ವಾರ್ತಾ ಇಲಾಖೆಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಜಿ.ಎನ್.ದೇಸಾಯಿ ನಿಧನ
ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಣಿಜ್ಯ ಪ್ರಚಾರ ಶಾಖೆಯಲ್ಲಿ ಸುಧೀರ್ಘವಾಗಿ ಕಾರ್ಯನಿರ್ವಹಿಸಿ ಅಧೀಕ್ಷಕರಾಗಿ ನಿವೃತ್ತಗೊಂಡಿದ್ದ ಜಿ.ಏನ್ ದೇಸಾಯಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಜಿ.ಏನ್ ದೇಸಾಯಿ (67) ಅವರು ಮಡದಿ ಹಾಗೂ ಏಕೈಕ ಪುತ್ರಿಯನ್ನು ಅಗಲಿದ್ದಾರೆ.
ದಶಕಗಳ ಕಾಲ ವಾಣಿಜ್ಯ ಪ್ರಚಾರ ಶಾಖೆಯ ಕಾರ್ಯಚಟುವಟಿಕೆಗಳ ಭಾಗವಾಗಿದ್ದ ದೇಸಾಯಿ ಅವರು ಕೆಲ ಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ದೇಸಾಯಿಯವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸ್ನೇಹಿತರು, ಮಾಧ್ಯಮ ರಂಗ ಹಾಗೂ ಬಂಧು-ಬಳಗದವರು ಸಂತಾಪ ಸೂಚಿಸಿದ್ದಾರೆ.
Next Story