ಬೀದರ್: ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರ ಭೇಟಿ, ಪರಿಶೀಲನೆ
ಬೀದರ್: ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಸಾಕಷ್ಟು ಸಮಸ್ಯೆಗಳು ಕಂಡುಬಂದಿದ್ದು, ಸಮಸ್ಯೆಗಳ ಪಟ್ಟಿ ಮಾಡಿ ವರದಿ ತಯಾರಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಅವರು ತಿಳಿಸಿದರು.
ನಗರದ ನೌಬಾದ್, ಮುಸ್ಲಿಂಗಲ್ಲಿ, ಲಾಲ್ ಬಾಗ್, ಕಪಲಾಪೂರ್ ಹಾಗೂ ಅತಿವಾಳದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು.
ಬಹಳಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ರೆಜಿಸ್ಟರ್ ಗಳು ಬರೆಯದೇ ಇರುವುದು ಕಂಡುಬಂದಿದೆ. ಶೌಚಾಲಯಗಳು ಇದ್ದರು ಸಹ ನೀರಿನ ವ್ಯೆವಸ್ಥೆ ಇರಲಿಲ್ಲ. ಹಾಜರಾತಿ ಪಸ್ತಕದಲ್ಲಿ ಕಾಣಿಸಿದ್ದ ಸಂಖ್ಯೆಯಷ್ಟು ಮಕ್ಕಳು ಇರಲಿಲ್ಲ. ಬಹಳಷ್ಟು ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿರಲಿಲ್ಲ. ಅಡುಗೆ ಕೋಣೆಗಳ ಕೊರತೆ ಕಂಡುಬಂದಿದೆ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಆಟವಾಡಲು ಆಟದ ಮೈದಾನವೂ ಇಲ್ಲ. ಶುದ್ಧ ಕುಡಿಯುವ ನೀರಿನ ಕೊರತೆ ಕಂಡುಬಂದಿದೆ. ಕಪಲಾಪೂರ್ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರು ಮತ್ತು ಮಕ್ಕಳು ಇಲ್ಲದೇ ಇರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.






