ಬೀದರ್ | ಸಿಡಿಲು ಬಡಿದು ಎರಡು ಎತ್ತುಗಳು ಬಲಿ

ಬೀದರ್ : ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟ ಘಟನೆ ಬೀದರ್ ತಾಲ್ಲೂಕಿನ ಮಿರ್ಜಾಪುರ್ ಗ್ರಾಮದಲ್ಲಿ ನಡೆದಿದೆ.
ಮೃತ ಎತ್ತುಗಳು ಮಿರ್ಜಾಪುರ್ ಗ್ರಾಮದ ನಿವಾಸಿ ಪಾಷಾಮಿಯಾ ವಜಿರ್ ಸಾಹಬ್ ಎಂಬುವವರಿಗೆ ಸೇರಿವೆ.
ಎತ್ತುಗಳನ್ನು ಊರಿನ ಪಕ್ಕದ ಹೊಲದಲ್ಲಿರುವ ಮರಕ್ಕೆ ಕಟ್ಟಿದ್ದೇವು. ಈ ಎತ್ತುಗಳು ಸುಮಾರು 1 ಲಕ್ಷ 70 ರೂ. ಬೆಲೆಯುಳ್ಳದ್ದಾಗಿದ್ದವು. ಇಂದು ಮಧ್ಯಾಹ್ನ ಎತ್ತುಗಳ ಮೇಲೆ ಸಿಡಿಲು ಬಿದ್ದು ಮೃತಪಟ್ಟಿದೆ ಎಂದು ಪಾಷಾಮಿಯಾ ಅವರ ಸಹೋದರ ಮೌಜುಮಿಯಾ ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜನವಾಡಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Next Story





