ಬಿಡಿಎಗೆ PRCI ರಾಷ್ಟ್ರೀಯ ಪ್ರಶಸ್ತಿ

ಹೊಸದಿಲ್ಲಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಬಿಡಿಎ ಗ್ಯಾರಂಟಿ – ನಾಗರಿಕರ ಅಹವಾಲು ಪರಿಹಾರ ಸೇವೆಗಾಗಿ ಪ್ರತಿಷ್ಠಿತ ಪಿಆರ್ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಹೊಸದಿಲ್ಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಿಡಿಎ ಅಧ್ಯಕ್ಷರಾದ ಎನ್.ಎ. ಹಾರಿಸ್ ಅವರ ನೇತೃತ್ವದಲ್ಲಿ ಆರಂಭಗೊಂಡ ಬಿಡಿಎ ಗ್ಯಾರಂಟಿ – ನಾಗರಿಕರ ಅಹವಾಲು ಪರಿಹಾರ ಸೇವೆ ನಾಗರಿಕರ ದೂರುಗಳನ್ನು ಪಾರದರ್ಶಕ, ಸಮಯೋಚಿತ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಪರಿಹರಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನಾಗರಿಕ-ಕೇಂದ್ರಿತ ಆಡಳಿತದಲ್ಲಿ ತೋರಿದ ಈ ಸಾಧನೆಯನ್ನು ಗುರುತಿಸಿ ಪಿಆರ್ಸಿಐ ಈ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಬಿಡಿಎ ಪರವಾಗಿ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್, ಐಎಎಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ, ಬಿಡಿಎ ಅಧ್ಯಕ್ಷ ಎನ್.ಎ. ಹಾರಿಸ್ ಅವರಿಗೆ ದೂರದರ್ಶಿ ನಾಯಕತ್ವ ಪ್ರಶಸ್ತಿ ಹಾಗೂ ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್, ಐಎಎಸ್ ಅವರಿಗೆ ಪರಿವರ್ತನಾತ್ಮಕ ಸಾರ್ವಜನಿಕ ಸೇವಾ ಪ್ರಶಸ್ತಿ ಘೋಷಿಸಲಾಯಿತು.
ಈ ಗೌರವವು ನಾಗರಿಕರ ಸೇವೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ ಪಾರದರ್ಶಕ, ಉತ್ತರದಾಯಿ ಮತ್ತು ಜನಪರ ಆಡಳಿತವನ್ನು ನೀಡುವ ಬಿಡಿಎಯ ಬದ್ಧತೆಗೆ ದೊರೆತ ರಾಷ್ಟ್ರೀಯ ಮನ್ನಣೆಯಾಗಿದೆ.






