Bidar | ಜೂ. 27ರಂದು ವಿದ್ಯುತ್ ವ್ಯತ್ಯಯ

ಬೀದರ್ : ಜೂ.27 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 4 ಗಂಟೆವರೆಗೆ ಬೀದರ್ ಗ್ರಾಮೀಣ ಮತ್ತು ನಗರ ಉಪ-ವಿಭಾಗದ 110 ಕೆ.ವಿ. ಚಿದ್ರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕೆಲಸದ ನಿಮಿತ್ಯ ದುರಸ್ತಿ ಕೈಗೊಳ್ಳುತ್ತಿರುವ ಹಿನ್ನೆಲೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ವೃತ್ತ ಅಧೀಕ್ಷಕ ಇಂಜಿನಿಯರ್(ವಿ) ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
11ಕೆವಿ ಅಮಲಾಪೂರ್, 11ಕೆವಿ ಚಿದ್ರಿ, 11ಕೆವಿ ಏರಫೋರ್ಸ್, 11ಕೆವಿ ಟೌನ್, 11ಕೆವಿ ಬ್ರಿಮ್ಸ್, 11ಕೆವಿ ಸಿದ್ದಾರ್ಥ್ ಕಾಲೇಜು, 11ಕೆವಿ ಮಂಗಲಪೇಟ್, 11ಕೆವಿ ಗುಂಪಾ, 11ಕೆವಿ ಫೌಯಸ್ಸಪೂರ್, 11ಕೆವಿ ಬಸವ ನಗರ, 11ಕೆವಿ ಗಾಂಧಿಗಂಜ್, 11ಕೆವಿ ಮೈಲೂರ್, 11ಕೆವಿ ಕೆಇಬಿ ಕ್ವಾಟರ್ಸ್, 11ಕೆವಿ ನಿಸರ್ಗ, 11ಕೆವಿ ವಾಸು ಹಾಸ್ಟಿಟಲ್, 11ಕೆವಿ ರಾಂಪೂರ್ ಕಾಲೋನಿ ಮತ್ತು 11ಕೆವಿ ಗುರುನಾನಕ್ ಕಫೀಡರ್ಗಳ ವ್ಯಾಪ್ತಿಗೆ ಬರುವ ಪ್ರದೇಶಗಳಾದ ಚಿದ್ರಿ, ಏರಫೋರ್ಸ್, ಟೌನ್, ಬ್ರಿಮ್ಸ್, ಸಿದ್ದಾರ್ಥ್, ಮಂಗಲಪೇಟ್, ಗುಂಪಾ, ಫೌಯಸ್ಸಪೂರ್, ಬಸವ ನಗರ, ಗಾಂಧಿಗಂಜ್, ಮೈಲೂರ್, ಕೆಇಬಿ ಕ್ವಾಟರ್ಸ್, ನಿಸರ್ಗ, ವಾಸು ಹಾಸ್ಟಿಟಲ್, ರಾಂಪೂರ್ ಕಾಲೋನಿ, ಗುರುನಾನಕ ಮತ್ತು ಸುತ್ತಲಿನ ಗ್ರಾಮಗಳಿಗೆ ಅಂದು ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.




