Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ಜಂಗಲ್ ಮಂಗಲ್' | ಕಾಡಿನ ನಡುವೆ ಪ್ರಕೃತಿ...

'ಜಂಗಲ್ ಮಂಗಲ್' | ಕಾಡಿನ ನಡುವೆ ಪ್ರಕೃತಿ ಕಲಿಸುವ ಪಾಠ !

ಶಶಿಕರ ಪಾತೂರುಶಶಿಕರ ಪಾತೂರು6 July 2025 10:20 AM IST
share
ಜಂಗಲ್ ಮಂಗಲ್ | ಕಾಡಿನ ನಡುವೆ ಪ್ರಕೃತಿ ಕಲಿಸುವ ಪಾಠ !

ಚಿತ್ರ: ಜಂಗಲ್ ಮಂಗಲ್

ನಿರ್ದೇಶನ: ರಕ್ಷಿತ್ ಕುಮಾರ್ ರೈ

ನಿರ್ಮಾಣ: ಸಹ್ಯಾದ್ರಿ ಸ್ಟುಡಿಯೋಸ್

ತಾರಾಗಣ: ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ

ಯುವಕ ಯುವತಿ ಬೈಕ್ನಲ್ಲಿ ಕಾಡು ಸೇರುವುದು ಮತ್ತು ಅವರನ್ನು ಪತ್ತೆ ಮಾಡಲು ಊರಿನ ಜನ ಬೆನ್ನು ಬೀಳುವುದು ಇದು ಚಿತ್ರದ ಟ್ರೈಲರ್ನಲ್ಲಿ ಕಂಡ ದೃಶ್ಯ. ಆದರೆ ಸಿನಿಮಾ ಇದರಾಚೆಗಿನ ಬೇರೆಯೇ ಒಂದು ರೋಮಾಂಚಕಾರಿ ಕಥೆಯನ್ನು ತೆರೆದಿಡುತ್ತದೆ.

ಇದು 2020ರ ಕೊರೊನಾ ಕಾಲದಲ್ಲಿ ನಡೆಯುವ ಕಥೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂಥ ಊರೊಂದರಲ್ಲಿ ನಡೆಯುವ ಕಥೆ. ಕಲ್ಲುಗುಂಡಿ ಪ್ರವೀಣ ಮತ್ತು ಆತನ ಪ್ರೇಯಸಿ ದಿವ್ಯಾ ನಡೆಸುವ ಮಾತುಕತೆಯೊಂದಿಗೆ ಚಿತ್ರ ಶುರುವಾಗುತ್ತದೆ. ಅವರಿಬ್ಬರೂ ಪ್ರೇಮಿಗಳು. ಪ್ರವೀಣನ ಒತ್ತಾಯಕ್ಕೆ ಕಟ್ಟು ಬಿದ್ದು ದಿವ್ಯಾ ಊರಾಚೆಯ ಕಾಡಿನಲ್ಲಿ ಭೇಟಿಯಾಗಲು ಒಪ್ಪುತ್ತಾಳೆ. ಕಾಡಿನ ನಡುವೆ ಒಂದು ಸರೋವರದ ಪಕ್ಕ ಕುಳಿತುಕೊಳ್ಳುವ ಜೋಡಿಗಳು ಎದುರಿಸುವ ಸಮಸ್ಯೆಗಳಲ್ಲೇ ಚಿತ್ರ ಮಧ್ಯಂತರ ತಲುಪುತ್ತದೆ.

ಆದರೆ ಈ ಚಿತ್ರ ಜೋಡಿ ಪ್ರೇಮಿಗಳ ಕಥೆಗಷ್ಟೇ ಸೀಮಿತವಾಗಿಲ್ಲ. ಅದೊಂದು ನಿಮಿತ್ತ ಮಾತ್ರ. ಆದರೆ ಅದರ ಹಿನ್ನೆಲೆಯಲ್ಲೇ ಒಂದು ಕೌಟುಂಬಿಕ ಹಾಗೂ ಸಾಮಾಜಿಕ ಕಥೆಯನ್ನು ತೆರೆದಿಡಲಾಗಿದೆ. ಅಂಗನವಾಡಿ ಶಿಕ್ಷಕಿಯಾಗಿರುವ ದಿವ್ಯಾಳದ್ದು ತೀರ ಬಡ ಕುಟುಂಬ. ಮನೆಯಲ್ಲಿರುವ ತಾಯಿ, ಇಬ್ಬರು ತಂಗಿಯರು ಮತ್ತು ಕುಡುಕ ತಂದೆಯ ಜವಾಬ್ದಾರಿ ಈಕೆಯದ್ದೇ ಆಗಿರುತ್ತದೆ. ಪ್ರಿಯಕರ ಕಲ್ಲುಗುಂಡಿ ಪ್ರವೀಣ ಆಗಷ್ಟೇ ಶುರುಮಾಡಿದ್ದ ಐಸ್ ಕ್ರೀಮ್ ಉದ್ಯಮಕ್ಕೆ ಕೊರೊನಾ ಮತ್ತು ಲಾಕ್ಡೌನ್ ಬರೆ ಎಳೆದಿರುತ್ತದೆ. ಮತ್ತೊಂದೆಡೆ ದಿವ್ಯಾಳ ಮಾವ ಮತ್ತು ಬಾಬು ಎನ್ನುವ ದಂಧಕೋರನ ಮಧ್ಯೆ ಹೊಡೆದಾಟ ನಡೆದಿರುತ್ತದೆ. ಈ ಪಾತ್ರಗಳಿಗೆ ಇದರಾಚೆಗೆ ಕೂಡ ಸಾಕಷ್ಟು ತಿರುವುಗಳಿವೆ. ಆದರೆ ಅವೆಲ್ಲವನ್ನೂ ಪರದೆಯ ಮೇಲೆ ನೋಡಿ ಅರಗಿಸಿಕೊಳ್ಳುವುದೇ ಸೊಗಸು.

ಯಶ್ ಶೆಟ್ಟಿ ಇದುವರೆಗೆ ಖಳನಾಗಿ ಕಾಣಿಸಿದ್ದೇ ಹೆಚ್ಚು. ಆದರೆ ಆ ಇಮೇಜ್ ಸಂಪೂರ್ಣವಾಗಿ ಮರೆಯುವಂತೆ ಮುಗ್ದ ಪ್ರೇಮಿ ಕಲ್ಲುಗುಂಡಿ ಪ್ರವೀಣನ ಪಾತ್ರಕ್ಕೆ ಜೀವನೀಡಿ ಸೈ ಎನಿಸಿದ್ದಾರೆ. ನಾಯಕಿ ದಿವ್ಯಾಳಾಗಿ ಹರ್ಷಿತಾ ರಾಮಚಂದ್ರ ಪ್ರಥಮ ಚಿತ್ರದಲ್ಲೇ ಪಕ್ಕದ ಗ್ರಾಮದ ಹುಡುಗಿಯಾಗಿದ್ದಾರೆ. ನಿರ್ದೇಶಕ ರಕ್ಷಿತ್ ಕುಮಾರ್ ರೈಗೆ ಇದು ಮೊದಲ ಚಿತ್ರ. ಆದರೆ ಅಂಥದ್ದೊಂದು ಸಣ್ಣ ಸುಳಿವನ್ನೂ ಕೊಡದಂತೆ ಶುದ್ಧ ಮಲಯಾಳಂ ಶೈಲಿಯಲ್ಲಿ ಕರಾವಳಿಯ ಕಥೆ ನೀಡಿದ್ದಾರೆ. ಪುಟ್ಟ ಮಗುವಿನಿಂದಲೂ ನಟನೆ ಹೊರತೆಗೆದಿರುವ ರೀತಿ ಅಮೋಘ.

ಇದು ಒಂದೂವರೆ ಗಂಟೆ ಕಾಲಾವಧಿಯ ಚಿತ್ರ. ಕೇವಲ ತೊಂಬತ್ತೆರಡು ನಿಮಿಷಗಳಲ್ಲಿ ನಿಮ್ಮನ್ನು ಸಿನಿಮಾ ಪರಿಸರದ ಭಾಗವಾಗಿಸುವಲ್ಲಿ ಚಿತ್ರತಂಡ ಗೆದ್ದಿದೆ. ಪ್ರಕೃತಿ ಮತ್ತು ಮನೆಗಳನ್ನು ಯಥಾವಾತ್ತಾಗಿ ತೋರಿಸಿರುವುದಕ್ಕಾಗಿಯೇ ವರದರಾಜ್ ಕಾಮತ್ ಕಲಾ ನಿರ್ದೇಶನವನ್ನು ಮೆಚ್ಚಬೇಕು. ಒಂದೇ ಘಟನೆಯನ್ನು ಬೇರೆ ಬೇರೆ ಪಾತ್ರಗಳ ದೃಷ್ಟಿಕೋನದಲ್ಲಿ ತೋರಿಸುವಾಗ ಕಥೆಯಲ್ಲಿ ಹೊಸ ಹೊಸ ತಿರುವುಗಳು ಸೃಷ್ಟಿಯಾಗಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ಅಶ್ಲೀಲತೆ, ಐಟಂ ಸಾಂಗ್, ದ್ವಂದ್ವಾರ್ಥ ಪದ ಪ್ರಯೋಗಗಳಿಂದ ದೂರವಾಗಿರುವ ಚಿತ್ರ ಅದೇ ಕಾರಣಕ್ಕೆ ಪ್ರಶಂಸೆಗೆ ಪಾತ್ರವಾಗುತ್ತದೆ.

ಸಾಮಾಜಿಕ ಜಾಲತಾಣದ ಯುವಕರ ಭಾಷೆಯಲ್ಲಿ ಜಂಗಲ್ ಮಂಗಲ್ ಎನ್ನುವುದಕ್ಕೊಂದು ಪ್ರತ್ಯೇಕ ಅರ್ಥವಿದೆ. ತಮ್ಮ ಬಯಕೆ ತೀರಿಸಲು ಕೆಲವು ಯುವಕ ಯುವತಿಯರು ಪೊದೆ, ಕಾಡು ಸೇರುತ್ತಾರೆ. ಇಂಥವರು ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದರೆ ಆ ದೃಶ್ಯಗಳನ್ನು ಜಂಗಲ್ ಮಂಗಲ್ ಹ್ಯಾಶ್ ಟ್ಯಾಗ್ ನಲ್ಲಿ ತಂದು ಹಾಕುತ್ತಾರೆ. ಈ ಸಿನಿಮಾದ ಟ್ರೇಲರ್ ಕೂಡ ಇದು ಅಂಥದೇ ಕಥೆ ಹೇಳುವ ಸಿನಿಮಾ ಎನ್ನುವ ಸೂಚನೆ ನೀಡಿತ್ತು. ಆದರೆ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಅದ್ಯಾವುದೂ ಅಲ್ಲದ ಹೊಸ ಕಥೆಯೊಂದು ತೆರೆದುಕೊಳ್ಳುತ್ತದೆ.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X