Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ದಶಕದ ಬಳಿಕ ಬಂದರೂ ಅಪೂರ್ಣವೆನಿಸುವ...

ದಶಕದ ಬಳಿಕ ಬಂದರೂ ಅಪೂರ್ಣವೆನಿಸುವ ಚಿತ್ರ!

ಶಶಿಕರ ಪಾತೂರುಶಶಿಕರ ಪಾತೂರು9 Aug 2025 12:43 PM IST
share
ದಶಕದ ಬಳಿಕ ಬಂದರೂ ಅಪೂರ್ಣವೆನಿಸುವ ಚಿತ್ರ!

ಚಿತ್ರ: ರಾಜದ್ರೋಹಿ

ನಿರ್ದೇಶನ: ಸಮರ್ಥರಾಜ್

ನಿರ್ಮಾಣ: ಧನುಶ್ ಕಂಬೈನ್ಸ್ ಬ್ಯಾನರ್

ತಾರಾಗಣ: ಪಟ್ರೆ ಅಜಿತ್, ಮಾನಸ ಶಿವಣ್ಣ, ಶರಣ್, ಲಕ್ಷ್ಮೀ, ಅನಂತನಾಗ್ ಮೊದಲಾದವರು.

ತಮಿಳುನಾಡಿನ ಒಂದು ಹಳ್ಳಿಯಿಂದ ಚಿತ್ರದ ಕತೆ ಶುರು. ಅನಾಥವಾಗಿ ಬಂದ ಕನ್ನಡತಿಯೊಬ್ಬಳಿಗೆ ಹೋಟೆಲ್ ಮಾಲಕರೋರ್ವರು ಆಶ್ರಯ ನೀಡುತ್ತಾರೆ. ಆಕೆ ಬಂದ ದಿನವೇ ಹೋಟೆಲ್‌ಗೆ ಲಾಭವಾಯಿತೆಂದು ಆಕೆಯನ್ನು ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.

ಮತ್ತೊಂದು ಕಡೆ ಕರ್ನಾಟಕದ ಆಶ್ರಮವೊಂದರಲ್ಲಿ ಗುರುಗಳಿಂದ ಆಶೀರ್ವಾದ ಪಡೆಯುವ ಯುವಕ ಶಿವು ತಮಿಳುನಾಡಿಗೆ ಹೊರಡುತ್ತಾನೆ. ಅನಾಥನಾಗಿದ್ದ ಶಿವುನನ್ನು ಗುರುಗಳೇ ಬೆಳೆಸಿರುತ್ತಾರೆ. ವಿಸಾಗೆ ಅಪ್ಲೈ ಮಾಡಿದ್ದ ಶಿವು ಅದನ್ನು ಪಡೆಯಲು ಚೆನ್ನೈ ಸೇರುತ್ತಾನೆ. ಚೆನ್ನೈನಲ್ಲಿ ಮೊದಲ ಊಟಕ್ಕೆಂದು ಹೋಗುವ ಜಾಗವೇ ಅನ್ನಪೂರ್ಣೇಶ್ವರಿಯ ಹೋಟೆಲ್ ಆಗಿರುತ್ತದೆ. ಶಿವು ಮತ್ತು ಅನ್ನಪೂರ್ಣೇಶ್ವರಿ ಮಧ್ಯೆ ಇರುವುದು ತಾಯಿ ಮಗನ ಸಂಬಂಧವೇ? ಈ ಸಂಬಂಧವನ್ನು ಇವರು ಅರಿತುಕೊಳ್ಳುತ್ತಾರೆಯೇ? ಗಂಡ ಮತ್ತು ಮಗನನ್ನು ಬಿಟ್ಟು ಅನ್ನಪೂರ್ಣೇಶ್ವರಿ ತಮಿಳುನಾಡು ಸೇರಲು ಕಾರಣವೇನು? ಮೊದಲಾದ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರ ಹುಡುಕಬಹುದು. ಮತ್ತೊಂದೆಡೆ ಬೆಂಗಳೂರಲ್ಲಿ ರೌಡಿ ಕೋಳಿ ಮಂಜ ನಡೆಸುವ ಕೊಲೆ, ರೌಡಿಗಳನ್ನಿಟ್ಟುಕೊಂಡು ರಾಜಕಾರಣಿಗಳು ನಡೆಸುವ ಆಟಾಟೋಪಗಳನ್ನು ಕೂಡ ತೋರಿಸಲಾಗಿದೆ. ಇಂಥದೇ ರಾಜಕಾರಣ ಮತ್ತು ರೌಡಿಸಂನ ಸುಳಿ ಹೇಗೆ ಶಿವು ಮತ್ತು ಅನ್ನಪೂರ್ಣೇಶ್ವರಿ ಬಾಳಿನಲ್ಲೂ ದುರ್ಘಟನೆಗಳಿಗೆ ಕಾರಣವಾಗಿದೆ ಎಂದು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ.

ಚಿತ್ರದ ಕೇಂದ್ರ ಬಿಂದು ಶಿವು ಪಾತ್ರವನ್ನು ನಟ ಪಟ್ರೆ ಅಜಿತ್ ಸಿಕ್ಕ ಅವಕಾಶದಲ್ಲಿ ಚೊಕ್ಕವಾಗಿಯೇ ನಿರ್ವಹಿಸಿದ್ದಾರೆ. ಶಿವು ತಾಯಿ ಅನ್ನಪೂರ್ಣೇಶ್ವರಿಯಾಗಿ ಹಿರಿಯ ನಟಿ ಲಕ್ಷ್ಮೀ ಅಭಿನಯಿಸಿದ್ದಾರೆ. ಸಿನೆಮಾ ಚಿತ್ರೀಕರಣವಾಗಿ ದಶಕವೇ ಕಳೆದಿರುವ ಕಾರಣ ವರ್ಷಗಳ ಹಿಂದಿನ ದಿನಗಳ ಲಕ್ಷ್ಮಿಯ ನಟನೆಯನ್ನು ನೋಡಬಹುದಾಗಿದೆ. ಇದೊಂದು ಖುಷಿಯ ವಿಚಾರದ ಹೊರತಾಗಿ ತಡವಾದ ರಿಲೀಸ್ ಚಿತ್ರದ ಗುಣಮಟ್ಟಕ್ಕೆ ಕುಂದು ಮಾಡಿದೆ. ಉದಾಹರಣೆಗೆ ಲಕ್ಷ್ಮೀ ಪಾತ್ರಕ್ಕೆ ಬೇರೆಯವರಿಂದ ಕಂಠದಾನ ಕೊಡಿಸಲಾಗಿದೆ. ರಿಲೀಸ್ ವೇಳೆಗೆ ಇನ್ನಿಲ್ಲವಾಗಿರುವ ಬ್ಯಾಂಕ್ ಜನಾರ್ದನ್ ಸೇರಿದಂತೆ ಅವಿನಾಶ್ ಪಾತ್ರಗಳಿಗೂ ಒಂದು ಹಂತದಲ್ಲಿ ಕಂಠದಾನದ ಕಾಟವಿದೆ.

ಚಿತ್ರದ ಪೋಸ್ಟರ್ ನಂತೆ ದೃಶ್ಯಗಳಲ್ಲಿ ಕೂಡ ನಾಯಕನಿಗಿಂತಲೂ ನಾಯಕನ ಸ್ನೇಹಿತನಾಗಿ ಶರಣ್ ಹೆಚ್ಚು ಸ್ಕೋರ್ ಮಾಡಿದ್ದಾರೆ. ಹಾಸ್ಯದ ಪಾತ್ರವಾದರೂ ಚಿತ್ರದ ಉದ್ದಕ್ಕೂ ಇರುವ ಮಧು ಅಲಿಯಾಸ್ ಉಪ್ಪುಕಡಲೆ ಎನ್ನುವ ಪಾತ್ರ ನಿರ್ವಹಿಸಿದ್ದಾರೆ. ಒರಟ ಪ್ರಶಾಂತ್ ಅತಿಥಿ ಪಾತ್ರದಲ್ಲಿ ಆಗಮಿಸಿ ಒಂದು ಹೊಡೆದಾಟ ದೃಶ್ಯದ ಭಾಗವಾಗಿದ್ದಾರೆ. ಅದೇ ರೀತಿ ಫ್ಲ್ಯಾಶ್ ಬ್ಯಾಕ್ ಕತೆಯಲ್ಲಿ ಅಭಿಜಿತ್ ಕೂಡ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವರ್ಷಗಳ ಬಳಿಕ ಅನಂತನಾಗ್ ಲಕ್ಷ್ಮೀ ಜೋಡಿ ಎಂದು ಇಲ್ಲಿ ತೋರಿಸಲಾಗಿದೆ. ಆದರೆ ಜೋಡಿಯ ಫ್ಲ್ಯಾಶ್ ಬ್ಯಾಕ್ ದೃಶ್ಯದಲ್ಲಿ ಅನಂತ್ ಪಾತ್ರವನ್ನು ಅಚ್ಯುತ್ ಕುಮಾರ್ ನಿಭಾಯಿಸಿದ್ದಾರೆ. ಹೀಗಾಗಿ ಇಬ್ಬರನ್ನು ಒಂದೇ ಬಾರಿ ಪರದೆಯ ಮೇಲೆ ನೋಡಲು ಸಾಧ್ಯವಾಗಿಲ್ಲ.

ಚಿತ್ರದಲ್ಲಿ ವಿವಿಧ ವಿಚಾರಗಳನ್ನು ತುರುಕಿರುವ ಕಾರಣ ಚಿತ್ರಕಥೆ ಗೋಜಲುಮಯವಾಗಿದೆ. ದಶಕದ ಹಿಂದೆ ಜನಪ್ರಿಯವಾಗಿದ್ದ ಸಿನೆಮಾದೊಳಗೆ ಸಿನೆಮಾ ಕಥೆ ಹೇಳುವ ಉಪೇಂದ್ರ ಶೈಲಿ ಅನುಕರಿಸುವ ಯತ್ನದಲ್ಲಿ ಸ್ವತಃ ನಿರ್ದೇಶಕರೇ ಎಡವಿದಂತೆ ಕಾಣಿಸುತ್ತಿದೆ. ಹಲವಾರು ದೃಶ್ಯಗಳಿಗೆ ಲಾಜಿಕ್ ಇಲ್ಲ.

ಸಿನೆಮಾದೊಳಗಿನ ಸಿನೆಮಾದಲ್ಲಿ ದರ್ಶನ್, ಸುದೀಪ್, ಕುಮಾರಣ್ಣನ ಅಭಿಮಾನಿಗಳ ಬಗ್ಗೆ ವಿಮರ್ಶೆ ಇದೆ. ಇದಕ್ಕೆ ಇಂದಿನ ಸಂದರ್ಭವನ್ನು ಹೊಂದಿಸಲು ಪ್ರಯತ್ನಿಸಿರುವ ನಿರ್ದೇಶಕರು ಅಭಿಮಾನಿಗಳೇ ದೇವರು ನಿಜ. ಆದರೆ ರಾಕ್ಷಸ ರೂಪದ ನಕಲಿ ಅಭಿಮಾನಿಗಳಿದ್ದಾರೆ ಎನ್ನುವ ಸಾಲನ್ನು ಹಿನ್ನೆಲೆ ಧ್ವನಿಯಾಗಿ ಕೊಡಿಸಿದ್ದಾರೆ. ವಿಶೇಷ ಎಂದರೆ ನಾಯಕಿಯ ಸ್ನೇಹಿತೆ ಧರ್ಮಸ್ಥಳದ ಭಕ್ತಿಯ ಬಗ್ಗೆ ಆಡುವ ಮಾತು ಇಂದಿಗೂ ಹೊಂದಿಕೊಳ್ಳುವಂತಿದೆ.

ತಮಿಳು ನಾಡಿನಲ್ಲಿರುವ ನಾಯಕಿಯ ಸ್ನೇಹಿತೆ ಧರ್ಮಸ್ಥಳದ ಮಂಜುನಾಥನನ್ನು ಪ್ರಾರ್ಥಿಸುತ್ತಾಳೆ. ಆಗ ನಾಯಕಿ ಹತ್ತಿರದ ದೇವರನ್ನು ನೆನಪಿಸ್ಕೋ ಮತ್ತು ಹೆಣ್ಣು ದೇವರನ್ನು ನೆನೆಸ್ಕೋ ಎನ್ನುವುದು ಇಂದಿನ ಸಂದರ್ಭದಲ್ಲಿ ವಿಶೇಷ ಅರ್ಥ ಉದ್ಭವಗೊಳ್ಳಲು ಕಾರಣವಾಗುತ್ತದೆ. ಸದ್ಯದ ಅಭಿಮಾನಿಗಳ ಮಧ್ಯದ ಕಲಹದ ಲಾಭ ಪಡೆಯುವಂತೆ ತೆರೆಗೆ ಬಂದಿರುವ ಈ ಚಿತ್ರ ಮುಗಿದರೂ ಅಪೂರ್ಣಗೊಂಡಂತೆ ಭಾಸವಾಗುತ್ತದೆ. ಒಟ್ಟು ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಮಾನಸ ಶಿವಣ್ಣ ಅಭಿನಯ ಮತ್ತು ರಘು ತುಮಕೂರು ನೀಡಿರುವ ಸಂಗೀತದ ಹೊರತು ಧನಾತ್ಮಕ ಅಂಶಗಳೇ ಇಲ್ಲ ಎನ್ನಬಹುದು.

Tags

filmincomplete
share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X