ʼಶಿಕ್ಷಕರ ನೇಮಕಾತಿʼ ವಿಚಾರ | ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರನ್ನು ಭೇಟಿಯಾದ SYM ನಿಯೋಗ

ಬೆಂಗಳೂರು : ಸೋಲಿಡಾರಿಟಿ ಯೂತ್ ಮೂವ್ಮೆಂಟ್ (SYM) ರಾಜ್ಯ ನಿಯೋಗದ ನೇತೃತ್ವದಲ್ಲಿ ಮರಾಠಿ ಹಾಗೂ ಉರ್ದು ಶಿಕ್ಷಕ ಅಭ್ಯರ್ಥಿಗಳು ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರನ್ನು ಭೇಟಿಯಾಗಿ, 2026–27ನೇ ಸಾಲಿನ PSTR, GPTR ಹಾಗೂ HSTR ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಕಂಡುಬಂದಿರುವ ವಿವಿಧ ಲೋಪಗಳು ಹಾಗೂ ಅಭ್ಯರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ಅಭ್ಯರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಬಲ್ಕೀಸ್ ಬಾನು ಅವರು, ಈಗಾಗಲೇ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಸಲ್ಲಿಸಿದ್ದ ಮನವಿಯನ್ನು ಉಲ್ಲೇಖಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಈ ವಿಷಯವನ್ನು ವಿಧಾನ ಪರಿಷತ್ನಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ, ಧ್ವನಿ ಎತ್ತುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಡಾ.ನಸೀಮ್ ಅಹ್ಮದ್, ರಾಜ್ಯ ಕಾರ್ಯದರ್ಶಿಗಳಾದ ಅಸದುಲ್ಲಾ ಖಾನ್ ಝಕಿ, ಮುರ್ತುಜಾ ಕಾಕ್ಬಾಲ್ ,ಯಾಸೀನ್ ಮುಚಾಲಿ, ಸುಲೈಮಾನ್ ಮುಚಾಲಿ, ಮುರ್ತುಜಾ ಮುಲ್ಲಾ, ಮರಾಠಿ ಶಿಕ್ಷಕ ಅಭ್ಯರ್ಥಿಗಳಾದ ಸಾಗರ್ ಚಿಕ್ಕೋಡಿ, ಗಣೇಶ್ ಖಾನಾಪುರ ಉಪಸ್ಥಿತರಿದ್ದರು. ನಿಯೋಗದಲ್ಲಿ ಬಾಗಲಕೋಟೆ, ಬೀದರ್, ಇಳಕಲ್ ಸೇರಿದಂತೆ ಮರಾಠಿ ಹಾಗೂ ಉರ್ದು ಶಿಕ್ಷಕ ಅಭ್ಯರ್ಥಿಗಳು ಇದ್ದರು.




