Belagavi | ಕಾಲುವೆಯಲ್ಲಿ ಈಜಲು ತೆರಳಿ ದುರಂತ; ಇಬ್ಬರು ಬಾಲಕರು ನೀರುಪಾಲು

ಸಾಂದರ್ಭಿಕ ಚಿತ್ರ
ಬೆಳಗಾವಿ : ಈಜಲು ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ದುರ್ಘಟನೆ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕರನ್ನು ಹಣಮಂತ ದುರ್ಗಪ್ಪ ಹಗೇದ (10) ಮತ್ತು ಬಸವರಾಜ ರಮೇಶ ಸೋಮಣ್ಣವರ (10) ಎಂದು ಗುರುತಿಸಲಾಗಿದೆ. ತಂದೆಯೊಂದಿಗೆ ಕುರಿ ಕಾಯಲು ತೆರಳಿದ್ದ ಸಂದರ್ಭದಲ್ಲಿ, ಸಮೀಪದ ಕಾಲುವೆಯಲ್ಲಿ ಈಜಲು ಮಕ್ಕಳು ಇಳಿದಿದ್ದಾರೆ. ಬಳಿಕ ಸಾಕಷ್ಟು ಸಮಯ ಕಳೆದರೂ ಮಕ್ಕಳು ಕಾಣಿಸದೇ ಇದ್ದುದರಿಂದ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಇಬ್ಬರ ಮೃತದೇಹಗಳು ಕಾಲುವೆಯಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.
ಘಟನೆಯ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಶೋಕ ವಾತಾವರಣ ಆವರಿಸಿದೆ.
Next Story





