ಬೀದರ್ | ಜು.31 ರಂದು ಮುಹಮ್ಮದ್ ರಫಿಯವರ ಸ್ಮರಣಾರ್ಥಕವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ

ಬೀದರ್ : ಜು.31 ರಂದು ಮುಹಮ್ಮದ್ ರಫಿಯವರ ಸ್ಮರಣಾರ್ಥಕವಾಗಿ ನಗರದ ಡಾ.ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಸಾಯಂಕಾಲ 5 ಗಂಟೆಗೆ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಂಡಿತ್ ಪುಟ್ಟರಾಜ್ ಗವಾಯಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ದಂಡೆ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜು.31 ರಂದು ಮುಹಮ್ಮದ್ ರಫಿಯವರ ಸ್ಮರಣಾರ್ಥಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಸಿನೆಮಾ ಸಂಗೀತಗಾರರಾದ ಜಬ್ಬಾರ್ ಮತ್ತು ಧನಂಜಯ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.
ಇದೆ ವರ್ಷ ಡಿ.28 ರಂದು ಅತೀ ದೊಡ್ಡ ಸಂಗೀತ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಇದು 1.20 ಕೋಟಿ ರೂ. ಗಳ ಪ್ರಾಜೆಕ್ಟ್ ಆಗಿದ್ದು, ಸುಮಾರು 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮದಂತೆ ಜು.31ರ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಯೋಜನಾ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ವರ್, ಅಧ್ಯಕ್ಷ ಜಬ್ಬಾರ್, ಉಪಾಧ್ಯಕ್ಷ ಓಂಪ್ರಕಾಶ್ ರೊಟ್ಟೆ, ಸಂಸ್ಥೆಯ ಕಾರ್ಯದರ್ಶಿ ಪದ್ಮಾನಂದ್ ಹಾಗೂ ಗಾಯಕ ಹಾಗೂ ಸಂಗೀತ ಸಂಯೋಜಕ ಗುರುದೇವ ಸೇರಿದಂತೆ ಇತರರು ಇದ್ದರು.







