೇಖಕಿ ಕೆ.ಆರ್.ಮೀರಾ ಬರೆದಿರುವ ಹಾಗೂ ವಿಕ್ರಂ ಕಾಂತಿಕೆರೆ ಅವರು ಕನ್ನಡಕ್ಕೆ ಅನುವಾದಿಸಿರುವ ‘ಭಗವಂತನ ಸಾವು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶವು ಸಂತೋಷವಾಗಿಲ್ಲ. ಸರ್ವಾಧಿಕಾರ ಮಾತ್ರವಲ್ಲ, ಆರದ ಗಾಯಗಳಿವೆ. ನಮ್ಮ ಚರ್ಮದ ಮೇಲೆ ಅಷ್ಟೇ ಅಲ್ಲ, ನಮ್ಮ ಮನಸಿನ ಮೇಲೂ ಆಳವಾದ ಗಾಯಗಳಿವೆ. ನಮಗೆ ನಾವೇ ಮಾಡಿಕೊಂಡ ಗಾಯಗಳಿವೆ, ನಮ್ಮನ್ನು ಗಾಸಿಗೊಳಿಸಿ, ಗಾಯ ಮಾಡಿರುವ ಬಗ್ಗೆ ಮಾತನಾಡಲು ಆಗದಂತಹ ಅಸಹಾಯಕ ನೋವು ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಕೃತಿ ಅತ್ಯಂತ ಪ್ರಸ್ತುತವಾದ ಕೃತಿ ಎಂದು ಅವರು ಬಣ್ಣಿಸಿದರು.

ಸಂಶೋಧಕ ಎಂ.ಎಂ.ಕಲ್ಬುರ್ಗಿ ಇರಬಹುದು, ಪತ್ರಕರ್ತೆ ಗೌರಿ ಲಂಕೇಶ್ ಇರಬಹುದು, ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಇರಬಹುದು, ಜೈಲಿನಲ್ಲಿರುವ ಬಹಳಷ್ಟು ಮುಂದಿಯ ಕಥೆಗಳನ್ನು ನಾವು ಓದಿದರೆ ಅಥವಾ ನೆನನಪಾದರೆ ನಾವು ಬದುಕುತ್ತಿರುವ ಕಾಲ ಯಾವುದು ಎಂಬುವುದು ನಮಗೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.

ನಂಬಲಾಗದಂತಹ ಜೀರ್ಣಿಸಿಕೊಳ್ಳಲಾಗದ ಕೌರ್ಯವನ್ನು ನಾವು ನೋಡುತ್ತಿದ್ದೇವೆ. ಕೃತಿಯಲ್ಲಿನ ಕತೆಗಳೆಲ್ಲವೂ ಕಾಲ್ಪನಿಕವಾಗಿದ್ದು, ಬದುಕಿರುವ ಅಥವಾ ಕಾಲವಾಗಿರುವ ಯಾವುದಾದರೂ ವ್ಯಕ್ತಿಯ ಜೊತೆಗೆ ಇಲ್ಲಿನ ಪಾತ್ರಗಳು ಹೋಲುತ್ತವೆ ಎಂದಾದರೆ ಅದಕ್ಕೆ ನಾವು ಬದುಕುತ್ತಿರುವ ಕಾಲವೇ ಕಾರಣವಾಗಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.

ಕೃತಿಯಲ್ಲಿ ಸಂತೈಸಲು ಬಂದವರಿಂದಲೇ ಕೊಲೆಯಾಗುವ ಕಥೆ ಇದೆ. ಗೌರಿ, ಕಲ್ಬುರ್ಗಿ, ಸ್ಟಾನ್‍ಸ್ವಾಮಿ ಇವರ್ಯಾರು ಸತ್ತಿಲ್ಲ, ಇವರ ಯೋಚನೆ, ಸ್ಫೂರ್ತಿ ಇವರನ್ನು ಸಾಯುವಂತೆ ಮಾಡುವುದಿಲ್ಲ. ಇಂತವರನ್ನು ಕೊಂದರೆ ಇವರ ಬಳಗದ ಮತ್ತೊಂದು ಧ್ವನಿ ದೊಡ್ಡದಾಗಿ ಬೆಳೆಯುತ್ತದೆ. ಒಂದು ದ್ವನಿ ಅಡಗಿಸಲು ಪ್ರಯತ್ನ ಮಾಡಿದರೆ ಮತ್ತೊಂದು ದ್ವನಿ ದೊಡ್ಡದಾಗಿ ಹುಟ್ಟಿ ಕೊಳ್ಳುತ್ತದೆ. ಸತ್ತವರ ಮುಂದೆ ನಾವು ಬದುಕಿದ್ದೇವೆ ಎಂದರು.

ಇವತ್ತು ನ್ಯಾಯಮೂರ್ತಿಗಳು ತೀರ್ಪು ಕೊಡುವ ಮುನ್ನ ಭಗವಂತನ ಮುಂದೆ ಹೋಗುತ್ತಿದ್ದಾರಂತೆ, ಅವರು ಭಗವಂತನ ಮಾತು ಕೊಳ್ಳತ್ತಾರಾ? ಇಲ್ಲವೇ, ಭಗವಾನ್ ಮಾತು ಕೇಳುತ್ತಾರ ಗೊತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಪ್ರಗತಿಪರ ಚಿಂತಕರಾದ ಸಿದ್ದನಗೌಡ ಪಾಟೀಲ ಮಾತನಾಡಿ, ಕೌರ್ಯವನ್ನು ಶೌರ್ಯ ಎಂದು ಬಿಂಬಿಸುವ ಕಾಲದಲ್ಲಿ ನಾವಿದ್ದೇವೆ. ಗೌರಿ ಸೇರಿ ಕಲಬುರಗಿಯನ್ನು ಕೊಂದವರನ್ನು ಶೂರರು ಎಂದು ಕರೆಯಲಾಗುತ್ತಿದೆ. ಇಂತಹ ಮತಾಂಧತೆಯು ದೇಶದಲ್ಲಿ ಸ್ಪೂರ್ತಿ ಪಡೆದುಕೊಳ್ಳುತ್ತಿದೆ. ಹೀಗಾಗಿ ಸತ್ಯ ಹೇಳಲು ಹೆದರುತ್ತಿದ್ದಾರೆ ಎಂದರು.

ಕೃತಿಯಲ್ಲಿ ವ್ಯವಸ್ಥೆಯ ವಿರೋಧದ ಚಿಂತನೆಗಳು ಇವೆ. ನಮ್ಮ ಬರಹಗಾರರು ಪ್ರಸ್ತುತ ಸಂಘರ್ಷಗಳನ್ನು ಬರೆಯಬೇಕಾಗಿದೆ. ಮತೀಯರನ್ನು ಮತಾಂಧರಾಗಿ ಬದಲಾವಣೆ ಮಾಡುತ್ತಿದ್ದಾರೆ. ಧಾರ್ಮಿಕ ಸರ್ವಾಧಿಕಾರ, ಆರ್ಥಿಕ ಸರ್ವಾಧಿಕಾರ ಮತ್ತು ಭಾಷಾ ಸಾರ್ವಧಿಕಾರ ದೇಶದ ಜನರ ಮೇಲೆ ದಾಳಿ ಮಾಡುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಾಹಿತಿಗಳು ಕೆಲಸ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಲೇಖಕಿ ಕೆ.ಆರ್. ಮೀರಾ, ವಿಕ್ರಂ ಕಾಂತಿಕೆರೆ, ಶ್ರೀವಿಜಯ ಕಲ್ಬುರ್ಗಿ ಸೇರಿದಂತೆ ಮತ್ತಿತರರು ಇದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X