Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೀದರ್
  4. ಬೀದರ್ | ಫೆ.12 ರಂದು ದೆಹಲಿಯಲ್ಲಿ...

ಬೀದರ್ | ಫೆ.12 ರಂದು ದೆಹಲಿಯಲ್ಲಿ ಬೋಧಗಯಾ ಮುಕ್ತಿ ಆಂದೋಲನ ನಡೆಸಲಾಗುವುದು : ಭಂತೆ ವಿನಾಚಾರ್ಯ

ವಾರ್ತಾಭಾರತಿವಾರ್ತಾಭಾರತಿ24 Oct 2025 8:29 PM IST
share
ಬೀದರ್ | ಫೆ.12 ರಂದು ದೆಹಲಿಯಲ್ಲಿ ಬೋಧಗಯಾ ಮುಕ್ತಿ ಆಂದೋಲನ ನಡೆಸಲಾಗುವುದು : ಭಂತೆ ವಿನಾಚಾರ್ಯ

ಬೀದರ್ : ಫೆ.12 ರಂದು ದೆಹಲಿಯಲ್ಲಿ ಬೋಧಗಯಾ ಮಹಾಬೋಧಿ ಮಹಾವಿಹಾರ್ ಮುಕ್ತಿ ಆಂದೋಲನ ನಡೆಸಲಾಗುವುದು ಎಂದು ಬೋಧಗಯಾ ಮಹಾವಿಹಾರ ಮುಕ್ತಿ ಆಂದೋಲನದ ರೂವಾರಿ ಭಂತೆ ವಿನಾಚಾರ್ಯ ಅವರು ತಿಳಿಸಿದರು.

ಇಂದು ಸಾಯಂಕಾಲ ನಗರದ ಶಿವನಗರದಿಂದ ಸಮತಾ ಸೈನಿಕ ದಳದಿಂದ ಬೃಹತ್ ಬೌದ್ಧ ಧಮ್ಮ ಧ್ವಜ ಯಾತ್ರೆ ನಡೆಸಲಾಯಿತು. ಪಥ ಸಂಚಲನದ ವೇಳೆ ಸುರಿದ ಧಾರಕಾರ ಮಳೆಯಲ್ಲಿಯೇ ಭಂತೆಜಿ, ಸಮತಾ ಸೈನಿಕ ದಳದವರು ಹಾಗೂ ಬೌದ್ಧ ಅನುಯಾಯಿಗಳು ಯಾತ್ರೆ ನಡೆಸಿದರು. ಕೊನೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಇಲ್ಲಿ ಮೊಳಗಿದ ಈ ಧ್ವನಿ ಫೆ.12ರ, 2026 ರಂದು ದೆಹಲಿಯಲ್ಲಿ ಮೊಳಗಬೇಕಿದೆ. ಇಲ್ಲಿನ ಧ್ವನಿ ದೆಹಲಿಯಲ್ಲಿ ಮೊಳಗಿದರೆ ಮೋದಿಯವರ ನಿದ್ದೆ ಹಾಳಾಗುತ್ತದೆ. ಮೋದಿಯವರ ನಿದ್ದೆ ಹಾಳಾದರೆ ಬಿಹಾರದಲ್ಲಿ ಕುಳಿತ ಪಂಡಿತರ ನಿದ್ದೆ ಹಾಳಾಗುತ್ತದೆ. ಯಾವತ್ತು ನಾವು ಬಿಹಾರದಲ್ಲಿನ ಪಂಡಿತರ ನಿದ್ದೆ ಹಾಳು ಮಾಡುತ್ತೇವೆಯೋ ಅದೇ ದಿನ ಅವರು ಬೋಧಗಯಾದ ಮಹಾಬೋಧಿ ಮಹಾವಿಹಾರ ಬಿಟ್ಟು ತಮ್ಮ ಮಂದಿರದ ಒಳಗಡೆ ಓಡಿ ಹೋಗುತ್ತಾರೆ ಎಂದು ಗುಡುಗಿದರು.

134 ವರ್ಷದಿಂದ ಬೌದ್ಧ ಸಾಮಾಜ ಈ ಹೋರಾಟ ನಡೆಸುತ್ತಿದೆ. 1891 ರಲ್ಲಿ ಶ್ರೀಲಂಕಾದ ಭಂತೆ ಧಂಪಾಲ್ ಅವರು ಶ್ರೀಲಂಕಾದಿಂದ ನಡೆದುಕೊಂಡು ಬಂದಿದ್ದರು. ಆವಾಗ ಅವರ ಬೆಂಬಲ ನೀಡುವುದಕ್ಕೆ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬೌದ್ಧರ ಜನಸಂಖ್ಯೆ ಇರಲಿಲ್ಲ. ಪಶ್ಚಿಮ ಬಂಗಾಳ, ಓಡಿಸ್ಸಾ ಹಾಗೂ ಕರ್ನಾಟಕದಲ್ಲಿ ಒಂದಿಷ್ಟು ಬೌದ್ಧರಿದ್ದು, ಅವರಿಗೆ ಬೆಂಬಲ ನೀಡಿದ್ದರು. ಇವಾಗ ಇನ್ನೊಂದು ಸಲ ಆ ಹೋರಾಟಕ್ಕೆ ಕರ್ನಾಟಕದ ಬೌದ್ಧ ಜನರ ಬೆಂಬಲ ನೀಡುವ ಸಮಯ ಬಂದಿದೆ. ಈ ಸಲ ಮಹಾಬೋಧಿ ಮಹಾವಿಹಾರ ಮುಕ್ತ ಮಾಡಿ ತೋರಿಸಬೇಕಾಗಿದೆ ಎಂದರು.

ಡಾ. ಅಂಬೇಡ್ಕರ್ ಅವರು 1956ರಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಿದರು. ಈ ಸಮಾಜಕ್ಕೆ ಸ್ವಾಭಿಮಾನದಿಂದ ಬದುಕಲು ಕಲಿಸಿದರು. ಮಹಾಬೋಧಿ ಮಹಾವಿಹಾರ ಮುಕ್ತ ಮಾಡಿ ಜಗತ್ತಲ್ಲಿ ಅಂಬೇಡ್ಕರ್ ಅವರ ಸಮ್ಮಾನ ಇನ್ನಷ್ಟು ಹೆಚ್ಚಿಸುವುದಕ್ಕಾಗಿ ನೀವು ಪ್ರತಿಜ್ಞೆ ಮಾಡಬೇಕು ಎಂದು ಕೋರಿದರು.

ಭಂತೆ ಸಂಘರಖ್ಖಿತ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಭಂತೆಗಳಾದ ಸಾಕ್ಯಪುತ್ರ ರಾಹುಲ್, ಭಂತೆ ಧಮ್ಮಾನಂದ, ಧಮ್ಮಪಾಲ್, ಚಿಂತಕ ಸೋಮಶೇಖರ್, ಬೌದ್ಧ ಅನುಯಾಯಿಗಳಾದ ರಾಜಪ್ಪಾ ಗೋನಳ್ಳಿಕರ್, ಅನಿಲಕುಮಾರ್ ಬೆಲ್ದಾರ್, ಕಾಶೀನಾಥ್ ಚಲ್ವಾ ಹಾಗೂ ಮಹೇಶ್ ಗೊರನಾಳಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X