Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಅದೇ ಮಚ್ಚು, ಅದೇ ಸ್ಕೆಚ್ಚು ಮತ್ತು...

ಅದೇ ಮಚ್ಚು, ಅದೇ ಸ್ಕೆಚ್ಚು ಮತ್ತು ರೌಡಿಸಂ ಎನ್ನುವ ಹುಚ್ಚು!

ಶಶಿಕರ ಪಾತೂರುಶಶಿಕರ ಪಾತೂರು7 March 2026 2:46 PM IST
share
ಅದೇ ಮಚ್ಚು, ಅದೇ ಸ್ಕೆಚ್ಚು ಮತ್ತು ರೌಡಿಸಂ ಎನ್ನುವ ಹುಚ್ಚು!

ಚಿತ್ರ: ಮೆಜೆಸ್ಟಿಕ್ 2

ನಿರ್ದೇಶನ: ರಾಮು

ನಿರ್ಮಾಣ: ಎಚ್. ಆನಂದಪ್ಪ

ತಾರಾಗಣ: ಭರತ್ ಕುಮಾರ್,

ಸಂಹಿತಾ ವಿನ್ಯಾ,

ಶ್ರುತಿ ಮೊದಲಾದವರು.

ಮೆಜೆಸ್ಟಿಕ್ ಎನ್ನುವ ಹೆಸರು ಕನ್ನಡ ಸಿನೆಮಾ ಪ್ರಿಯರಲ್ಲಿ ಸಂಚಲನ ಮೂಡಿಸಿತ್ತು. ಅದಕ್ಕೆ ಆ ಚಿತ್ರಕ್ಕೆ ಸಿಕ್ಕಂಥ ಭರ್ಜರಿ ಯಶಸ್ಸು ಕಾರಣ. ಆದರೆ ಅಂಥದೊಂದು ಚಿತ್ರದ ರೌಡಿಸಂ ಅಂಶವನ್ನು ಮಾತ್ರ ಇಟ್ಟುಕೊಂಡು ಮಾಡಿರುವ ಚಿತ್ರ ‘ಮೆಜೆಸ್ಟಿಕ್ 2’. ಉಳಿದಂತೆ ಅದಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ.

ಕಥೆಯಲ್ಲಿ ನಾಯಕನ ಹೆಸರು ದಾಸ. ಆದರೆ ಜನ ಗುರುತಿಸುವುದು ಮರಿದಾಸ ಎಂದೇ. ಮೊದಲ ದೃಶ್ಯದಲ್ಲೇ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗುತ್ತಾನೆ. ಬಿಡುಗಡೆಯಾಗುತ್ತಲೇ ನೇರವಾಗಿ ರೌಡಿಗಳ ಅಡ್ಡಕ್ಕೆ ಹೋಗಿ ಹಲ್ಲೆ ನಡೆಸುತ್ತಾನೆ. ಆಮೇಲೆ ಮರಿದಾಸನ ಫ್ಲ್ಯಾಶ್ ಬ್ಯಾಕ್ ಬಿಚ್ಚಿಕೊಳ್ಳುತ್ತದೆ. ಆತ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡವನು. ತಾಯಿಯ ಸಂಪಾದನೆಗೆ ಸಹಾಯವಾಗಲೆಂದು ಚಹಾ ಮಾರಾಟಕ್ಕಿಳಿದವನು. ಆದರೆ ಪ್ರೇಯಸಿಯನ್ನು ಕೆಣಕಿದ ರೌಡಿಗೆ ಉತ್ತರ ನೀಡಿ ಜೈಲು ಸೇರಿದವನು. ಸೆರೆಯಿಂದ ಬಂದವನ ಬದುಕು ಹೇಗಿರುತ್ತದೆ ಎನ್ನುವುದೇ ಈ ಕಥೆಯ ಸಾರ.

ರೌಡಿಸಂ ಕಥೆ ಎಂದೊಡನೆ ಇದೊಂದು ಎಳೆ ಇಟ್ಟುಕೊಂಡೇ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಅವುಗಳಲ್ಲಿ ಕೆಲವಷ್ಟೇ ಗೆದ್ದು ಬೀಗಿವೆ. ಅದರಲ್ಲಿ ಮೆಜೆಸ್ಟಿಕ್ ಕೂಡ ಒಂದು. ಆದರೆ ಅಲ್ಲಿನಂತೆ ಇಲ್ಲಿ ಕಥೆಯೊಳಗೆ ತಿರುವುಗಳಿಲ್ಲ. ಎಲ್ಲವೂ ನೇರಾ ನೇರ. ನವ ನಾಯಕನಾಗಿ ಭರತ್ ಕುಮಾರ್ ಭರವಸೆಯ ನಟನೆ ನೀಡಿದ್ದಾರೆ. ಕಾಲೇಜ್ ಹುಡುಗ ಮತ್ತು ಯುವ ರೌಡಿ ಎನ್ನುವ ಎರಡೂ ನೋಟಗಳಿಗೆ ಹೊಂದುವಂತೆ ನಟಿಸಿದ್ದಾರೆ. ಭರತ್‌ಗೆ ನಾಯಕಿಯಾಗಿ ಪ್ರೀತಿ ಎನ್ನುವ ಪಾತ್ರದಲ್ಲಿ ಸಂಹಿತಾ ವಿನ್ಯಾ ಕಾಣಿಸಿದ್ದಾರೆ. ಪ್ರೀತಿಗೆ ಅಂಥ ಪ್ರಾಮುಖ್ಯತೆ ಇಲ್ಲವಾದರೂ ಕೊನೆಯ ದೃಶ್ಯದಲ್ಲೊಂದು ತಿರುವು ನಿರೀಕ್ಷಿಸಬಹುದಾಗಿದೆ.

ದಾಸನ ತಾಯಿಯಾಗಿ ಶ್ರುತಿ ಎಂದಿನಂತೆ ತಮ್ಮ ನಟನೆಯಿಂದ ಪಾತ್ರಕ್ಕೆ ಘನತೆ ತಂದುಕೊಟ್ಟಿದ್ದಾರೆ. ರೋಗಿ ತಂದೆಯಾಗಿ ರವಿಭಟ್ ಇದ್ದಾರೆ. ಶ್ರುತಿ ಸಹೋದರನಾಗಿ ಶಿವಕುಮಾರ್ ಆರಾಧ್ಯ ಅಭಿನಯಿಸಿದ್ದಾರೆ. ನಿರ್ದೇಶಕ ರಾಮು ಅವರಿಗೆ ಇದು ಮೊದಲ ಚಿತ್ರ. ಆದರೆ ಚಿತ್ರರಂಗದಲ್ಲಿನ ತನ್ನ ಅನುಭವ ಮತ್ತು ಅನುಭವಿ ತಂಡದ ಮೂಲಕ ದೃಶ್ಯಗಳಲ್ಲಿ ವೃತ್ತಿಪರತೆ ಕಾಯ್ದುಕೊಂಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ಚಿನ್ನಯ್ಯ ಸಾಹಸ ನಿರ್ದೇಶನ ಕೂಡ ಚಿತ್ರಕ್ಕೆ ಬೆನ್ನೆಲುಬಾಗಿದೆ. ‘‘ಲಾಂಗ್ ಹಿಡಿದು ಲೈಫ್ ಶಾರ್ಟ್ ಮಾಡ್ಕೋಬೇಡ’’ ಎನ್ನುವಂಥ ಒಂದಷ್ಟು ಮನ ಸೆಳೆಯುವ ಸಂಭಾಷಣೆಗಳು ವಿಜಯ ಕುಮಾರ್ ರಚನೆಯಲ್ಲಿ ಮೂಡಿ ಬಂದಿವೆ.

ರೌಡಿ ಬಂಗಾರಿಯ ಕೈಕೆಳಗಿನ ರೌಡಿಗಳಾಗಿ ಕೋಟೆ ಪ್ರಭಾಕರ್ ಮತ್ತು ಪೆಟ್ರೋಲ್ ಪ್ರಸನ್ನ ನಟಿಸಿದ್ದಾರೆ. ಬಂಗಾರಿ ಪಾತ್ರಧಾರಿಗಿಂತ ಹೆಚ್ಚು ಭಯಪಡಿಸುವ ಕ್ರೌರ್ಯವನ್ನು ಪ್ರಸನ್ನ ಪ್ರದರ್ಶಿಸಿದ್ದಾರೆ. ವಿನುಮನಸು ಸಂಗೀತದಲ್ಲಿ ಎಲ್ಲ ಹಾಡುಗಳು ಸುಮಧುರವಾಗಿವೆ. ಆದರೆ ಫ್ಲ್ಯಾಶ್ ಬ್ಯಾಕ್ ಸಂದರ್ಭದಲ್ಲಿ ಬರುವ ಪ್ರೇಮಗೀತೆಯಲ್ಲಿ ನಾಯಕ ಆನಂತರದ ಬದಲಾದ ಗೆಟಪ್‌ನಲ್ಲಿ ಕಾಣಿಸುತ್ತಾನೆ. ಇಂಥ ಕೆಲವು ಕಂಟಿನ್ಯುಟಿ ಮಿಸ್ಟೇಕ್ಸ್ ಚಿತ್ರದಲ್ಲಿವೆ.

ನಾಯಕನ ಇಂಟ್ರೊಡಕ್ಷನ್ ಹಾಡಿನ ಕೆಲವು ದೃಶ್ಯಗಳಲ್ಲಿ ಮಾಲಾಶ್ರೀ ಕಾಣಿಸುತ್ತಾರೆ. ಇಂದಿಗೂ ತಮ್ಮ ಆ್ಯಕ್ಷನ್ ಇಮೇಜ್ ಉಳಿದಿರುವುದನ್ನು ತೋರಿಸಿದ್ದಾರೆ. ಅವರ ಕಾಲದ್ದೇ ಆ್ಯಕ್ಷನ್ ಚಿತ್ರಗಳ ಶೈಲಿಯನ್ನು ಬದಲಿಸಲಾಗಿಲ್ಲ ಎಂದು ‘ಮೆಜೆಸ್ಟಿಕ್ 2’ ಕೂಡ ಸಾಬೀತು ಮಾಡಿದೆ.

Tags

Majestic 2
share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X