ಪ್ರಸಕ್ತ ಮಳೆಗಾಲದಲ್ಲಿ ಇಂಧನ ಇಲಾಖೆಗೆ 156 ಕೋಟಿ ರೂ. ನಷ್ಟ : ಕೆ.ಜೆ. ಜಾರ್ಜ್

ಕೆ.ಜೆ.ಜಾರ್ಜ್
ಬೆಳಗಾವಿ : ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆಯ ಪರಿಣಾಮ, ವಿದ್ಯುತ್ ಕಂಬಗಳು, ಪರಿವರ್ತಕಗಳು ಮತ್ತು ವಿದ್ಯುತ್ ಮಾರ್ಗಗಳಿಗೆ 156 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಕ್ತ ಸಾಲಿನ ಮಳೆಗಾಲದಲ್ಲಿ 74,594 ವಿದ್ಯುತ್ ಕಂಬಗಳು, 5,109 ಪರಿವರ್ತಕಗಳು ಹಾಗೂ 1693.19 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿ ಸಂಭವಿಸಿದೆ ಎಂದರು.
ರಾಜ್ಯಕ್ಕೆ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಉಂಟಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಾನಿಯನ್ನು ತಗ್ಗಿಸಲು ಮುಂಗಾರು ಪೂರ್ವದಲ್ಲಿ ಪೂರ್ವ ಸಿದ್ಧತೆ/ಸನ್ನದ್ಧತೆ ಕ್ರಮಗಳನ್ನು ತಜ್ಞ ಪಾಲಿಸುವ ಸಲುವಾಗಿ, ಇಲಾಖೆ ವತಿಯಿಂದ ಪೂರ್ವಭಾವಿಯಾಗಿ ಮುಂಗಾರು ಪೂರ್ವ ನಿರ್ವಹಣೆ ಜಾರಿಗೊಳಿಸುವಂತೆ ಸೂಚಿಸಿ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಹೇಳಿದರು.





