Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ದುಸ್ಸಾಹಸಕ್ಕೆ ಬಲಿಯಾದ 'ಬಾಬು'

ದುಸ್ಸಾಹಸಕ್ಕೆ ಬಲಿಯಾದ 'ಬಾಬು'

ಎ.ಎಂ.ಹನೀಫ್, ಅನಿಲಕಟ್ಟೆಎ.ಎಂ.ಹನೀಫ್, ಅನಿಲಕಟ್ಟೆ4 Oct 2023 1:57 PM IST
share
ದುಸ್ಸಾಹಸಕ್ಕೆ ಬಲಿಯಾದ ಬಾಬು

ಇದು ತಮಿಳು ನಟನೊಬ್ಬನ ಬದುಕಿನ ದುರಂತ ಕಥೆ.

ಅದು ತೊಂಭತ್ತರ ದಶಕ. ಆ ದಿನಗಳಲ್ಲಿ ಬಾಬು ನಾಲ್ಕು ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸಿದ್ದರೂ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದ್ದರು. ಅವರು ಖ್ಯಾತ ಚಲನಚಿತ್ರ ನಿರ್ದೇಶಕ ಪದ್ಮಶ್ರೀ ಭಾರತಿರಾಜಾ ಅವರ ಚಿತ್ರದ ಮೂಲಕ 1990 ರಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದರು. ಹಲವು ಬ್ಲಾಕ್ ಬಸ್ಟರ್ ಚಿತ್ರಗಳ ನಿರ್ದೇಶಕ ಭಾರತಿರಾಜಾ ಹಲವಾರು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದವರು. ಬಾಬು ಎಂಬ ಯುವ ಪ್ರತಿಭೆಯನ್ನ್ನೂ ‘ಎನ್ ಉಯಿರ್ ತೋಝನ್’ ಎಂಬ ಚಿತ್ರದ ಮೂಲಕ ಅವರು ನಾಯಕ ನಟನನ್ನಾಗಿಸಿದರು. ೧೯೯೦ರಲ್ಲಿ ತೆರೆ ಕಂಡ ಈ ಸಿನೆಮಾ ಅಷ್ಟೇನು ಯಶಸ್ಸು ಗಳಿಸದಿದ್ದರೂ ಬಾಬು ಯುವ ನಟನಾಗಿ ಗುರುತಿಸಿಕೊಂಡರು. ತನ್ನದೇ ನಟನಾ ಶೈಲಿ, ಮಾತು, ಹಾವಭಾವದಿಂದ ಅವರು ಪ್ರೇಕ್ಷಕರ ಗಮನಸೆಳೆಯುವಲ್ಲಿ ಸಫಲರಾಗಿದ್ದರು.

ಆ ಬಳಿಕ ಬಾಬು ನಿರ್ದೇಶಕ ವಿಕ್ರಮನ್ ನಿರ್ದೇಶನದ ‘ಪೆರುಂಪುಳ್ಳಿ’ ಚಿತ್ರದಲ್ಲಿ ನಟಿಸಿದರು. ಅದರ ಬೆನ್ನಲ್ಲೇ ‘ತಾಯಮ್ಮ’ ಸಿನೆಮಾವು ತೆರೆಗೆ ಬಂತು. ಬಾಬು ನಟಿಸಿ ಕೊನೆಯದಾಗಿ ಬಿಡುಗಡೆಗೊಂಡ ಚಿತ್ರ ‘ಪೊನ್ನುಕ್ಕು ಸೇದಿ ವಂದಾಚ್’. ಬಾಬು ನಟಿಸಿದ್ದು ಬೆರಳೆಣಿಕೆ ಚಿತ್ರಗಳಾದರೂ ಅವೆಲ್ಲವೂ ಗ್ರಾಮೀಣ ಕಥಾ ಹಂದರವಿರುವ ಸಿನೆಮಾಗಳಾಗಿದ್ದವು.

ಹೀಗೆ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದ ಬಾಬು ಐದನೇ ಸಿನೆಮಾವಾಗಿ ‘ಮನಸಾರ ವಾಳುತುಗಳೇನ್’(Manasara Vazhthungalen) ಆಯ್ಕೆ ಮಾಡಿಕೊಂಡಿದ್ದರು. ಪಾರ್ಥೇಪರಮನ್ ಆ ಚಿತ್ರದ ನಿರ್ದೇಶಕರಾಗಿದ್ದರು. ಅದು ಚಿತ್ರ ಸಾಹಸ ದೃಶ್ಯವೊಂದನ್ನು ಚಿತ್ರೀಕರಣ ಸೆಟ್. ಸ್ಟಂಟ್ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಚಿತ್ರದ ನಾಯಕ ಎತ್ತರದಿಂದ ಜಿಗಿಯುವ ದೃಶ್ಯವೊಂದಿತ್ತು. ಒಂದಿಷ್ಟು ಸಾಹಸಮಯವಾಗಿದ್ದ ಕಾರಣ ಆ ದೃಶ್ಯವನ್ನು ಡ್ಯೂಪ್ ಬಳಸಿ ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ ನೈಜ್ಯವಾಗಿರಲಿ ಎಂಬ ಕಾರಣಕ್ಕೆ ಬಾಬು ತಾನೇ ಸ್ವತಃ ಆ ಸ್ಟಂಟ್ ಮಾಡಲು ನಿರ್ಧರಿಸಿದರು. ಚಿತ್ರ ತಂಡ ಎಚ್ಚರಿಸಿದರೂ ತನ್ನ ನಿರ್ಧಾರದಲ್ಲಿ ರಾಜಿ ಮಾಡಿಕೊಳ್ಳದ ಬಾಬು ಅನಗತ್ಯವಾಗಿ ಆ ದುಸ್ಸಾಹಸಕ್ಕಿಳಿದರು. ಚಿತ್ರೀಕರಣ ಆರಂಭಗೊಂಡಿತು. ಬಾಬು ಎತ್ತರದಿಂದ ಜಿಗಿದರು. ಆದರೆ ಅವರಿಗೆ ನಿರೀಕ್ಷೆಯಂತೆ ಧುಮುಕಲು ಸಾಧ್ಯವಾಗಲಿಲ್ಲ. ಸಮತೋಲನ ಕಳೆದುಕೊಂಡ ಅವರು ನೆಲಕ್ಕಪ್ಪಳಿಸಿದರು. ಬಿದ್ದ ರಭಸಕ್ಕೆ ಅವರ ಬೆನ್ನುಹುರಿಗೆ ತೀವ್ರ ತರಹದ ಗಾಯವುಂಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹಲವು ಶಸ್ತ್ರಚಿಕಿತ್ಸೆಗೆ ಒಳಗಾದರೂ ಫಲ ಸಿಗಲಿಲ್ಲ. ಅಂದು ಹಾಸಿಗೆ ಹಿಡಿದ ಬಾಬು ಮತ್ತೆ ಮೊದಲಿನಂತಾಗಲೇ ಇಲ್ಲ. ಆದರೂ ಚಿತ್ರರಂಗದೊಂದಿಗೆ ನಂಟು ಕಡಿದುಕೊಳ್ಳಲು ಆಗಲಿಲ್ಲ. ೧೯೯೭ರಲ್ಲಿ ಚಿತ್ರವೊಂದಕ್ಕೆ ಬಾಬು ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದರು. ಆದರೆ ಆ ಚಿತ್ರ ತೆರೆಕಾಣಲೇ ಇಲ್ಲ.

ಬಳಿಕ ಬಾಬು ಸಂಪೂರ್ಣವಾಗಿ ತೆರೆಮರೆಗೆ ಸರಿದರು. ಶೂಟಿಂಗ್ ಅವಘಡದ ವೇಳೆ ಬಾಬುಗೆ ೩೦ರ ಹರೆಯ. ಅವರು ತನ್ನ ಬದುಕಿನ ಭಾಗಶಃ ಅರ್ಧ ಆಯಸ್ಸನ್ನು ಹಾಸಿಗೆಯಲ್ಲಿ ಕಳೆಯುಂತಾಯಿತು. ಕಳೆದ ಸೆಪ್ಟಂಬರ್ ೧೯ರಂದು ಕೊನೆಯುಸಿರೆಳೆದಾಗ ಬಾಬು ಅವರಿಗೆ ೬೦ ವರ್ಷ ಪ್ರಾಯವಾಗಿತ್ತು. ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಯುವನಟನ ಬದುಕನ್ನು ಅದೊಂದು ಅಪಘಾತ ಕಿತ್ತುಕೊಂಡಿತ್ತು.

ಈ ನಡುವೆ ಬಾಬು ಜೀವನಕ್ಕೆ ಮುಳುವಾದ ‘ಮನಸಾರ ವಾಳುತುಗಳೇನ್’ ಸಿನೆಮಾ ಬಳಿಕ ತೆರೆಕಂಡಿತ್ತು. ಆದರೆ ಬಾಬು ನಟನೆಯಲ್ಲಿ ಅಲ್ಲ. ಬದಲಿಗೆ ಕನ್ನಡದ ನಟ ರಾಮ್ಕುಮಾರ್ ನಟನೆಯಲ್ಲಿ ಅದು ಮರು ಚಿತ್ರೀಕರಣಗೊಂಡು 1991ರ ಸೆಪ್ಟಂಬರ್ನಲ್ಲಿ ಬಿಡುಗಡೆಗೊಂಡು ಸಾಧಾರಣ ಪ್ರದರ್ಶನ ಕಂಡಿತ್ತು.

share
ಎ.ಎಂ.ಹನೀಫ್, ಅನಿಲಕಟ್ಟೆ
ಎ.ಎಂ.ಹನೀಫ್, ಅನಿಲಕಟ್ಟೆ
Next Story
X