ʼರಾಷ್ಟ್ರೀಯ ಬಸವ ಪುರಸ್ಕಾರ'ಕ್ಕೆ ಡಾ.ಸಿದ್ಧರಾಮ ಬೆಲ್ದಾಳ್ ಶರಣರು ಆಯ್ಕೆ

ಬೀದರ್ : ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಶರಣ ಡಾ.ಸಿದ್ದರಾಮ ಬೆಲ್ದಾಳ್ ಶರಣರು ಆಯ್ಕೆಯಾಗಿದ್ದಾರೆ.
ಡಾ. ಬೆಲ್ದಾಳ ಶರಣರು ಬಸವಾದಿ ಶರಣರ ಹಲವಾರು ಪುಸ್ತಕಗಳು ಬರೆದಿದ್ದಾರೆ. ನಾಡಿನಲ್ಲಿ ಬಸವ ತತ್ವ ಸಿದ್ದಾಂತ ಅಧ್ಯಯನ ಮಾಡಿ ಸಾಹಿತ್ಯ ಬರೆದು ದೇಶದ ತುಂಬಾ ಪ್ರಚಾರ ಮಾಡುತ್ತಿರುವ ಬಸವ ಪ್ರೇಮಿಯಾಗಿದ್ದಾರೆ. ಕಳೆದ ವರ್ಷ ಅವರು ಬರೆದ 'ಸತ್ಯ ಶರಣರ ಸತ್ಯ ಶೋಧ' ಸುಮಾರು ಹದಿನೈದು ನೂರು ಪುಟದ ಪುಸ್ತಕವಾಗಿದೆ.
ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಂದ ದಿನಾಂಕ ಪಡೆದು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜನೆ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
Next Story




