ಔರಾದ್ | ಅಮರೇಶ್ವರ್ ಗೋ ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು

ಔರಾದ್ : ಅಮರೇಶ್ವರ್ ಗೋ ಶಾಲೆಗೆ ದಿಢೀರನೆ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ್ ಅವರು, ಗೋ ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಅಲ್ಲಿನ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗೋ ಶಾಲೆಯಲ್ಲಿನ ಜಾನುವಾರುಗಳ ಸ್ಥಿತಿ ಪರಿಶೀಲಿಸಿ, ಗೋ ಶಾಲೆಯಲ್ಲಿನ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗೋ ಶಾಲೆಯಲ್ಲಿ ಇಲ್ಲಿಯವರೆಗೆ ಎಷ್ಟು ಜಾನುವಾರುಗಳು ಬಂದಿವೆ. ಈ ಪೈಕಿ ಎಷ್ಟು ಜಾನುವಾರುಗಳ ಮಾರಾಟ ಮಾಡಲಾಗಿದೆ. ಮೃತಪಟ್ಟ ದನಗಳ ಸಂಖ್ಯೆ ಸೇರಿದಂತೆ ಮೇವು, ನೀರಿನ ಸಮಸ್ಯೆ ಸೇರಿದಂತೆ ಸರಕಾರದ ನೀಡಿರುವ ಅನುದಾನದ ಬಗ್ಗೆ ಎಲ್ಲವೂ ಮಾಹಿತಿ ಕೇಳಿದರು.
ಜಾನುವಾರುಗಳು ನಿತ್ಯ ನೀರು ಹಾಗೂ ಮೇವಿನ ಸಮಸ್ಯೆಯಿಂದ ಸೊರಗುತ್ತಿವೆ. ಇಲ್ಲಿ ನೀರಿನ ಸಮಸ್ಯೆಯಿದೆ. ಒಣ ಮೇವು ಮಾತ್ರವಿದೆ. ಹಸಿ ಮೇವು ಜಾನುವಾರುಗಳಿಗೆ ಅಗತ್ಯವಿದೆ ಎಂದು ಅಲ್ಲಿನ ಅಸ್ವಚ್ಛತೆ ಕಂಡು ಸಿಡಿಮಿಡಿಕೊಂಡರು.
ನಿತ್ಯ ಜಾನುವಾರುಗಳು ನೀರಿಗಾಗಿ ಹಾಗೂ ಮೇವಿಗಾಗಿ ಪರದಾಡುತ್ತಿವೆ. ಆದರೂ ಸಂಬಂಧಿಸಿದವರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸದಿರುವುದು ಸರಿಯಾದ ಕ್ರಮವಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಇದರ ಬಗ್ಗೆ ಗಮನ ಕೊಡಬೇಕಿದೆ. ಆದರೆ ಅವರುಗಳೇ ಇದರ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.







