ಬೀದರ್ | ಲಾರಿ-ಬೈಕ್ ನಡುವೆ ಢಿಕ್ಕಿ : ಸವಾರ ಮೃತ್ಯು

ಬೀದರ್ : ಬೈಕ್ ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಟ್ಯಾಂಕರ್ ಒಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ್ ಗ್ರಾಮದ ಬಳಿ ನಡೆದಿದೆ.
ತಾಡೋಳಾ ಗ್ರಾಮದ ನಿವಾಸಿ ಘಾಳೆಪ್ಪ ಖರ್ಗೆ (40) ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ.
ಅಪಘಾತದಲ್ಲಿ ವಿಶ್ವನಾಥ್ ಖರ್ಗೆ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಘಟನೆ ವೇಳೆ ಇದೇ ಮಾರ್ಗವಾಗಿ ಕಲಬುರಗಿಗೆ ತೆರಳುತಿದ್ದ ಬಸವಕಲ್ಯಾಣದ ಸಿಪಿಐ ಅಲಿಸಾಬ್ ಅವರು, ಗಾಯಾಳು ವ್ಯಕ್ತಿಗೆ ತಮ್ಮದೆ ಪೊಲೀಸ್ ಜೀಪ್ ನಲ್ಲಿ ಹುಮನಾಬಾದ್ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ನಂತರ ಗಾಯಾಳು ವಿಶ್ವನಾಥ್ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Next Story





