ಬೀದರ್ | ಗಾಂಧೀಜಿಯ ಸ್ವದೇಶಿ ಆಂದೋಲನವು ಭಾರತದ ರಾಷ್ಟ್ರೀಯತೆಯ ಸಾಹಿತ್ಯವನ್ನು ಒಗ್ಗೂಡಿಸಿತು : ಡಾ.ಪ್ರಕಾಶ್ ಬಾಳಿಕಾಯಿ

ಬೀದರ್ : ಗಾಂಧೀಜಿಯವರ ಸ್ವದೇಶಿ ಆಂದೋಲನವು ಭಾರತದ ರಾಷ್ಟ್ರೀಯತೆಯ ಕುರಿತಾದ ಜನ ಮತ್ತು ಸಾಹಿತ್ಯವನ್ನು ಒಗ್ಗೂಡಿಸಿತು ಎಂದು ಡಾ.ಪ್ರಕಾಶ್ ಬಾಳಿಕಾಯಿ ಹೇಳಿದರು.
ಇಂದು ನಗರದ ಕರ್ನಾಟಕ ಕಾಲೇಜಿನಲ್ಲಿ ಭಾರತೀಯ ಇಂಗ್ಲೀಷ್ ಸಾಹಿತ್ಯ ಮತ್ತು ರಾಷ್ಟ್ರ: ಗುರುತು, ಸಂಸ್ಕೃತಿ ಹಾಗೂ ರಾಜಕೀಯ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಇಂಗ್ಲಿಷ್ ಸಾಹಿತ್ಯದ ಮೂರು ಆಧಾರಸ್ತಂಭಗಳೆಂದೆ ಖ್ಯಾತರಾದ ಆರ್.ಕೆ.ನಾರಾಯಣ್, ಮುಲ್ಕ್ ರಾಜ್ ಆನಂದ್, ಮತ್ತು ರಾಜಾರಾವ್ ಅವರ ಬರಹಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಕನ್ನಡದ ಖ್ಯಾತ ಬರಹಗಾರ ಕುವೆಂಪು ಅವರ ಬರಹಗಳು ಇಂಗ್ಲಿಷ ಭಾಷಕ್ಕೆ ಅನುವಾದಿಸಲಾಗಿದೆ. ಇದು ವಿಶ್ವ ಮಾನವ ವಿಶ್ವದಾದ್ಯಂತ ವ್ಯಕ್ತಿಗತ ಮಾನವನ ಮೌಲ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಿ.ಜಿ ಶೆಟ್ಕರ್ ಅವರು ಮಾತನಾಡಿ, ನಮ್ಮ ದೇಶವು ಜಾತಿ, ಧರ್ಮ, ಭಾಷೆ, ಲಿಂಗ ಮತ್ತು ಭೌಗೋಳಿಕ ವ್ಯತ್ಯಾಸಗಳನ್ನು ಲೆಕ್ಕಿಸದೆ ಜನ ಏಕತೆಯಿಂದ ಬದುಕುತ್ತಿದ್ದಾರೆ. ಇದು ಐಕ್ಯತೆಯ ಸಂಕೇತವಾಗಿದೆ. ನಮ್ಮ ಇಂಗ್ಲಿಷ್ ಸಾಹಿತ್ಯದಲ್ಲಿ ಚಿತ್ರಿಸಿದ ಬ್ರದರ್ ಹುಡ್ನಂತೆ ನಾವು ಉಳಿದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಗೀತಾ ರಾಗಾ, ಜಂಟಿ ಕಾರ್ಯದರ್ಶಿ ಶಿವಾನಂದ್ ಗಾಡ್ಗೆ, ಪ್ರಾಧ್ಯಾಪಕಿಯರಾದ ವಿದ್ಯಾ ಪಾಟೀಲ್, ರಜನಿ ಸತಾನೆ, ಪ್ರಾಧ್ಯಾಪಕರಾದ ವಿಟ್ಲ ಜಿ.ಗೋರೆ, ಆನಂದ್ ಗೌಲಂಕರ್ ಹಾಗೂ ಆಂಗ್ಲ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.







