ಯುನೈಟೆಡ್ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರಾಗಿ ಖಾಜಿ ಅಬ್ದುಲ್ ಮಥೀನ್ ನೇಮಕ

ಕಾಪು : ಯುನೈಟೆಡ್ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಕಾಪು, ಮಲ್ಲಾರು ನಿವಾಸಿ ಸಖಾಜಿ ಅಬ್ದುಲ್ ಮಥೀನ್ ನೇಮಕಗೊಂಡಿದ್ದಾರೆ.
ಖಾಜಿ ಅಬ್ದುಲ್ ಮತೀನ್ ಅವರು ಕಳೆದ ಹಲವಾರು ವರ್ಷಗಳಿಂದ ಕುಸ್ತಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದು, ಭಾರತದಾದ್ಯಂತ ನಡೆಯುವ ಪ್ರಮುಖ ಕುಸ್ತಿ ಪಂದ್ಯಾವಳಿಗಳನ್ನು ಅನೇಕ ಕುಸ್ತಿಪಟುಗಳ ಬೆಳವಣಿಗೆಗೆ ಪಾತ್ರಾಗಿದ್ದಾರೆ.
ಭಾರತದಲ್ಲಿ ಕುಸ್ತಿ ಕ್ರೀಡೆಯ ಬೆಳವಣಿಗೆಗೆ ಶರದ್ ಪವಾರ್, ನಿತಿನ್ ಗಡ್ಕರಿ, ಮುಲಾಯಂ ಸಿಂಗ್ ಯಾದವ್ ಮತ್ತು ಸಂಸದ ರಾಮದಾಸ್ ತದಾಸ್ ಅವರಂತಹ ಅನೇಕ ಗಣ್ಯ ವ್ಯಕ್ತಿಗಳು ಐತಿಹಾಸಿಕವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ.
ತಮ್ಮ ನೇಮಕಾತಿಯ ಕುರಿತು ಮಾತನಾಡುತ್ತಾ, ಖಾಜಿ ಅಬ್ದುಲ್ ಮತೀನ್ ಅವರು ಹೀಗೆ ಹೇಳಿದರು, ಕ್ರಿಕೆಟ್ ನಂತರ, ಕುಸ್ತಿಯು ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಯುನೈಟೆಡ್ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮೂಲಕ, ನಾವು ಈ ಕ್ರೀಡೆಯನ್ನು ದೊಡ್ಡ ಮಟ್ಟದ ವೇದಿಕೆಗೆ ಕೊಂಡೊಯ್ಯುವ ಮತ್ತು ಪ್ರಮುಖ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸುವ ಗುರಿಯನ್ನು ಹೊಂದಿದ್ದೇವೆ. ಕ್ರೀಡಾಪಟು ಗಳನ್ನು ಬೆಂಬಲಿಸಲು ನಾವು ಶೀಘ್ರದಲ್ಲೇ 'ಪ್ಲೇಯರ್ ಅಡಾಪ್ಷನ್ ಸ್ಕೀಮ್ ಅನ್ನು ಪ್ರಾರಂಭಿಸಲಿದ್ದೇವೆ. ಜೊತೆಗೆ, ನಾವು ಮುಂಬೈನಲ್ಲಿ ಕೆಲವು ಪ್ರಮುಖ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲು ಯೋಜಿಸುತ್ತಿದ್ದೇವೆ. ದೇಶದಾದ್ಯಂತ ಇರುವ ಯುವ ಕುಸ್ತಿಪಟುಗಳನ್ನು ಬೆಳೆಸಲು ಫೆಡರೇಶನ್ ಬದ್ಧವಾಗಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಫೆಡರೇಶನ್ ಸಹಯೋಗದೊಂದಿಗೆ ಹಿಂದೂಸ್ತಾನ್ ಕೇಸರಿ, ದೇವಭಾವು ಕೇಸರಿ ಮತ್ತು ಸಂಕಟಮೋಚಕ ಕೇಸರಿಯಂತಹ ಪ್ರತಿಷ್ಠಿತ ಪಂದ್ಯಾವಳಿಗಳನ್ನು ಆಯೋಜಿಸಲು ನಮ್ಮ ಸಂಸ್ಥೆಯು ಬೆಂಬಲವಾಗಿ ಅವರೊಂದಿಗೆ ನಿಲ್ಲಲಿದೆ ಎಂದು ಹೇಳಿದರು.






