Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. Bengaluru| ಕೃಷಿ ಮೇಳದಲ್ಲಿ 54.16 ಲಕ್ಷ...

Bengaluru| ಕೃಷಿ ಮೇಳದಲ್ಲಿ 54.16 ಲಕ್ಷ ಜನರು ಭಾಗಿ, 4.77ಕೋಟಿ ರೂ. ವಹಿವಾಟು

ವಾರ್ತಾಭಾರತಿವಾರ್ತಾಭಾರತಿ16 Nov 2025 11:39 PM IST
share
Bengaluru| ಕೃಷಿ ಮೇಳದಲ್ಲಿ 54.16 ಲಕ್ಷ ಜನರು ಭಾಗಿ, 4.77ಕೋಟಿ ರೂ. ವಹಿವಾಟು

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನ.13ರಿಂದ 16ರ ವರೆಗೆ ನಡೆದ ಕೃಷಿ ಮೇಳದಲ್ಲಿ ಸುಮಾರು 54.16 ಲಕ್ಷ ಜನರು ಭಾಗಿಯಾಗಿದ್ದು, 4.77 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಹಿವಾಟನ್ನು ನಡೆಸುವ ಮೂಲಕ ಸಮಾರೋಪಗೊಂಡಿದೆ.

ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳವು ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗದ ರೈತರು ಮತ್ತು ಕೃಷಿಯ ಬಗ್ಗೆ ತಿಳಿದುಕೊಳ್ಳುವ ಆಸಕ್ತ ಜನರಿಗೆ ಸಹಕಾರಿಯಾಗಿದ್ದು, ಕೃಷಿ ಯಂತ್ರೋಪಕರಣ, ಬೀಜೋತ್ಪನ್ನ, ತಳಿ, ಸಾವಯವ ರಸಗೊಬ್ಬರ, ವಿವಿಧ ಪ್ರಾಣಿ, ಪಕ್ಷಿಗಳ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.

ಬೀಜೋತ್ಪಾದನೆಗೆ ಹೆಸರುವಾಸಿಯಾದ ಸುವರ್ಣ ಟಗರು, ಶ್ರೀಕೃಷ್ಣ ಗೋಶಾಲಾ ಹಾಗೂ ಇನ್ನಿತರೆ ಗೋಶಾಲೆಗಳ ಪ್ರದರ್ಶನದಲ್ಲಿದ್ದ ಹಳ್ಳಿಕಾರ್, ಓಂಗಲ್, ಬದ್ರಿ, ಕೊಂಬು ಇಲ್ಲದ ರಾಠಿ ಸೇರಿದಂತೆ ಅನೇಕ ವಿಶಿಷ್ಟ ತಳಿಗಳನ್ನು ನೋಡಲು ಸಾರ್ವಜನಿಕರು ಮುಗಿ ಬಿದ್ದಿದ್ದರು.

ಬಗೆ ಬಗೆಯ ಆಹಾರ ಮಳಿಗೆಗಳು, ಕೃಷಿ ಉತ್ಪನ್ನ ಮಳಿಗೆ, ಸಾವಯವ ಆಹಾರ ಮಳಿಗೆಗಳಲ್ಲಿ ಸಾಲು ಸಾಲು ಜನರು ಭೇಟಿ ನೀಡಿ ತಮಗೆ ಬೇಕಾದ ವಸ್ತುವನ್ನು ಖರೀದಿಸುವುದು ಮತ್ತು ಮಾಹಿತಿ ಪಡೆಯವ ಕೆಲಸ ಜೋರಾಗಿ ನಡೆಯಿತು.

ಲಾಲ್‍ಬಾಗ್‍ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಮಾದರಿಯನ್ನಾಗಿಟ್ಟುಕೊಂಡು ಕೃಷಿ ಮೇಳದಲ್ಲಿಯೂ ಫಲಪುಷ್ಪ ಪ್ರದರ್ಶನ ಮಾಡಿದ್ದು, ಹೂವು ಎಲೆಗಳಿಂದ ಮಾಡಿದ್ದ ಟ್ರ್ಯಾಕ್ಟರ್, ಮೀನು, ಕುರಿ, ಅನಾನಸ್, ಬಾಳೆ ಹಣ್ಣು, ವಿವಿಧ ಧಾನ್ಯಗಳಿಂದ ಮಾಡಿದ್ದ ಕರ್ನಾಟಕದ ನಕ್ಷೆ ಆಕರ್ಷಣೀಯವಾಗಿದ್ದು, ಅವುಗಳ ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಗಮನ ಸೆಳೆದ ಕೀಟ ಪ್ರಪಂಚ: ಪ್ರಕೃತಿಯಲ್ಲಿನ ಜೇನು, ಚಿಟ್ಟೆಗಳು, ಮಳೆ ಹುಳು, ಕವಲು ತೋಕೆ ಚಿಟ್ಟೆಗಳು, ಸಗಣಿ ಉಂಡೆ, ರಸ ಹೀರುವ ಪತಂಗ, ಸ್ಪಿಂಗಿಡ್ ಪತಂಗ, ಮಲಬಾರ್ ಚಿಟ್ಟೆಗಳು, ಜಲಚರ ಕೀಟಗಳು ಹಾಗೂ ರೇಷ್ಮೆ ಬೆಳೆಯುವ ಹಂತಗಳ ಪ್ರದರ್ಶನ, ಕೀಟಗಳಲ್ಲಿ ಮಾಡಬಹುದಾದ ವಿವಿಧ ಬಗೆ ಬಗೆಯ ಖಾದ್ಯಗಳ ಪರಿಚಯ ನೋಡಿ ಜನರು ದಂಗಾದರು.

ಬಾಧಿಸಿದ ನೆಟ್‍ವರ್ಕ್ ಸಮಸ್ಯೆ: ಕೃಷಿ ಮೇಳದ ಕೊನೆಯ ದಿನದಂದು ಸುಮಾರು 15 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿರುವುದರಿಂದ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಎದುರಾಯಿತು. ನೆಟ್‍ವರ್ಕ್ ಸಮಸ್ಯೆಯ ಕಾರಣದಿಂದ ಮಳಿಗೆಗಳಲ್ಲಿ ಆಗಬೇಕಿದ್ದ ಆನ್‍ಲೈನ್ ವಹಿವಾಟು ಕಡಿಮೆಯಾಯಿತು. ಅನೇಕ ಮಳಿಗೆಗಳ ಮಾಲಕರು ಆನ್‍ಲೈನ್ ಪೇಮೆಂಟ್‍ಗಳಿಗೆ ಅವಕಾಶ ನೀಡದೇ ಬರೀ ನಗದು ಮಾತ್ರ ಅವಕಾಶ ನೀಡಿರುವುದು ಕಂಡು ಬಂದಿತು.

4 ದಿನಗಳ ಒಟ್ಟು ವಹಿವಾಟು: ಮೊದಲ ದಿನ (ನ.13) 8.51 ಲಕ್ಷ ಜನ ಭಾಗವಹಿಸಿದ್ದು 0.62ಕೋಟಿ ರೂ.ವಹಿವಾಟು, 2ನೇ ದಿನ 11.85ಲಕ್ಷ ಜನ ಭಾಗವಹಿಸಿದ್ದು 1.8ಕೋಟಿ ರೂ.ವಹಿವಾಟು, 3ನೇ ದಿನ 15.87ಲಕ್ಷ ಜನರು ಭಾಗವಹಿಸಿದ್ದು 1.62ಕೋಟಿ ರೂ. ವಹಿವಾಟು, 4ನೇ ದಿನ 17.93ಲಕ್ಷ ಜನರು ಭಾಗವಹಿಸಿ 1.45ಕೋಟಿ ರೂ. ವಹಿವಾಟು, ಒಟ್ಟು 54.16ಲಕ್ಷ ಜನರು ಭಾಗವಹಿಸಿದ್ದು, 4.77ಕೋಟಿ ರೂ. ವಹಿವಾಟು ಆಗಿದೆ ಎಂದು ಕೃಷಿ ವಿವಿ ತಿಳಿಸಿದೆ








share
ವಾರ್ತಾಭಾರತಿ
ವಾರ್ತಾಭಾರತಿ
Next Story
X