Bidar | ದುಬಲಗುಂಡಿ ಗ್ರಾಮದಲ್ಲಿ ಸೌಹಾರ್ದ ಇಫ್ತಾರ್ ಕೂಟ, ಮಸೀದಿ ದರ್ಶನ ಕಾರ್ಯಕ್ರಮ

ಹುಮನಾಬಾದ್: ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಶನಿವಾರ ಮಸೀದಿ ದರ್ಶನ ಹಾಗೂ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು, ಸಾರ್ವಜನಿಕರು ಜಾತಿ, ಮತ, ಪಂಥ, ಪಕ್ಷ ಎಂಬ ಭೇದಭಾವ ಮರೆತು ಆಗಮಿಸಿದರು. ಎಲ್ಲರನ್ನೂ ಮುಸ್ಲಿಮರು ಹೂವುಗಳು ನೀಡಿ ಸ್ವಾಗತಿಸಿದರು. ಆಗಮಿಸಿದ ಎಲ್ಲರಿಗೂ ಮಸೀದಿ ದರ್ಶನ ಮಾಡಿಸಿ ನಮಾಝ್, ರಮಝಾನ್ ಉಪವಾಸದ ಹಾಗೂ ಪ್ರವಾದಿ ಮುಹಮ್ಮದ್ (ಸ.) ಪೈಗಂಬರ್ ಅವರ ಭೋದನೆ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಶೇಖ್ ಝಾಕೀರ್ ಹುಸೈನ್, ಮುಹಮ್ಮದ್ ಇಫ್ತಿಕಾರ್ ಅಹ್ಮದ್, ಸೈಯದ್ ಹಾಫೇಝ್ ಕಲಿಮುಲ್ಲಾ, ಖಾಲಿದ್, ಮುಫ್ತಿ ತೌಸೀಫ್ ಖಾನ್, ರಫೀಕ್ ಖಾನ್, ಗೌಸ್ ಖಾನ್, ಮೊಹ್ಸಿನ್ ಸವಾರ್, ಅಕ್ಬರ್ ಮಾಸೂಲ್ದಾರ್, ಸೈಯದ್ ಮುಸ್ತಫ, ಅಕ್ರಮ್ ಸೌಧಗಾರ್, ಮುಸ್ತಾಕ್ ಬಾಗವಾನ್, ಸದ್ದಾಂ ಸೌಧಾಗರ್, ಸೈಯದ್ ಆಸಿಫ್, ಶೇಕ್ ಸುಹೈಲ್, ಶಿವರಾಜ್ ಗಂಗಾ ಶೆಟ್ಟಿ, ಶಂಕರ್ ಗಂಗಾ ಪಾಟೀಲ್, ಲೋಕೇಶ್ ಮುತ್ಯಾ, ಅಶೋಕ್ ಚಳಕಾಪುರೆ, ಡಾ.ಅನಿಲ್, ಸತೀಶ್ ರತ್ನಾಕರ್, ವೆಂಕಟ್ ಭೋಲಾ, ಭರತ್ ಭಾಗ್ಯಕರ್, ರಾಹುಲ್ ಉದ್ದಾ ಹಾಗೂ ರವಿಚಂದ್ರ ಭೋಲಾ ಸೇರಿದಂತೆ ಎಲ್ಲ ಜಾತಿ ಧರ್ಮದ ಮುಖಂಡರು, ಸಾರ್ವಜನಿಕ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಅತ್ಯಂತ ಖುಷಿ ತಂದಿದೆ ಸಹೋದರತ್ವ ಮನೋಭಾವನೆ ಬೆಳೆಸುವ ಕಾರ್ಯಕ್ರಮ ಇದಾಗಿದೆ.
- ಅಶೋಕ್ ಚಳಕಾಪುರೆ
ಮಸೀದಿ ದೇವಾಲಯದಲ್ಲಿ ವ್ಯತ್ಯಾಸವಿಲ್ಲ ಎರೆಡು ಕಡೆ ಇರೋದು ಪರಮಾತ್ಮ.
- ಶಿವರಾಜ್ ಗಂಗಶೆಟ್ಟಿ
ನಮ್ಮ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೊದಲು ನಾವು ಸಹೋದರತೆಯಿಂದ ಕೆಲ ಮುಖಂಡರು ಸೇರಿ ಇಫ್ತಾರ್ ಕೂಟ ಮಾಡಿದ್ದೇವೆ. ಆದರೆ ನಮ್ಮ ಸಮುದಾಯದ ಯುವಕರು ಗ್ರಾಮದಲ್ಲಿ ಭಾವೈಕ್ಯ ಬೆಳೆದು, ಸಹೋದರತೆಯ ಮನೋಭಾವನೆ ಹುಟ್ಟಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮ ಮನಸ್ಸುಗಳನ್ನ ಜೋಡಿಸುವ ಕಾರ್ಯಕ್ರಮ ವಾಗಿದೆ.
- ರಫೀಕ್ ಖಾನ್







