ಮೇ 14ರಿಂದ ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

ಮಂಗಳೂರು: ಮಂಗಳೂರಿನ ವಿವಿಧೆಡೆ ಮೇ 14ರಂದು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ. ಹಾಗಾಗಿ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಅಂದರೆ ಬಿಜೈ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್ ಮತ್ತು ಅಳಕೆ ಉಪಕೇಂದ್ರದಿಂದ ಹೊರ ಡುವ ಎಲ್ಲಾ ಫೀಡರ್ ಹಾಗೂ ನೆಹರೂ ಮೈದಾನ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್, ಕದ್ರಿ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್ ಮತ್ತು ಕಂಕನಾಡಿ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್ ವ್ಯಾಪ್ತಿಯ ದ್ವಾರಕ ನಗರ, ಅಬ್ಬಕ್ಕನಗರ, ಕಲ್ಬಾವಿ, ಬಿಜೈ ನ್ಯೂ ರೋಡ್, ಸಂಕೈಗುಡ್ಡ, ಎಂಸಿಎಫ್ ಕಾಲನಿ, ಆನೆಗುಂಡಿ, ಬಿಜೈ ಚರ್ಚ್, ಬಿಜೈ ಮ್ಯೂಸಿಯಂ, ಭಾರತೀನಗರ, ಚಂದ್ರಿಕಾ ಬಡಾವಣೆ ರಸ್ತೆ, ಕೊಡಿಯಾಲ್ಬೈಲ್, ಕೊಡಿಯಾಲ್ಗುತ್ತು, ವಿವೇಕನಗರ, ಕೆಎಸ್ಆರ್ಟಿಸಿ, ಸಿ.ಜಿ. ಕಾಮತ್ ರೋಡ್, ಜೈಲ್ ರೋಡ್, ಎಂಜಿ ರಸ್ತೆ, ಲಾಲ್ಬಾಗ್ ರೋಡ್, ಬಲ್ಲಾಳ್ಬಾಗ್, ಮಾನಸ ಟವರ್ ಎದುರು, ನೆಲ್ಲಿಕಾಯಿ ರೋಡ್, ಸ್ಟೇಟ್ಬ್ಯಾಂಕ್, ಎ.ಬಿ. ಶೆಟ್ಟಿ ಸರ್ಕಲ್, ಮಂಗಳಾದೇವಿ ರಸ್ತೆ, ರೊಸಾರಿಯೋ, ರಾಜಲಕ್ಷ್ಮಿ ಟೆಂಪಲ್, ಮಹಾಲಿಂಗೇಶ್ವರ ಟೆಂಪಲ್ ರಸ್ತೆ, ಪಾಂಡೇಶ್ವರ ಕಟ್ಟೆ, ಅಮೃತ ನಗರ, ಪಾಂಡೇಶ್ವರ ನ್ಯೂ ರೋಡ್, ಕಸಾಯಿಗಲ್ಲಿ, ಗಾಂಧಿಸನ್ಸ್, ಬೀಬಿ ಅಲಾಬಿ ರಸ್ತೆ, ಬಂದರ್ ಪೊಲೀಸ್ ಸ್ಟೇಷನ್, ಮಿಷನ್ ಸ್ಟ್ರೀಟ್, ಗೋಳಿಕಟ್ಟ ಬಜಾರ್, ಟಿ.ಟಿ. ರಸ್ತೆ, ಜೈನ್ ಬಸ್ತಿ, ವೆನ್ಲಾಕ್, ಲೇಡಿಗೋಷನ್ ಬಳಿ, ಲೋವರ್ ಕಾರ್ಸ್ಟ್ರೀಟ್, ಸುಜೀರ್ಕಾರ್ ಟೈಲ್ಸ್, ಅಜೀಜುದ್ದೀನ್ ರಸ್ತೆ, ಛೇಂಬರ್ ರಸ್ತೆ, ಕಂಡತ್ಪಳ್ಳಿ, ದಕ್ಕೆ, ನೀರೇಶ್ವಲ್ಯ ರಸ್ತೆ, ಗೂಡ್ಶೆಡ್ ರಸ್ತೆ, ಓಲ್ಡ್ ಪೋರ್ಟ್, ಬಿ.ಎಂ. ಕ್ರಾಸ್ ರಸ್ತೆ, ಸೆಂಟ್ರಲ್ ಟಾಕೀಸ್, ಮಾರ್ಕೆಟ್ ರಸ್ತೆ, ಜಿ.ಎಚ್.ರಸ್ತೆ, ಗೌರಿಮಠರಸ್ತೆ, ಭವಂತಿ ಸ್ಟ್ರೀಟ್, ಪಿ.ಎಂ. ರಾವ್ ರಸ್ತೆ, ಮೈದಾನ್ 3ನೇ ಕ್ರಾಸ್, ಸರ್ವಿಸ್ ಬಸ್ಸ್ಟ್ಯಾಂಡ್, ಮೈದಾನ್ 4ನೇ ಕ್ರಾಸ್, ಜಿಪಂ, ಮಿನಿ ವಿಧಾನ ಸೌಧ, ವೆಂಕಟರಮಣ ರಸ್ತೆ, ಫೆಲಿಕ್ಸ್ ಪೈ ಬಝಾರ್, ಗಣೇಶ್ ಬಝಾರ್, ರಾಘವೇಂದ್ರ ಮಠ, ಎಂ.ಜಿ ರಸ್ತೆ, ಕಾರ್ಸ್ಟ್ರೀಟ್, ಗಾಯತ್ರಿ ಟೆಂಪಲ್ ರಸ್ತೆ, ಬಿಷಪ್ ರಸ್ತೆ, ರಾಮಭವನ್, ಕೋರ್ಟ್ ರಸ್ತೆ, ಸಿಟಿ ಸೆಂಟರ್, ನವರತ್ನ ಪ್ಯಾಲೇಸ್, ಗಣೇಶ್ ಮಹಲ್, ಕಂಡತ್ ಪಳ್ಳಿ, ಲೋವರ್ ಕಾರ್ಸ್ಟ್ರೀಟ್, ಕೆಪಿಟಿ ಸರ್ಕಲ್, ಕಂಕನಾಡಿ, ವೆಲೆನ್ಸಿಯ, ಸೈಂಟ್ ಜೋಸೆಫ್ ನಗರ, ಗೋರಿಗುಡ್ಡ, ಉಜ್ಜೋಡಿ, ಹೈಲ್ಯಾಂಡ್, ಯುನಿಟಿ ಹಾಸ್ಪಿಟಲ್, ಅಥೆನಾ ಹಾಸ್ಪಿಟಲ್, ಫಾದರ್ ಮುಲ್ಲರ್ಸ್ ಆಸ್ಪತ್ರೆ, ವಾಸ್ಲೇನ್, ಬಲ್ಮಠ ಮಿಷನ್ ಕಾಂಪೌಂಡ್, ಬಲ್ಮಠ ನ್ಯೂರೋಡ್, ಕರಾವಳಿ ಸರ್ಕಲ್, ಕಂಕನಾಡಿ ಬೈಪಾಸ್ ರಸ್ತೆ, ಬೆಂದೂರುವೆಲ್, ಬಾಲಿಕಾಶ್ರಮ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಮೇ 14ರಂದು ಕಾವೂರು, ಕೂಳೂರು, ಮಾಲೆಮಾರ್; ವಿದ್ಯುತ್ ನಿಲುಗಡೆ
ಮಂಗಳೂರು: ಕಾವೂರು ವಿದ್ಯುತ್ ಕೇಂದ್ರದಿಂದ ಹೊರಡುವ ಕೂಳೂರು, ದೇರೆಬೈಲ್, ಮರಕಡ, ಮುಲ್ಲ ಕಾಡು, ಮಾಲೆಮಾರ್, ಕುಂಜತ್ತಬೈಲ್ ಮತ್ತು ಚಿಲಿಂಬಿ ವಿದ್ಯುತ್ ಮಾರ್ಗಗಳ ವ್ಯಾಪ್ತಿಯಲ್ಲಿ ಮೇ 14ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಮೇ 15ರಂದು ನಿಟ್ಟೂರು, ಮಧ್ವನಗರ : ವಿದ್ಯುತ್ ನಿಲುಗಡೆ
ಮಂಗಳೂರು: ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮದ್ವನಗರ ಹಾಗೂ ಕುಡ್ಸೆಂಪು ಫೀಡರ್ ವ್ಯಾಪ್ತಿಯಲ್ಲಿ ಮೇ 15ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಈ ಫೀಡರ್ ಮಾರ್ಗದಲ್ಲಿ ಆದಿ ಉಡುಪಿ-ಮಲ್ಪೆರಸ್ತೆ ಅಗಲೀಕರಣ ಪ್ರಯುಕ್ತ ಕಂಬಗಳನ್ನು ಬದಿಗೆ ಸ್ಥಳಾಂತರಿಸುವ ಕಾಮಗಾರಿಯನ್ನು
ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಮೂಡಬೆಟ್ಟು, ಆದಿಉಡುಪಿ, ಚೆನ್ಣಂಗಡಿ, ಬಂಕೇರಕಟ್ಟ, ಸಂಕೇಶ್ ಭಜನಾ ಮಂದಿರ,ಕಲ್ಮಾಡಿ ಗರಡಿ, ಮಲ್ಪೆ ಮುಖ್ಯರಸ್ತೆ, ಪಂದುಬೆಟ್ಟು, ಕಲ್ಮಾಡಿ, ಇನ್ಕಂ ಟ್ಯಾಕ್ಸ್ ಆಫೀಸ್ ಹತ್ತಿರ, ಕಿದಿಯೂರು, ಬಾಪುತೋಟ, ಬಂಕೇರಕಟ್ಟ, ಕೊಪ್ದಲ ತೋಟ, ಹಾರ್ಬರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಮೇ 16: ಮಧುವನ, ಬಾರ್ಕೂರು ಎಕ್ಸ್ಪ್ರೆಸ್ : ವಿದ್ಯುತ್ ನಿಲುಗಡೆ
ಮಂಗಳೂರು: ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್ಪ್ರೆಸ್ ಫೀಡರ್ ಮಾರ್ಗವ್ಯಾಪ್ತಿಯಲ್ಲಿ ಮೇ 16ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಈ ಫೀಡರ್ ವ್ಯಾಪ್ತಿಯ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ನೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.